ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಸ್ಫೋಟದಲ್ಲಿ ಆರೆಸ್ಸೆಸ್ ಕೈವಾಡ: ಉಲ್ಟಾ ಹೊಡೆದ ದಿಗ್ವಿಜಯ
ಆರೆಸ್ಸೆಸ್ ಕಾರ್ಯಕರ್ತ ಸುನಿಲ್ ಜೋಶಿ ಹತ್ಯೆ ಪ್ರಕರಣದಲ್ಲಿ ಕೆಲವು ಬಿಜೆಪಿ ನಾಯಕರು ಭಾಗಿಯಾಗಿದ್ದರು ಎಂಬುದು ಎನ್ಐಎ ತನಿಖೆಯಿಂದ ಬಹಿರಂಗಗೊಂಡಿದೆ. ಮಲೇಂಗಾವ್ ಸ್ಫೋಟದ ಬಗ್ಗೆ ಎಲ್ಲರಿಗೂ ತಿಳಿದಿದೆ. ಇನ್ನೂ ಹೆಚ್ಚಿನ ಮಾಹಿತಿ ಬೇಕಾದ್ದಲ್ಲಿ ಕೋರ್ಟ್ ಗೆ ಎಲ್ಲಾ ಮಾಹಿತಿ ನೀಡಲು ಸಿದ್ಧ. ಜು 13 ಸ್ಫೋಟ ಪ್ರಕರಣದ ವಿಚಾರಣೆ ಕೈಗೊಳ್ಳಲು ಎನ್ಐಎ ಹಾಗೂ ಮಹಾರಾಷ್ಟ್ರದ ಉಗ್ರ ನಿಗ್ರಹ ತಂಡಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಕಾದು ನೋಡಿ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದಾರೆ.
ದಿಗ್ವಿಜಯ್ ಸಿಂಗ್ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಆರೆಸ್ಸೆಸ್ ದೇಶಪ್ರೇಮಿ ಸಂಘಟನೆಯೇ ಹೊರತು ದೇಶದ್ರೋಹಿಯಲ್ಲ. ದಿಗ್ವಿಜಯ್ ಸಿಂಗ್ ಹೇಳಿಕೆ ಭಯೋತ್ಪಾದಕ ಸಂಘಟನೆಗಳಿಗೆ ನೆರವಾಗಲಿದೆ. ಎನ್ ಐಎ ತನಿಖೆಯ ದಿಕ್ಕು ತಪ್ಪಿಸುತ್ತದೆ ಎಂದು ಬಿಜೆಪಿ ವಕ್ತಾರ ಸಯ್ಯದ್ ಶಾನವಾಜ್ ಹುಸೇನ್ ಹೇಳಿದ್ದಾರೆ.
Comments
ಮುಂಬೈ ಸ್ಫೋಟ 2011 ದಿಗ್ವಿಜಯ್ ಸಿಂಗ್ ಭಯೋತ್ಪಾದನೆ ಬಿಜೆಪಿ mumbai blast 2011 digvijay singh rss terrorism bjp
English summary
Bharatiya Janta Party slammed Congress General Secretary Digvijay Singh for his comments that the involvement of Hindu outfits in Mumbai blasts 2011. Digvijay reacted strongly and said I said RSS not involved in this blasts but in other cases.
Story first published: Sunday, July 17, 2011, 10:49 [IST]