ಉಗ್ರರ ದಾಳಿ ತಡೆಯೋಕೆ ಸಾಧ್ಯವಿಲ್ಲ : ಕಾಂಗ್ರೆಸ್ ಯುವರಾಜ

Rahul Gandhi
ಭುವನೇಶ್ವರ ಜು 14: ಉಗ್ರರು ಏನು ಹೇಳಿಕೇಳಿ ದಾಳಿ ಮಾಡ್ತಾರಾ? ಸುಳಿವು ಸಿಗದಂತೆ ದಾಳಿ ನಡೆಸಿದರೆ ತಡೆಯೋಕೆ ಹೇಗೆ ಸಾಧ್ಯ? ನಮ್ಮ ಸರ್ಕಾರ ಬಂದ ಮೇಲೆ ಶೇ 99 ರಷ್ಟು ದಾಳಿಗಳನ್ನು,ಬಾಂಬ್ ಸ್ಫೋಟ ಆಗುವುದನ್ನು ತಪ್ಪಿಸಿದ್ದೇವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಹೇಳಿದ್ದಾರೆ.

ಶೇ 100 ರಷ್ಟು ದಾಳಿಗಳನ್ನು ತಪ್ಪಿಸಲು ಯಾರಿಗೂ ಸಾಧ್ಯವಿಲ್ಲ. ಮುಂಬೈ ಸರಣಿ ಸ್ಫೋಟದ ಬಗ್ಗೆ ಗೃಹ ಇಲಾಖೆಗೆ ಮುಂಚಿತವಾಗಿ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ಇದೊಂದು ಯೋಜಿತ ಕೃತ್ಯ ಎನಿಸಿದರೂ ಸರ್ಕಾರ ಎಲ್ಲಾ ರೀತಿ ಸಜ್ಜಾಗಿದೆ. ಪರಿಹಾರ ಕಾರ್ಯ ತಕ್ಷಣವೇ ನೀಡಲಾಗುತ್ತಿದೆ.

ಗ್ಯಾಲರಿ :
ಮುಂಬೈ ಸರಣಿ ಸ್ಫೋಟ 2011| ವಿಡಿಯೋಗಳು: ಉಗ್ರರ ಕೈವಾಡ| ಸಾವು ನೋವು | ಯಾರು ಹೊಣೆ|

ಯಾವುದೇ ಉಗ್ರ ಸಂಘಟನೆಗಳು ಘಟನೆಯ ಹೊಣೆ ಹೊತ್ತಿಲ್ಲ. ಸ್ಫೋಟಕ್ಕೆ ಅಮೋನಿಯಂ ನೈಟ್ರೇಟ್ ಬಳಸಿರುವ ಶಂಕೆ ವ್ಯಕ್ತವಾಗಿದೆ. ಹೆಚ್ಚಿನ ಮಾಹಿತಿ ಕಲೆ ಹಾಕುವಲ್ಲಿ ಅಧಿಕಾರಿಗಳು ನಿರತರಾಗಿದ್ದಾರೆ. ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಭದ್ರತಾ ವೈಫಲ್ಯ ಎಂದು ಸರ್ಕಾರವನ್ನು ದೂರುವುದು ಸರಿಯಲ್ಲ ಎಂದು ರಾಹುಲ್ ಹೇಳಿದ್ದಾರೆ.

ರಾಹುಲ್ ಹೇಳಿಕೆ ಟ್ವೀಟ್ ಮಾಡುತ್ತಿದ್ದಂತೆ. faking news ಕಡೆಯಿಂದ ಬಂದ ಉತ್ತರ ಹೀಗಿದೆ
"I apply brains 99% of the times before speaking, but 1% might get through" - Rahul Gandhi.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+