ಡಿಎಂಕೆ ಕಾರ್ಯಕಾರಿಣಿ ಬಿರುಗಾಳಿಯಲ್ಲಿ ಪತರಗುಟ್ಟುವ ಸಾಧ್ಯತೆ

ಪಕ್ಷವು ಕರುಣಾನಿಧಿ ಉತ್ತರಾಧಿಕಾರಿ ಸಂಬಂಧ ಪುತ್ರರ ನಡುವಣ ಕಾಳಗದಿಂದ ಅಡಕತ್ತರಿಯಲ್ಲಿ ಸಿಲುಕಿದೆ. 2 ಜಿ ಹಗರಣ ಮತ್ತು ವಿಧಾನಸಭೆಯಲ್ಲಿ ಪಕ್ಷದ ಹೀನಾಯ ಸೋಲಿನಿಂದ ಪಕ್ಷ ಧೃತಿಗೆಟ್ಟಿದೆ. ಈಗಾಗಲೇ ಪುತ್ರ ಎಂಕೆ ಸ್ಟಾಲಿನ್ ಈ ಬಗ್ಗೆ ಸಾಕಷ್ಟು ರಾದ್ಧಾಂತ ಎಬ್ಬಿಸಿದ್ದಾನೆ. ಅತ್ತ ಅಳಗಿರಿ ಇತ್ತ ಕನಿಮೋಳಿಯಿಂದಾಗಿ ಕರುಣಾಗೆ ಧರ್ಮಸಂಕಟಗಳು ಹೆಚ್ಚಾಗಿವೆ.
ಇಂತಹ ಸಂಕಷ್ಟ ಸಮಯದಲ್ಲಿ ತಮ್ಮ ರಾಜಕೀಯ ಕಾರ್ಯದರ್ಶಿ, ಬಲಗೈ ಬಂಟ ಕೆ. ಷಣ್ಮುಗನಾಥನ್ ಅವರನ್ನು ಕರುಣಾನಿಧಿ ಹೆಚ್ಚಾಗಿ ಅವಲಂಬಿಸುತ್ತಾರೆ. ಆದರೆ ಅವರಿಗೂ ಹೇಳದೆ ಕೇಳದೆ ಕರುಣಾನಿಧಿ ಮಗನೊಂದಿಗೆ ಮುನಿಸಿಕೊಂಡು ಶಾಂತಿಯನ್ನರಸಿ ಮಹಾಬಲಿಪುರಂನಲ್ಲಿರುವ ರೆಸಾರ್ಟಿಗೆ ಏಕಾಂಗಿಯಾಗಿ ಪಾದ ಬೆಳೆಸಿದ್ದಾರೆ. ಕಳೆದ ವಾರ ಈ ಬೆಳವಣಿಗೆಗಳು ನಗರದಲ್ಲಿರುವ ಅಣ್ಣಾ ಅರಿವಾಲಯಂ ಪ್ರಧಾನ ಕಚೇರಿಯಲ್ಲಿ ನಡೆದಾದ ಬಳಿಕ, ಸ್ಟಾಲಿನ್ ಸಹ ಸಿಟ್ಟಿಗೆದ್ದು ಹೊರನಡೆದಿದ್ದಾರೆ ಎಂದು ಮೂಲಗಳು ಹೇಳಿವೆ.












Click it and Unblock the Notifications