ಗಣಿ ಲೂಟಿ 3: ಧರಂ-ಕೃಷ್ಣ ಅವಧಿಯಲ್ಲಿ 5000 ಕೋಟಿ ರು.

Dharam Singh SM Krishna
ಬೆಂಗಳೂರು, ಆಗಸ್ಟ್ 01: ಧರಂಸಿಂಗ್‌ ಮುಖ್ಯಮಂತ್ರಿಯಾಗಿದ್ದ 2004-05 ಮತ್ತು 2005-06ರಲ್ಲಿ 1 ಕೋಟಿ ಮೆಟ್ರಿಕ್‌ ಟನ್‌ ಅದಿರು ಅಕ್ರಮವಾಗಿ ವಿದೇಶದ ಪಾಲಾಗಿದೆ. ಈ ಅವಧಿಯಲ್ಲಿ 5,000 ಕೋಟಿ ರೂ. ನಷ್ಟವುಂಟಾಗಿದ್ದು, ಅಕ್ರಮ ಗಣಿಗಾರಿಕೆ ಕುರಿತು 2008ರ ಡಿಸೆಂಬರಿನಲ್ಲಿ ಸಲ್ಲಿಸಲಾದ ಮಧ್ಯಂತರ ವರದಿಯಲ್ಲಿ ಧರಂಸಿಂಗ್‌ ಅಕ್ರಮದಲ್ಲಿ ಭಾಗಿಯಾಗಿದ್ದು, ಅವರಿಂದ 32 ಕೋಟಿ ರೂ. ನಷ್ಟ ತುಂಬಿಸಿಕೊಳ್ಳುವಂತೆ ಲೋಕಾಯುಕ್ತರು ಶಿಫಾರಸು ಮಾಡಿದ್ದರು.

ಆದರೆ ಅಂತಿಮ ವರದಿಯಲ್ಲಿ ಧರಂಸಿಂಗ್‌ ಅವಧಿಯಲ್ಲಿ ನಡೆದ ಅಕ್ರಮ ಅದಿರು ರಫ್ತಿ ಮಾಹಿತಿ ಮಾತ್ರ ಇದೆ. ಅಕ್ರಮ ಗಣಿಗಾರಿಕೆಯಲ್ಲಿ ಧರಂಸಿಂಗ್‌ ಪಾತ್ರ ಏನು ಎಂಬುದು ಸ್ಪಷ್ಟವಾಗಿಲ್ಲ.

ಕೃಷ್ಣ ಆಡಳಿತದಲ್ಲಿ 300 ಕೋಟಿ ರೂ. ನಷ್ಟ: ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದ 2003 -04ನೇ ಸಾಲಿನಲ್ಲಿ 22 ಲಕ್ಷ ಮೆಟ್ರಿಕ್‌ ಟನ್‌ ಅದಿರು ರಫ್ತಾಗಿದ್ದು, ಇದರಿಂದ ಸರ್ಕಾರದ ಬೊಕ್ಕಸಕ್ಕೆ 300 ಕೋಟಿ ರೂ. ನಷ್ಟವುಂಟಾಗಿದೆ.

ಆದರೆ ಲೋಕಾಯುಕ್ತ ವರದಿಯಲ್ಲಿ ಎಸ್‌.ಎಂ. ಕೃಷ್ಣ ಅವಧಿಯಲ್ಲಿ ಗಣಿ ಅಕ್ರಮ ನಡೆದಿರುವ ಕುರಿತು ಪ್ರಸ್ತಾಪಿಸಿಲ್ಲ. ಕೇವಲ ಅಕ್ರಮವಾಗಿ ಅದಿರು ರಫ್ತಾಗಿರುವ ಕುರಿತು ಮಾಹಿತಿ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+