ಸಂಪುಟ ಸ್ಥಾನಮಾನಕ್ಕಾಗಿ ಬಿಜೆಪಿಯಲ್ಲಿ ಜಂಗಿ ಕುಸ್ತಿ

ಇವು ರಾಜ್ಯದ ಜನತೆಯನ್ನು ಮತ್ತು ರಾಜಕಾರಣಿಗಳನ್ನು ಕಾಡುತ್ತಿರುವ ಉತ್ತರ ಸಿಗದ ಪ್ರಶ್ನೆಗಳು. ಇನ್ನೆರಡು ದಿನಗಳಲ್ಲಿ ಸಂಪುಟ ಪುನಾರಚನೆ ಆಗುವ ಸಂಭವನೀಯತೆ ಇರುವುದರಿಂದ ಬಿಜೆಪಿ ಪಾಳಯದಲ್ಲಿ ಈ ಕುರಿತು ಸಾಕಷ್ಟು ಚರ್ಚೆ, ಲೆಕ್ಕಾಚಾರ, ಕಸರತ್ತುಗಳು ನಡೆಯುತ್ತಿವೆ.
ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಈಶ್ವರಪ್ಪ, ಅನಂತ್ ಕುಮಾರ್, ಆರ್ ಅಶೋಕ್ ಮುಂತಾದವರು ಗಹನ ಮಾತುಕತೆಯಲ್ಲಿ ನಿರತರಾಗಿದ್ದಾರೆ. ಜಗದೀಶ್ ಶೆಟ್ಟರ್ ಬಣ ಶೇ.50ರಷ್ಟು ಸ್ಥಾನಗಳು ತಮಗೆ ಸಿಗಬೇಕೆಂದು ಪಟ್ಟು ಹಿಡಿದಿದೆ. ಈ ಸಮಸ್ಯೆಯನ್ನು ನೀವೇ ಬಗೆಹರಿಸಿಕೊಳ್ಳಿ ಎಂದು ಹೈಕಮಾಂಡ್ ಸ್ಪಷ್ಟ ಸೂಚನೆ ನೀಡಿದೆ.
ಆಡಳಿತಾತ್ಮಕ ಕೆಲಸದಲ್ಲಿ ನಿರತರಾಗಿರುವ ಸದಾನಂದ ಗೌಡರಿಗೆ ಸಂಪುಟ ಪುನಾರಚನೆಯ ಕಸರತ್ತು ಹೇಗೆ ಮಾಡುತ್ತಾರೆ ಮತ್ತು ಹೆವಿ ವೇಟ್ ಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬ ಬಗ್ಗೆ ಎಲ್ಲರ ಕಣ್ಣು ನೆಟ್ಟಿದೆ. ಈಗಾಗಲೆ ಅಶೋಕ್ ಹೊಂದಿರುವ ಗೃಹಖಾತೆ ಮತ್ತು ಯಡಿಯೂರಪ್ಪ ಹೊಂದಿದ್ದ ವಿತ್ತಖಾತೆಯ ಮೇಲೆ ಭಾರೀ ಪೈಪೋಟಿ ಆರಂಭವಾಗಿದೆ.












Click it and Unblock the Notifications