ಬಸ್ ಮಾಲೀಕರ ಲಾಬಿಗೆ ತಾಳತಪ್ಪುತ್ತಿರುವ ತಾಳಗುಪ್ಪ ರೈಲು

ಇಷ್ಟಾದ ಮೇಲೂ ತಾಳಗುಪ್ಪಕ್ಕೆ ರೈಲು ಸಂಚಾರ ಪ್ರಾರಂಭಿಸುವ ಯಾವ ಸೂಚನೆಗಳೂ ಕಾಣುತ್ತಿಲ್ಲ. ಕೆಲವು ದಿನಗಳ ಹಿಂದಷ್ಟೆ ಮೈಸೂರು-ತಾಳಗುಪ್ಪ ರೈಲು ಹಗಲು ವೇಳೆ ಸಂಚರಿಸುವ ವೇಳಾಪಟ್ಟಿ ಪ್ರಕಟವಾಯಿತು.ಆದರೆ ಆ ಪ್ರಕಟಣೆಯಲ್ಲೇ ಆ ರೈಲು ಪ್ರಾರಂಭವಾಗುವ ದಿನಗಳನ್ನು ನಂತರ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.
ಬೆಂಗಳೂರು-ಸಾಗರ ಮತ್ತು ತಾಳಗುಪ್ಪ ಮಧ್ಯೆ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಬೆಂಗಳೂರಿಗೆ ಪ್ರತಿದಿನ ಏಳೆಂಟು ಬಸ್ಸುಗಳು ಸಂಚರಿಸುತ್ತಿವೆ. ಆದರೆ ಮೇಲಿನ ಪ್ರಕಟಣೆಯಲ್ಲಿ ಬೆಂಗಳೂರು ಮತ್ತು ತಾಳಗುಪ್ಪ ನಡುವೆ ರೈಲು ಓಡಿಸುವ ಯಾವ ಪ್ರಸ್ತಾಪಗಳು ಇಲ್ಲದಿರುವುದು ಸಾಗರದ ಜನರಿಗೆ ನಿರಾಸೆ ಉಂಟುಮಾಡಿದೆ.
ಈ ವಿಳಂಬಕ್ಕೆ ಬಸ್ಸುಗಳ ಮಾಲೀಕರ ಲಾಬಿಯಿಂಗ್ ಕಾರಣ ಎಂಬ ಅನುಮಾನ ಅಲ್ಲಿಯ ಜನರ ಮಾತುಗಳಲ್ಲಿ ವ್ಯಕ್ತವಾಗುತ್ತಿದೆ. ಈ ಅನುಮಾನವನ್ನು ಸುಳ್ಳಾಗಿಸಲು ರೈಲ್ವೇ ಇಲಾಖೆಯವರು ಬೆಂಗಳೂರು-ತಾಳಗುಪ್ಪ ನಡುವೆ ರೈಲನ್ನು ಕೂಡಲೇ ಪ್ರಾರಂಭಿಸುತ್ತಾರೆಂದು ಆಶಿಸೋಣವೇ? ಹಾಗೆಯೇ ತಾಳಗುಪ್ಪ ಹೊನ್ನಾವರ ನಡುವೆ ರೈಲು ದಾರಿ ಪ್ರಾರಂಭಿಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ರೈಲ್ವೇ ಇಲಾಖೆ ಕೈಗೊಳ್ಳುತ್ತದೆಂದು ನಿರೀಕ್ಷಿಸಬಹುದೆ?












Click it and Unblock the Notifications