ಜು.31ರಂದು ಯಡಿಯೂರಪ್ಪ ರಾಜೀನಾಮೆ ಖಚಿತ

Yeddyurappa to resign on July 31
ಬೆಂಗಳೂರು, ಜು. 30 : ಆಷಾಢ ಕಳೆದು ಶ್ರಾವಣ ಮಾಸ ಆರಂಭವಾದ ದಿನ ಜುಲೈ 31ರಂದು ಮಧ್ಯಾಹ್ನ 4 ಗಂಟೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬೇಷರತ್ ರಾಜೀನಾಮೆ ನೀಡುವುದು ಖಚಿತವಾಗಿದೆ. ಬಿಜೆಪಿ ವರಿಷ್ಠರ ಒತ್ತಡ ತಂತ್ರಕ್ಕೆ ಯಡಿಯೂರಪ್ಪ ಮಣಿದಿರುವುದು ಸ್ಪಷ್ಟವಾಗಿದೆ.

ಯಡಿಯೂರಪ್ಪನವರೇ ತಮ್ಮ ಹಸ್ತಾಕ್ಷರದಲ್ಲಿ ಬರೆದಿರುವ ಹೇಳಿಕೆಯನ್ನು ಸಿಎಂ ನಿವಾಸದ ಎದಿರು ಬಸವರಾಜ್ ಬೊಮ್ಮಾಯಿ ಅವರು ಸುದ್ದಿಗಾರರೆದಿರು ಓದಿದರು. ಆದರೆ, ಯಡಿಯೂರಪ್ಪನವರು ಮಾಧ್ಯಮಗಳ ದೆಹಲಿಯಿಂದ ಮರಳಿದ ನಂತರ ಒಂದು ಬಾರಿಯೂ ಮಾಧ್ಯಮಗಳ ಮುಂದೆ ಕಾಣಿಸಿಕೊಂಡಿಲ್ಲ. ತಮ್ಮ ಬೆಂಬಲಿಗರ ಮುಖಾಂತರವೇ ಹೇಳಿಕೆಗಳನ್ನು ನೀಡುತ್ತಿದ್ದಾರೆ.

"ನಾನು ಜು.31ರಂದು ಭೀಮನ ಅಮವಾಸ್ಯೆ ಕಳೆದ ನಂತರ ರಾಜೀನಾಮೆ ನೀಡುವುದು ಖಚಿತ. ರಾಜೀನಾಮೆ ನೀಡುವುದಿಲ್ಲ ಎಂದು ಸಲ್ಲದ ವರದಿಗಳು ಪ್ರಕಟವಾಗುತ್ತಿವೆ. ಇಲ್ಲದ ಸುದ್ದಿಗಳಿಗೆ ಕಿವಿಯಾಗಬೇಡಿ" ಎಂದು ಯಡಿಯೂರಪ್ಪ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಹೇಳಿಕೆಯೊಂದಿಗೆ ರಾಜ್ಯ ರಾಜಕೀಯದಲ್ಲಿ ಯಡಿಯೂರಪ್ಪನವರ ಒಂದು ಅಧ್ಯಾಯ ಕೊನೆಗೊಂತಾಗಿದೆ. ಹೊಸ ಮುಖ್ಯಮಂತ್ರಿಯ ಆಯ್ಕೆಗೆ ಯಡಿಯೂರಪ್ಪನವರ ಈ ನಡೆ ದಾರಿ ಮಾಡಿಕೊಟ್ಟಿದೆ. ಹೊಸ ನಾಯಕನನ್ನು ನಾಳೆ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಯಲ್ಲಿ ಆಯ್ಕೆ ಮಾಡಲಾಗುತ್ತಿದೆ. [ಹೊಸ ಮುಖ್ಯಮಂತ್ರಿ ಯಾರು?]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+