ಉಗ್ರರಿಗೆ ಸಂಖ್ಯೆ 13 ಶುಭ, ಅಮಾಯಕರಿಗೆ ರಾಹು ಕಾಟ

ಸಂಖ್ಯೆ 13, 7 ದುರದುಷ್ಟಕರ ಎಂದು ನಂಬಲಾಗಿದೆ. ಕೈಸ್ತರಲ್ಲಿ 666 ಕೂಡಾ ಅಶುಭ, ಇದು ಪೈಶಾಚಿಕ ಕೃತ್ಯಕ್ಕೆ ಹೇಳಿ ಮಾಡಿಸಿದ ಸಂಖ್ಯೆಯಂತೆ. ಮುಸ್ಲಿಮರಿಗೆ 786 ದೈವತ್ವದ ಸಂಖ್ಯೆ. ಹೀಗೆ ಸಂಖ್ಯಾಶಾಸ್ತ್ರದ ಪ್ರಕಾರ ಸೂರ್ಯ =1; ಚಂದ್ರ=2;ಗುರು=3;ರಾಹು=4;ಬುಧ=5;ಶುಕ್ರ=6;ಕೇತು=7;ಶನಿ=8;ಮಂಗಳ=9
ಉಗ್ರರಿಗೆ 13 ಹಾಗೂ 26 ಅಚ್ಚುಮೆಚ್ಚಿನ ದಿನಾಂಕ. ರಾಹು ಹಾಗೂ ಶನಿ ಕೃಪೆ ಪಡೆದ ಉಗ್ರರು ಭಾರತದಲ್ಲಿ ಅಟ್ಟಹಾಸ ಮೆರೆದಿದ್ದು ಈ ಎರಡು ದಿನಾಂಕಗಳಲ್ಲಿ ಎಂಬುದು ಗಮನಾರ್ಹ.
1+3=4 ಸಂಖ್ಯೆಯ ಅಧಿಪತಿ ರಾಹು, ಕ್ರೂರತೆಯ ಸಂಕೇತ. 2+6=ಸಂಖ್ಯೆಯ ಅಧಿಪತಿ ಶನಿ, ಅಂಧಕಾರ ಲೋಕಕ್ಕೆ ರಾಜ. ಮಂಗಳವಾರ ಹಾಗೂ ಶನಿವಾರ ಪಾತಕಿಗಳ ಅಚ್ಚುಮೆಚ್ಚಿನ ದಿನ. ಆದರೆ, 26/11 ಮುಂಬೈ ದಾಳಿಗೆ ವಿಶೇಷವಾಗಿ ಮಂಗಳವಾರ ಹಾಗೂ ಶನಿವಾರ ಬದಲು ಬುಧವಾರ ಆರಿಸಿದ್ದೇವೆ ಎಂದು ಉಗ್ರರು ಹೇಳಿಕೆ ನೀಡಿದ್ದರು. ನಿನ್ನೆ ಸಂಭವಿಸಿದ ಸರಣಿ ಸ್ಫೋಟ ನೋಡಿದ ಮೇಲೆ ಬಹುಶಃ ಬುಧವಾರ ಕೂಡಾ ಉಗ್ರರ ನೆಚ್ಚಿನ ದಿನ ಆಗುವ ಸಾಧ್ಯತೆಗಳು ಗೋಚರಿಸುತ್ತಿದೆ.
* 13 ಡಿಸೆಂಬರ್ 2001: ಮಂಗಳವಾರ; ಭಾರತೀಯ ಸಂಸತ್ತಿನ ಮೇಲೆ ದಾಳಿ(12 ಜನ ಸಾವು)
* 13 ಮೇ 2008: ಮಂಗಳವಾರ; ಜೈಪುರ ಬಾಂಬ್ ಸ್ಫೋಟ(68 ಜನ ಸಾವು)
* 26 ಜುಲೈ 2008: ಶನಿವಾರ; ಅಹಮದಾಬಾದ್ ಸ್ಫೋಟ(57 ಜನ ಸಾವು)
* 13 ಸೆಪ್ಟೆಂಬರ್ 2008: ಶನಿವಾರ; ದೆಹಲಿ ಸ್ಫೋಟ(13 ಜನ ಸಾವು)
* 26 ನವೆಂಬರ್ 2008: ಬುಧವಾರ; ಮುಂಬೈ ಸರಣಿ ಸ್ಫೋಟ(166 ಜನ ಸಾವು)
* 13 ಫೆಬ್ರವರಿ 2008:ಶನಿವಾರ; ಪುಣೆ ಸ್ಫೋಟ(9 ಜನ ಸಾವು)
ಮೂರು ವರ್ಷದಲ್ಲಿ ಮೂರು ಬಾರಿ ಸ್ಫೋಟ ನಡೆದಿದೆ. ಜುಲೈ 13, 2011; ಪುಣೆ ಫೆ.13, 2010,ನವದೆಹಲಿ, ಸೆ.13, 2008,ಜೈಪುರ ಮೇ 13,2008 ಹಾಗೂ 1993ರಲ್ಲಿ ಸರಣಿ ಸ್ಫೋಟ ಸಂಭವಿಸಿದ್ದು 13 ಕಡೆ. 4,8,9 ಸಂಖ್ಯೆ ಒಟ್ಟಿಗೆ ಸೇರಿದರೆ ಅನಾಹುತ ಗ್ಯಾರಂಟಿ.
ಗ್ಯಾಲರಿ : ಮುಂಬೈ ಸರಣಿ ಸ್ಫೋಟ 2011| ವಿಡಿಯೋಗಳು: ಉಗ್ರರ ಕೈವಾಡ| ಸಾವು ನೋವು | ಯಾರು ಹೊಣೆ|
13 ದಿನಾಂಕದಂದು ಭಾರತದಷ್ಟೇ ಅಲ್ಲ ವಿಶ್ವದ ಇತರೆಡೆ ಕೂಡಾ ಅನೇಕ ದುರಂತಗಳು ಸಂಭವಿಸಿದ ಉದಾಹರಣೆಗಳಿವೆ.
* ವಿಲ್ನಿಯಸ್, ಲಿಥ್ಯೂನಿಯಾ 1991: 13 ಜನ ಸಾವು, 140 ಜನ ಗಾಯಾಳು
* ಕೋಲ್ಕತ್ತಾ 1964: ಹಿಂದೂ ಮುಸ್ಲಿಂ ಘರ್ಷಣೆ ಸಾವಿರಕ್ಕೂ ಅಧಿಕ ಜನ ಸಾವು
* ಸಾಲ್ವಡರ್ 2001: 1000 ಜನ ಸಾವು, ಪ್ರಬಲ ಭೂಕಂಪ
* ಬಾಗ್ದಾದ್ 1991: ಅಮೆರಿಕ ಪಡೆ ದಾಳಿ, ನೂರಾರು ಜನ ಬಲಿ
* ಸ್ಕಾಟ್ಲೆಂಡ್ 1996: 16 ಶಾಲಾ ಮಕ್ಕಳ ಬಲಿ ತೆಗೆದುಕೊಂಡ ಗನ್ ಮ್ಯಾನ್
* ಪ್ಯಾಲೆಸ್ಟೇನ್ 1975: ಕ್ರೈಸ್ತ ಉಗ್ರವಾದಿಗಳು ಪ್ಯಾಲೆಸ್ಟೇನ್ ಗೆರಿಲ್ಲಾ ದಾಳಿ 17 ಜನ ಸಾವು
* 1981 ರೋಮ್: ಸಾರ್ವಜನಿಕ ಸ್ಥಳದಲ್ಲೇ ಪೋಪ್ ಹತ್ಯೆ
* 1992 ಇಂಗ್ಲೆಂಡ್: 31 ಸಾವಿರ ಗಣಿ ನೌಕರರು ಕೆಲಸದಿಂದ ವಜಾ
* 1985 ಕೊಲಂಬಿಯಾ: ಅಗ್ನಿಪರ್ವತ ಸ್ಫೋಟ, 20 ಸಾವಿರಕ್ಕೂ ಅಧಿಕ ಜನ ಸಾವು
-
March 21 Horoscope: 12 ರಾಶಿಗಳ ಇಂದುದಿನ ಭವಿಷ್ಯ – ಹಣ, ಆರೋಗ್ಯ, ಕೆಲಸದ ಫಲಿತಾಂಶ -
SWR: ವಿಜಯಪುರ-ಮಂಗಳೂರು ಎಕ್ಸ್ಪ್ರೆಸ್ ರೈಲು ಸಂಚಾರದಲ್ಲಿ ಭಾಗಶಃ ರದ್ದು, ವೇಳಾಪಟ್ಟಿ ಗಮನಿಸಿ -
ಜಿಯೋ, ಏರ್ಟೆಲ್ಗೆ ಸೆಡ್ಡು ಹೊಡೆಯಲು BSNL ಮಾಸ್ಟರ್ ಪ್ಲಾನ್: ವೊಡಾಫೋನ್ ಐಡಿಯಾ ಜತೆ ಮಹತ್ವದ ಹೆಜ್ಜೆ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
ಯುವತಿಯರ ಜೊತೆ ಸೆಕ್ಯೂರಿಟಿ ಗಾರ್ಡ್ ಭರ್ಜರಿ ಸ್ಟೆಪ್ಸ್: 'ಬೇಬಿ ಡಾಲ್' ಡ್ಯಾನ್ಸ್ ವಿಡಿಯೋ ಸಖತ್ Viral -
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
India Rain Forecast: ಮುಂದಿನ 5 ದಿನ ಈ ಭಾಗಗಳಲ್ಲಿ ವ್ಯಾಪಕ ಮಳೆ, ಉಷ್ಣ ಅಲೆ ಎಚ್ಚರಿಕೆ -
ಶೃಂಗೇರಿ ಮಠದಿಂದ ಶಾಲಾ ಮಕ್ಕಳಿಗೆ ಸುವರ್ಣಾವಕಾಶ: 'ರಾಮಾಯಣ ಪರೀಕ್ಷೆ' ಬರೆದು 50 ಸಾವಿರ ರೂ. ನಗದು ಗೆಲ್ಲಿ -
Vande Bharat Express: ಬೆಂಗಳೂರು-ಕಲಬುರಗಿ ಸೇರಿದಂತೆ 4 ರೈಲುಗಳ ವೇಳಾಪಟ್ಟಿ ಪರಿಷ್ಕರಣೆ -
ಕರ್ನಾಟಕ PGCET 2026 ಅಧಿಸೂಚನೆ ಪ್ರಕಟ: ಎಂಬಿಎ ಸೇರಿ ವಿವಿಧ ಸ್ನಾತಕೋತ್ತರ ಪದವಿ ಪ್ರವೇಶಾತಿಗೆ ಮಾರ್ಚ್ 23 ರಿಂದ ಅರ್ಜಿ ಆಹ್ವಾನ -
ವಿಶ್ವಮಾತೆ ಎನ್ನುತ್ತಾ ಶ್ರೀಚಾಮುಂಡೇಶ್ವರಿಯ ಕನ್ನಡ ಹಾಡು ಹಂಚಿಕೊಂಡ ಪ್ರಧಾನಿ ಮೋದಿ -
ಮಾರ್ಚ್ 21ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ












Click it and Unblock the Notifications