ಆಧಾರ್ ಗುರುತಿನ ಚೀಟಿ ನಕಲಿ ಮಾಡೋದು ಅಷ್ಟು ಸುಲಭವೇ?
ಬೆಂಗಳೂರು
ಜು 21: ಆಧಾರ್ ಯೋಜನೆಯ ಆಧಾರಕ್ಕೆ ಕೊಡಲಿ ಪೆಟ್ಟು ಕೊಡುವಂಥ ನಕಲಿ ಜಾಲವನ್ನು ನಗರದ ಪೊಲೀಸರು ಬೇಧಿಸಿದ್ದಾರೆ. ಆಧಾರ್ ಗುರುತಿನ ಚೀಟಿ (ಯುಐಡಿ)ಗಳನ್ನು ತಯಾರಿಸುತ್ತಿದ್ದ ಐದು ಮಂದಿ ವಂಚಕರನ್ನು ಹೈಗ್ರೌಂಡ್ಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. id="toptextpromo">ಆಧಾರ್
ಯೋಜನೆಯ ಉಪನಿರ್ದೇಶಕ ಅಶೋಕ ಅವರು ನೀಡಿದ ದೂರಿನ ಮೇರೆಗೆ, ಬನಶಂಕರಿ ಮೂರನೇ ಹಂತ ಹೊಸಕೆರೆಹಳ್ಳಿಯಲ್ಲಿ ಕಚೇರಿ ಹೊಂದಿದ್ದ ಗ್ಲೋಬಲ್ ಐಡಿ ಸಲ್ಯೂಷನ್ಸ್ನ ಪ್ರಾಣೇಶ್ (34), ಚಂಗರಾಜು (37), ಶಿವಾನಂದ ಶರ್ಮ (30), ಪೂರ್ಣಾನಂದ (35) ಮತ್ತು ಶಂಕರ ಶರವಣನ್ ಬಂಧಿತರು. ವಿನಯ್ ಚಾವ್ಲಾ, ಆನಂದ್ ಹಾಗೂ ಕಾರ್ತಿಕ್ ಎಂಬುವರು ನಾಪತ್ತೆಯಾಗಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಅವರಿಂದ
1,500 ಆಧಾರ್ ಕಾರ್ಡುಗಳು ಮತ್ತು ತಯಾರಿಕೆಗೆ ಬಳಸುತ್ತಿದ್ದ ಕಂಪ್ಯೂಟರ್ಗಳನ್ನು ವಶಪಡಿಸಿಕೊಳ್ಳಲಾಗಿದೆ.ಐಪಿಸಿ ಸೆಕ್ಷನ್ 419, 468, 471 ಹಾಗೂ 420 ಅನ್ವಯ ಕೇಸ್ ಹಾಕಲಾಗಿದೆ. ಹಲವೆಡೆ ಫ್ರಾಂಚೈಸಿಗಳನ್ನು ತೆರೆಯಲು 2.5 ಲಕ್ಷ ರೂ ಬೇಡಿಕೆ ಒಡ್ಡುತ್ತಿದ್ದರು ಎಂದು ತಿಳಿದು ಬಂದಿದೆ.











Click it and Unblock the Notifications