ಬಿದ್ದ ಕೋಟೆ ಬಾಗಿಲು ಕಟ್ಟುವುದು ಯಾರ ಹೊಣೆ?
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಂ.ಪಿ. ರವೀಂದ್ರ ಮತ್ತು ವಿಧಾನ ಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ ನೇತೃತ್ವದ ತಂಡ ಕೋಟೆಯ ಧ್ವಂಸಗೊಂಡಿರುವ ಹೆಬ್ಬಾಗಿಲ ಸ್ಥಳಕ್ಕೆ ಭೇಟಿ ನೀಡಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಗುರುವಾರ ಮಾತನಾಡಿದರು.
ಶತಮಾನಗಳಷ್ಟು ಇತಿಹಾಸ ಹೊಂದಿರುವ ಬಳ್ಳಾರಿ ಕೋಟೆ ಮತ್ತು ಅದರ ಹೆಬ್ಬಾಗಿಲು ಮಳೆಯಿಂದಾಗಿ ಬಿದ್ದಿಲ್ಲ. ಕೆಲ ದುಷ್ಕರ್ಮಿಗಳು ಈ ಬಾಗಿಲನ್ನು ಉದ್ದೇಶಪೂರ್ವಕವಾಗಿಯೇ ಬೀಳಿಸಿದ್ದಾರೆ. ರಾಯಚೂರು ಸಂಸದ ಸಣ್ಣಫಕ್ಕೀರಪ್ಪ ಅವರ ಮನೆಗೆ ಸುಲಭವಾಗಿ - ಸರಾಗವಾಗಿ ಸಾಗಲಿಕ್ಕಾಗಿ ಈ ಕೋಟೆ ಬಾಗಿಲನ್ನು ಧ್ವಂಸಗೊಳಿಸಲಾಗಿದೆ ಎಂದು ದೂರಿದರು. [ನೆಲಸಮವಾದ ಕೋಟೆಯ ಚಿತ್ರಪಟ]
ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಬಳ್ಳಾರಿ ಜಿಲ್ಲೆಯಾದ್ಯಂತ ಅರಾಜಕತೆ ನಿರ್ಮಾಣವಾಗಿದೆ. ನಗರದ ಹೃದಯಭಾಗದಲ್ಲಿಯ ಗಡಿಗೆ ಚೆನ್ನಪ್ಪ ವೃತ್ತವನ್ನು ಧ್ವಂಸ ಮಾಡಲಾಯಿತು. ಈ ಟವರ್ ಅನ್ನು ಪುನರ್ ನಿರ್ಮಾಣ ಮಾಡಿಕೊಡಲಾಗುತ್ತದೆ ಎಂದು ಮುಖ್ಯಮಂತ್ರಿಗಳು ಸದನದಲ್ಲಿ ಭರವಸೆ ನೀಡಿದ್ದರು.
ಆದರೆ,
ಕಾಮಗಾರಿ
ಈವರೆಗೆ
ಪ್ರಾರಂಭವಾಗಿಲ್ಲ.
ಈ
ಕುರಿತು
ಮುಖ್ಯಮಂತ್ರಿಗಳ
ವಿರುದ್ಧ
ಸದನದಲ್ಲಿ
ಪ್ರಿವಿಲೇಜ್ಡ್
ಮೋಷನ್
ಮೂವ್
ಮಾಡಲಾಗುತ್ತದೆ.
ಈಗ
ಕೋಟೆ
ಬಾಗಿಲನ್ನು
ಉದ್ಧೇಶಪೂರ್ವಕವಾಗಿಯೇ
ಜೆಸಿಬಿಗಳ
ಮೂಲಕ
ಧ್ವಂಸ
ಮಾಡಲಾಗಿದೆ.
ಪರಿಸ್ಥಿತಿ
ಹೀಗೇ
ಬಿಟ್ಟಲ್ಲಿ
ಮತ್ತಿನ್ಯಾವ
ಕಟ್ಟಡಗಳು
ಧ್ವಂಸಗೊಳ್ಳಲಿವೆಯೋ?
ಎಂದು
ಆತಂಕ
ವ್ಯಕ್ತಪಡಿಸಿದರು.
ನೀರಿನ
ಮೂಲ
ತಿಳಿಸಿ
:
ಗದಗ
ಜಿಲ್ಲೆಯ
ಮುಂಡರಗಿ
ತಾಲೂಕಿನಲ್ಲಿ
2
ಬೃಹತ್
ಕೈಗಾರಿಕೆಗಳು
ಪ್ರಾರಂಭಕ್ಕಾಗಿ
ಕೃಷಿಯೋಗ್ಯ
ಭೂಮಿಯನ್ನು
ಸರ್ಕಾರ
ಸ್ವಾಧೀನಕ್ಕೆ
ಪಡೆಯುತ್ತಿದೆ.
ಇದರ
ವಿರುದ್ಧ
ತೋಂಟದಾರ್ಯ
ಶ್ರೀಗಳು
ನಡೆಸುತ್ತಿರುವ
ಹೋರಾಟಕ್ಕೆ
ಜಿಲ್ಲಾ
ಕಾಂಗ್ರೆಸ್
ಬೆಂಬಲ
ವ್ಯಕ್ತಪಡಿಸಿದೆ.
ಈ
ಕೈಗಾರಿಕೆಗಳಿಗೆ
ನೀರಿನ
ಮೂಲ
ಯಾವುದು?
ಎನ್ನುವುದನ್ನು
ಸರ್ಕಾರ
ಸ್ಪಷ್ಟಪಡಿಸಬೇಕಿದೆ
ಎಂದರು.