ಶಾಲೆಗಳಲ್ಲಿ ಭಗವದ್ಗೀತೆ ಪಾಠ : ಬೇಕಾ ಬೇಡವಾ?

ಶಿಕ್ಷಣ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ ನಯವಾಗಿ ಕೇಳಿಕೊಂಡಿದ್ದರೆ ಅಥವಾ ಮನಮುಟ್ಟುವಂತೆ ಕೇಳಿಕೊಂದ್ದರೆ ಒಪ್ಪುತ್ತಿದ್ದರೇನೋ. ಆದರೆ, 'ಒಪ್ಪದಿದ್ದರೆ ದೇಶ ಬಿಟ್ಟು ತೊಲಗಿ' ಎಂಬ ಮಾತಿನಿಂದ ಭಗವದ್ಗೀತೆಯನ್ನು ಒಪ್ಪದ ಸಂಘಟನೆಗಳೆಲ್ಲವೂ ಸರಕಾರದ ವಿರುದ್ಧ ತಿರುಗಿಬಿದ್ದಿವೆ.
ಭಗವದ್ಗೀತೆ ಪಠ್ಯವಾಗಿ ತರಬೇಕೆಂದಿದ್ದರೆ ಮುಸ್ಲಿಂ ಪವಿತ್ರ ಗ್ರಂಥ ಕುರಾನ್ ಮತ್ತು ಕ್ರಿಶ್ಚಿಯನ್ನರ ಬೈಬಲ್ ಎರಡನ್ನೂ ಪಠ್ಯವಾಗಿ ತರುವ ಧೈರ್ಯ ಮಾಡಿ ಎಂದು ಕೆಲ ಸಂಘಟನೆಗಳು ಸರಕಾರಕ್ಕೆ ಸವಾಲು ಹಾಕಿವೆ. ಭಗವದ್ಗೀತೆ ಎಂಬುದು ಯಾವುದೇ ಮತಕ್ಕೆ ಅಥವಾ ಧರ್ಮಕ್ಕೆ ಸೇರಿದ್ದಲ್ಲ ಎಂದು ಸ್ಪಷ್ಟೀಕರಣ ನೀಡಲಾಗುತ್ತಿದೆಯಾದರೂ ಕೇಳಲು ರೊಚ್ಚಿಗೆದ್ದವರು ತಯಾರಿಲ್ಲ.
ಸದ್ಯಕ್ಕೆ ಈ ಸರಕಾರಿ ಸುತ್ತೋಲೆಯನ್ನು ಪ್ರಶ್ನಿಸಿ ಕರ್ನಾಟಕ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಹೈಕೋರ್ಟ್ ಮೆಟ್ಟಿಲೇರಿದೆ. ಈ ಅರ್ಜಿಗೆ ಏನೆನ್ನುತ್ತೀರಿ ಎಂದು ಕೋರಿ ಸರಕಾರಕ್ಕೆ ನೋಟೀಸ್ ಕೂಡ ಕಳಿಸಲಾಗಿದೆ. ಈ ಪ್ರಕರಣ ಕುರಿತಂತೆ ಒಂದೂ ಮಾತು ಆಡದ ಮುಖ್ಯಮಂತ್ರಿ ಯಡಿಯೂರಪ್ಪ ಮಾರಿಷಸ್ ಗೆ ಮಜಾ ಮಾಡಲು ಹೋಗಿದ್ದಾರೆ.
ಮುಂದೆ ಏನಾಗಲಿದೆ? ಏನಾಗಬೇಕು? ಭಗವದ್ಗೀತೆಯನ್ನು ಬಲವಂತವಾಗಿ ಕಲಿಸಬೇಕೆ ಬೇಡವೆ? ಇತ್ಯಾದಿ ಪ್ರಶ್ನೆಗಳು ಓದುಗರನ್ನು ಸೇರಿದಂತೆ ಕರ್ನಾಟಕದ ಸಮಸ್ತ ಜನರನ್ನೂ ಕಾಡುತ್ತಿವೆ. ಇದೆಲ್ಲದರ ಜೊತೆ, ಈ ಧರ್ಮ ಗ್ರಂಥಗಳ ಗೊಡವೆಗೆ ಹೋಗದೆ 'ಲೈಂಗಿಕ ಶಿಕ್ಷಣ'ವನ್ನೂ ಪಠ್ಯವಾಗಿ ಪರಿಚಯಿಸಿ ಎಂದು ಮೂಲಭೂತವಾದಿಗಳಲ್ಲದ ಮುಕ್ತವಾದಿಗಳು ಬೇಡುತ್ತಿದ್ದಾರೆ. ಇದಕ್ಕೆ ನಿಮ್ಮ ಅಭಿಪ್ರಾಯವೇನು? ಕಾಮೆಂಟು ಜಾಗದಲ್ಲಿ ಬರೆಯಿರಿ.
-
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ -
KPSC- KEA: ಕೆಪಿಎಸ್ಸಿಗೆ ಬಿಗ್ ಶಾಕ್! ಕೃಷಿ ಇಲಾಖೆಯ 945 ಹುದ್ದೆಗಳ ನೇಮಕಾತಿ ಹೊಣೆ ಕೆಇಎಗೆ, ಮಹತ್ವದ ಆದೇಶ












Click it and Unblock the Notifications