ಸಂಜೆವರೆಗೂ ಕಾದು ನೋಡಿ ನಿಮಗೆ ಗೊತ್ತಾಗುತ್ತೆ: ಗೌಡ

ಬೆಂಗಳೂರು ವಿಜಯನಗರಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ ಸದಾನಂದ ಗೌಡರು ಶ್ರೀಗಳ ಆಶೀರ್ವಾದವನ್ನು ಪಡೆದರು. ಈ ಸಂದರ್ಭದಲ್ಲಿ ಅವರು ಮಾತನಾಡಿದ ಗೌಡರು, ಸಮಾರಂಭವನ್ನು ಯಾರೂ ಬಹಿಷ್ಕರಿಸುವುದಿಲ್ಲ. ನಮ್ಮಲ್ಲಿ ಯಾವುದೇ ಭಿನ್ನಮತವಿಲ್ಲ. ಪ್ರಮಾಣ ವಚನ ಸಮಾರಂಭದ ಬಹಿಷ್ಕಾರವಂತೂ ಇಲ್ಲವೇ ಇಲ್ಲ ಎಂದರು.
ಆದಿಚುಂಚನಗಿರಿ ಮಠಾಧೀಶ್ವರ ಬಾಲಗಂಗಾಧರ ಸ್ವಾಮಿಜಿಗಳು ಮಾತನಾಡುತ್ತಾ, ಉತ್ತಮ ಆಡಳಿತ ನೀಡಲು ಸದಾನಂದ ಗೌಡರು ಸಮರ್ಥರು. ಅವರ ಆಡಳಿತದ ಅವಧಿಯಲ್ಲಿ ರಾಜ್ಯ ಉತ್ತಮ ಪ್ರಗತಿಯತ್ತ ಮುನ್ನಡೆಯಲಿ ಎಂದು ಅಭಿಪ್ರಾಯಪಟ್ಟರು.












Click it and Unblock the Notifications