ಒಂಟೆಗೆ ಮಂಗಳಾರತಿ ಎತ್ತಿದ ಭಾರಧ್ವಾಜ ಸ್ವಾಮೀಜಿ

ಬಾಣಸವಾಡಿಯ ಸೀತಾರಾಮ ಕಲ್ಯಾಣ ಮಂಟಪದಲ್ಲಿ ಅಂಬತ್ತೂರಿನ ಶ್ರೀಯೋಗಮಾಯಾ ಭುವನೇಶ್ವರೀ ಪೀಠದ ಪರಮಹಂಸ ಭಾರಧ್ವಾಜ ಸ್ವಾಮೀಜಿ ಅವರು ಎರಡು ಒಂಟೆಗಳಿಗೆ ಪೂಜೆ ನೆರವೇರಿಸಿದರು.[ಗ್ಯಾಲರಿ:ಒಂಟೆಗೆ ಪುಷ್ಪಾರ್ಚನೆ]
ನಾವು ದನಕರುಗಳಿಗೆ ಪೂಜೆ ಮಾಡುತ್ತೇವೆ. ಅದು ನಮ್ಮ ಕರ್ತವ್ಯ. ಗೋವಿನಲ್ಲಿ ಕಾಣುವ ಪೂಜ್ಯ ಭಾವನೆಯನ್ನು ಇತರ ಪ್ರಾಣಿಗಳಲ್ಲೂ ಕಾಣಬೇಕು, ಈ ಎಲ್ಲ ಪ್ರಾಣಿಗಳಲ್ಲಿ ಭಗವಂತನನ್ನು ಕಂಡಾಗ ಮನುಷ್ಯನಿಗೆ ನೆಮ್ಮದಿ ಸಿಗಲು ಸಾಧ್ಯ ಎಂದು ಸ್ವಾಮೀಜಿ ಅವರು ಹೇಳಿದರು.
ಹಿನ್ನೆಲೆ: ಒಂಟೆಗೆ ವಿಶೇಷವಾಗಿ ಪೂಜೆ ಸಲ್ಲಿಸಲು ಕಾರಣ ಇದೆ. ಮರುಭೂಮಿಯ ಹಡಗು ಎಂದೇ ಹೆಸರಾದ ಒಂಟೆಗಳು ಪ್ರಾಚೀನ ಕಾಲದಲ್ಲಿ ಸಾಮಗ್ರಿಗಳನ್ನು ಒಂದೂರಿನಿಂದ ಮತ್ತೊಂದು ಊರಿಗೆ ಸಾಗಿಸಲು ಬಳಸಲಾಗುತ್ತಿದ್ದ ವಾಹನವಾಗಿತ್ತು.
ಸರಕು ಸಾಗಾಟದಲ್ಲಿ ಕುದುರೆ, ಒಂಟೆಗಳು ಪ್ರಮುಖ ಪಾತ್ರ ವಹಿಸುತ್ತಿದ್ದವು. ಅವುಗಳು ಇಲ್ಲದಿದ್ದರೆ ಮನುಷ್ಯನ ಯಾವ ಕೆಲಸಗಳೂ ನಡೆಯುತ್ತಿರಲಿಲ್ಲ. ಪ್ರಾಣಿಗಳಿಗೆ ಹಿಂಸೆ ನೀಡದೆ ಇರುವುದೇ ಮಾನವ ಧರ್ಮ ಎಂದು ನಮ್ಮ ಪೂರ್ವಿಕರು ನಂಬಿದ್ದರು. ಋಗ್ವೇದದಲ್ಲಿ ಕೂಡ ಕುದುರೆ, ಒಂಟೆಗಳಿಗೆ ಪೂಜೆ ಸಲ್ಲಿಸಲಾಗುತ್ತಿದ್ದ ಉಲ್ಲೇಖ ಇದೆ.
ಆಧುನಿಕ ಸೌಲಭ್ಯಗಳು ಬರುವ ಮೊದಲು ಮನುಷ್ಯ ಸರಕು ಸಾಗಾಟ ಸಹಿತ ತನ್ನ ದಿನನಿತ್ಯದ ಅದೆಷ್ಟೋ ಕೆಲಸ ಕಾರ್ಯಗಳಿಗೆ ಪ್ರಕೃತಿ, ಪ್ರಾಣಿಗಳನ್ನು ಅವಲಂಬಿಸಿದ್ದ. ಆ ಉಪಕಾರ ಸ್ಮರಣೆಯನ್ನು ಮುಂದೆಯೂ ಮರೆಯಬಾರದು.
ಪ್ರಾಣಿಗಳ ವಧೆ, ಅವುಗಳಿಗೆ ಹಿಂಸೆ ನೀಡುವುದರ ಬದಲಿಗೆ ಅವುಗಳನ್ನು ಬದುಕಲು ಬಿಡಬೇಕು ಎಂಬ ಸಂದೇಶ ಸಾರುವುದಕ್ಕಾಗಿಯೇ ಈ ಒಂಟೆ ಪೂಜೆ ನಡೆಯಿತು. ಈ ರೀತಿ ಹಲವು ವಿಶೇಷ ರೀತಿಯ ಪೂಜೆಗಳನ್ನು ಮಾಡಲು ಸ್ವಾಮೀಜಿ ಉತ್ಸುಕರಾಗಿದ್ದಾರೆ. ಹೆಚ್ಚಿನ ಮಾಹಿತಿಗೆ 09884677555 ಸಂಪರ್ಕಿಸಬಹುದು.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications