ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಾಜನಗಳೇ ಮ್ಯಾಕ್ಸಿ ಕ್ಯಾಬ್ ಕಂಡರೆ ಕೈ ಒಡ್ಡಬೇಡಿ : ಅಶೋಕ್

By Mahesh
|
Google Oneindia Kannada News

Maxi Cab Ban Karnataka
ಬೆಂಗಳೂರು, ಜು.7: ತುಮಕೂರು ಗುಬ್ಬಿ ರಸ್ತೆಯಲ್ಲಿ ಸಂಭವಿಸಿದ ಭೀಕರ ಅಪಘಾತದ ನಂತರ ಪಾಠ ಕಲಿತಿರುವ ರಾಜ್ಯ ಸರ್ಕಾರ ಈಗ ಮ್ಯಾಕ್ಸಿ ಕ್ಯಾಬ್ ಗಳನ್ನು ನಿಷೇಧಿಸಲು ಮುಂದಾಗಿದೆ. ನಕಲಿ ಲೈಸನ್ಸ್, ಅಪಘಾತ, ತೆರಿಗೆ ವಂಚನೆ ಮುಂತಾದ ಅನೇಕ ಅವಘಡಕ್ಕೆ ಕಾರಣವಾಗಿರುವ ಮ್ಯಾಕ್ಸಿ ಕ್ಯಾಬ್ ಗಳನ್ನು ರಾಜ್ಯಾದ್ಯಂತ ನಿಷೇಧಿಸಲು ಗಂಭೀರ ಚಿಂತನೆ ನಡೆದಿದೆ ಎಂದು ಗೃಹ ಮತ್ತು ಸಾರಿಗೆ ಸಚಿವ ಆರ್.ಅಶೋಕ್ ಹೇಳಿದ್ದಾರೆ.

ತುಮಕೂರು ಜಿಲ್ಲೆಯಲ್ಲಿ ಈಗಾಗಲೇ ಮ್ಯಾಕ್ಸಿಕ್ಯಾಬ್ ಸಂಚಾರವನ್ನು ನಿಷೇಧಿಸಲಾಗಿದೆ. ರಾಜ್ಯಾದ್ಯಂತ ಹಂತ ಹಂತವಾಗಿ ಮ್ಯಾಕ್ಸಿಕ್ಯಾಬ್‌ನ್ನು ನಿಷೇಧಿಸಲಾಗುವುದು. ಏಕಾಏಕಿ ನಿಷೇಧ ಮಾಡಿದರೆ ಇದನ್ನೆ ನಂಬಿಕೊಂಡು ಬದುಕುತ್ತಿರುವ 10 ರಿಂದ 12 ಸಾವಿರ ಕುಟುಂಬಗಳು ಬೀದಿಪಾಲಾಗಬಹುದು. ಹಾಗಾಗಿ ಆ ಕುಟುಂಬಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕಿದೆ ಎಂದರು.

'ಮಹಾ ಜನರೆ ದಯವಿಟ್ಟು ಸರಕು ಸಾಗಣೆಗೆ ಬಳಸುವ ಮ್ಯಾಕ್ಸಿಕ್ಯಾಬ್‌ಗಳನ್ನು ಹತ್ತಬೇಡಿ. ನಿಮ್ಮ ಸಂಚಾರಕ್ಕೆ ತೊಂದರೆ ಉಂಟಾದರೆ ಸಾರಿಗೆ ಸಂಸ್ಥೆಯಿಂದ ಬಸ್ ಸೌಲಭ್ಯ ಹೆಚ್ಚಿಸಲಾಗುವುದು. ಮ್ಯಾಕ್ಸಿಕ್ಯಾಬ್‌ನಲ್ಲಿ ಜನರನ್ನು ಕರೆದೊಯ್ಯಲು ಯಾರೂ ಪರವಾನಗಿ ಪಡೆಯುತ್ತಿಲ್ಲ. ಸರ್ಕಾರ ವಂಚಿಸುವ ಕ್ಯಾಬ್ ಗಳಲ್ಲಿ ಸಂಚರಿಸಿದರೆ ನೀವು ಕೂಡಾ ವಂಚನೆಯಲ್ಲಿ ಭಾಗಿಯಾದಂತೆ, ಹಾಗಾಗಿ ಕ್ಯಾಬ್ ಹತ್ತುವ ಮುನ್ನ ಯೋಚಿಸಿ' ಎಂದು ಸಚಿವ ಅಶೋಕ್ ಹೇಳಿದ್ದಾರೆ.

ಲೋಕೋಪಯೋಗಿ ಇಲಾಖೆ ಪ್ರತಿ ಹಳ್ಳಿಯಲ್ಲೂ ಅಚ್ಚುಕಟ್ಟಾಗಿ ರಸ್ತೆ ನಿರ್ಮಿಸಿದರೆ, ಎಲ್ಲೆಡೆ ಬಸ್ ಸಂಚಾರ ಇಂದೇ ಆರಂಭಿಸುವೆ. ಈ ಬಗ್ಗೆ ಇಲಾಖೆಯೊಡನೆ ಚರ್ಚಿಸುತ್ತೇನೆ ಎಂದು ಅಶೋಕ್ ಹೇಳಿದರು.

English summary
Minister R Ashok said indicated that the Karnataka Government has proposed a ban on allowing passenger travel in Maxi Cabs. Roughly around 10 to 12,000 people make a living by ferrying passengers in maxi-cabs in the Karnataka. So, alternative living can be provided and we can curb illegal transporting, road accidents said the minister.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X