ಎಲ್ ಪಿಜಿ ಗೊಂದಲ, ಆಹಾರ ಇಲಾಖೆ ವಿರುದ್ಧ ಕೇಸ್ ಹಾಕುವೆ

ಅವೈಜ್ಞಾನಿಕ ಕ್ರಮಗಳನ್ನು ಅನುಸರಿಸಿ ಗ್ರಾಹಕರಿಗೆ ಇಲಾಖೆ ತೊಂದರೆ ಕೊಡುತ್ತಿದೆ. ಗ್ಯಾಸ್ ಕನೆಕ್ಷನ್ ಸಸ್ಪೆಂಡ್ ಆಗಿದೆ ಎಂದು ತಿಳಿದು ಎಲ್ಲರೂ ಅಪರಾಧಿ ಮನೋಭಾವಕ್ಕೆ ಸಿಲುಕಿ ಒದ್ದಾಡುತ್ತಿದ್ದಾರೆ. ಅಹಾರ ಇಲಾಖೆ ತಕ್ಷಣವೇ ಈ ದಾಖಲಾತಿ ಸಲ್ಲಿಕೆ ಕಾರ್ಯಕ್ಕೆ ಮುಕ್ತಾಯ ಹಾಡಬೇಕು ಎಂದು ವೇಣು ಗೋಪಾಲ್ ಆಗ್ರಹಿಸಿದ್ದಾರೆ.
ದೇಶದ ಎಲ್ಲಾ ನಾಗರಿಕರಿಗೆ ಇನ್ನೂ ಆಧಾರ್ ಚೀಟಿ ಸಿಕ್ಕಿಲ್ಲ. ಎಲೆಕ್ಟ್ರಿಸಿಟಿ ಮೀಟರ್ ನಂಬರ್(RR ನಂಬರ್) ಅನ್ನು ಮನೆ ವಿಳಾಸಕ್ಕೆ ಜೋಡಿಸುವುದು ಅವೈಜ್ಞಾನಿಕ. ಮೈಸೂರಿನಲ್ಲಿ ಗ್ಯಾಸ್ ಗೊಂದಲಕ್ಕೆ ಈಡಾಗಿ ಶೇ 45 ರಷ್ಟು ಮಂದಿ ಗೊಂದಲದಲ್ಲಿದ್ದಾರೆ. ಇಲಾಖೆ ಅಥವಾ ಸರ್ಕಾರ ತಕ್ಷಣವೇ ಈ ಬಗ್ಗೆ ಗಮನಹರಿಸಬೇಕು ಎಂದು ವೇಣುಗೋಪಾಲ್ ಹೇಳಿದರು.












Click it and Unblock the Notifications