Get Updates
Get notified of breaking news, exclusive insights, and must-see stories!

ಒಂಟೆಗೆ ಮಂಗಳಾರತಿ ಎತ್ತಿದ ಭಾರಧ್ವಾಜ ಸ್ವಾಮೀಜಿ

Seer does Camel pooja
ಬೆಂಗಳೂರು ಜು 19: ಪ್ರಾಣಿ ಹಿಂಸೆ ಬೇಡ, ಎಲ್ಲಾ ಪ್ರಾಣಿಗಳಲ್ಲಿ ಭಗವಂತನನ್ನು ಕಾಣಬೇಕು ಎಂಬ ಸಂದೇಶ ಸಾರಲು ಒಂಟೆಗಳಿಗೆ ವಿಶೇಷವಾಗಿ ಪೂಜೆ ಮಾಡಿದ ಅಪರೂಪದ ಪ್ರಸಂಗ ಬಾಣಸವಾಡಿಯಲ್ಲಿ ಮಂಗಳವಾರ ನಡೆಯಿತು.

ಬಾಣಸವಾಡಿಯ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಅಂಬತ್ತೂರಿನ ಶ್ರೀಯೋಗಮಾಯಾ ಭುವನೇಶ್ವರೀ ಪೀಠದ ಪರಮಹಂಸ ಭಾರಧ್ವಾಜ ಸ್ವಾಮೀಜಿ ಅವರು ಎರಡು ಒಂಟೆಗಳಿಗೆ ಪೂಜೆ ನೆರವೇರಿಸಿದರು.[ಗ್ಯಾಲರಿ:ಒಂಟೆಗೆ ಪುಷ್ಪಾರ್ಚನೆ]

ನಾವು ದನಕರುಗಳಿಗೆ ಪೂಜೆ ಮಾಡುತ್ತೇವೆ. ಅದು ನಮ್ಮ ಕರ್ತವ್ಯ. ಗೋವಿನಲ್ಲಿ ಕಾಣುವ ಪೂಜ್ಯ ಭಾವನೆಯನ್ನು ಇತರ ಪ್ರಾಣಿಗಳಲ್ಲೂ ಕಾಣಬೇಕು, ಈ ಎಲ್ಲ ಪ್ರಾಣಿಗಳಲ್ಲಿ ಭಗವಂತನನ್ನು ಕಂಡಾಗ ಮನುಷ್ಯನಿಗೆ ನೆಮ್ಮದಿ ಸಿಗಲು ಸಾಧ್ಯ ಎಂದು ಸ್ವಾಮೀಜಿ ಅವರು ಹೇಳಿದರು.

ಹಿನ್ನೆಲೆ: ಒಂಟೆಗೆ ವಿಶೇಷವಾಗಿ ಪೂಜೆ ಸಲ್ಲಿಸಲು ಕಾರಣ ಇದೆ. ಮರುಭೂಮಿಯ ಹಡಗು ಎಂದೇ ಹೆಸರಾದ ಒಂಟೆಗಳು ಪ್ರಾಚೀನ ಕಾಲದಲ್ಲಿ ಸಾಮಗ್ರಿಗಳನ್ನು ಒಂದೂರಿನಿಂದ ಮತ್ತೊಂದು ಊರಿಗೆ ಸಾಗಿಸಲು ಬಳಸಲಾಗುತ್ತಿದ್ದ ವಾಹನವಾಗಿತ್ತು.

ಸರಕು ಸಾಗಾಟದಲ್ಲಿ ಕುದುರೆ, ಒಂಟೆಗಳು ಪ್ರಮುಖ ಪಾತ್ರ ವಹಿಸುತ್ತಿದ್ದವು. ಅವುಗಳು ಇಲ್ಲದಿದ್ದರೆ ಮನುಷ್ಯನ ಯಾವ ಕೆಲಸಗಳೂ ನಡೆಯುತ್ತಿರಲಿಲ್ಲ. ಪ್ರಾಣಿಗಳಿಗೆ ಹಿಂಸೆ ನೀಡದೆ ಇರುವುದೇ ಮಾನವ ಧರ್ಮ ಎಂದು ನಮ್ಮ ಪೂರ್ವಿಕರು ನಂಬಿದ್ದರು. ಋಗ್ವೇದದಲ್ಲಿ ಕೂಡ ಕುದುರೆ, ಒಂಟೆಗಳಿಗೆ ಪೂಜೆ ಸಲ್ಲಿಸಲಾಗುತ್ತಿದ್ದ ಉಲ್ಲೇಖ ಇದೆ.

ಆಧುನಿಕ ಸೌಲಭ್ಯಗಳು ಬರುವ ಮೊದಲು ಮನುಷ್ಯ ಸರಕು ಸಾಗಾಟ ಸಹಿತ ತನ್ನ ದಿನನಿತ್ಯದ ಅದೆಷ್ಟೋ ಕೆಲಸ ಕಾರ್ಯಗಳಿಗೆ ಪ್ರಕೃತಿ, ಪ್ರಾಣಿಗಳನ್ನು ಅವಲಂಬಿಸಿದ್ದ. ಆ ಉಪಕಾರ ಸ್ಮರಣೆಯನ್ನು ಮುಂದೆಯೂ ಮರೆಯಬಾರದು.

ಪ್ರಾಣಿಗಳ ವಧೆ, ಅವುಗಳಿಗೆ ಹಿಂಸೆ ನೀಡುವುದರ ಬದಲಿಗೆ ಅವುಗಳನ್ನು ಬದುಕಲು ಬಿಡಬೇಕು ಎಂಬ ಸಂದೇಶ ಸಾರುವುದಕ್ಕಾಗಿಯೇ ಈ ಒಂಟೆ ಪೂಜೆ ನಡೆಯಿತು. ಈ ರೀತಿ ಹಲವು ವಿಶೇಷ ರೀತಿಯ ಪೂಜೆಗಳನ್ನು ಮಾಡಲು ಸ್ವಾಮೀಜಿ ಉತ್ಸುಕರಾಗಿದ್ದಾರೆ. ಹೆಚ್ಚಿನ ಮಾಹಿತಿಗೆ 09884677555 ಸಂಪರ್ಕಿಸಬಹುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+