ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜು.31ರಂದು ಯಡಿಯೂರಪ್ಪ ರಾಜೀನಾಮೆ ಖಚಿತ

By Prasad
|
Google Oneindia Kannada News

Yeddyurappa to resign on July 31
ಬೆಂಗಳೂರು, ಜು. 30 : ಆಷಾಢ ಕಳೆದು ಶ್ರಾವಣ ಮಾಸ ಆರಂಭವಾದ ದಿನ ಜುಲೈ 31ರಂದು ಮಧ್ಯಾಹ್ನ 4 ಗಂಟೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬೇಷರತ್ ರಾಜೀನಾಮೆ ನೀಡುವುದು ಖಚಿತವಾಗಿದೆ. ಬಿಜೆಪಿ ವರಿಷ್ಠರ ಒತ್ತಡ ತಂತ್ರಕ್ಕೆ ಯಡಿಯೂರಪ್ಪ ಮಣಿದಿರುವುದು ಸ್ಪಷ್ಟವಾಗಿದೆ.

ಯಡಿಯೂರಪ್ಪನವರೇ ತಮ್ಮ ಹಸ್ತಾಕ್ಷರದಲ್ಲಿ ಬರೆದಿರುವ ಹೇಳಿಕೆಯನ್ನು ಸಿಎಂ ನಿವಾಸದ ಎದಿರು ಬಸವರಾಜ್ ಬೊಮ್ಮಾಯಿ ಅವರು ಸುದ್ದಿಗಾರರೆದಿರು ಓದಿದರು. ಆದರೆ, ಯಡಿಯೂರಪ್ಪನವರು ಮಾಧ್ಯಮಗಳ ದೆಹಲಿಯಿಂದ ಮರಳಿದ ನಂತರ ಒಂದು ಬಾರಿಯೂ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿಲ್ಲ. ತಮ್ಮ ಬೆಂಬಲಿಗರ ಮುಖಾಂತರವೇ ಹೇಳಿಕೆಗಳನ್ನು ನೀಡುತ್ತಿದ್ದಾರೆ.

"ನಾನು ಜು.31ರಂದು ಭೀಮನ ಅಮವಾಸ್ಯೆ ಕಳೆದ ನಂತರ ರಾಜೀನಾಮೆ ನೀಡುವುದು ಖಚಿತ. ರಾಜೀನಾಮೆ ನೀಡುವುದಿಲ್ಲ ಎಂದು ಸಲ್ಲದ ವರದಿಗಳು ಪ್ರಕಟವಾಗುತ್ತಿವೆ. ಇಲ್ಲದ ಸುದ್ದಿಗಳಿಗೆ ಕಿವಿಯಾಗಬೇಡಿ" ಎಂದು ಯಡಿಯೂರಪ್ಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಹೇಳಿಕೆಯೊಂದಿಗೆ ರಾಜ್ಯ ರಾಜಕೀಯದಲ್ಲಿ ಯಡಿಯೂರಪ್ಪನವರ ಒಂದು ಅಧ್ಯಾಯ ಕೊನೆಗೊಂತಾಗಿದೆ. ಹೊಸ ಮುಖ್ಯಮಂತ್ರಿಯ ಆಯ್ಕೆಗೆ ಯಡಿಯೂರಪ್ಪನವರ ಈ ನಡೆ ದಾರಿ ಮಾಡಿಕೊಟ್ಟಿದೆ. ಹೊಸ ನಾಯಕನನ್ನು ನಾಳೆ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಆಯ್ಕೆ ಮಾಡಲಾಗುತ್ತಿದೆ. [ಹೊಸ ಮುಖ್ಯಮಂತ್ರಿ ಯಾರು?]

English summary
At last BS Yeddyurappa has surrendered to BJP high command and will be submitting his resignation on July 31 afternoon. In a press release read out by Basavaraj Bommai, BSY has made it clear that he would resign unconditionally.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X