ತೆಲಂಗಾಣ ತಳಮಳ: 72 ಶಾಸಕರಿಂದ ರಾಜೀನಾಮೆ
ರಾಜ್ಯ ವಿಧಾನಸಭೆಯ ಸ್ಪೀಕರ್ ಮಲ್ಲು ಭಟ್ಟಿ ವಿಕ್ರಮಾರ್ಕ ಅವರಿಗೆ ಈ ಶಾಸಕರು ತಮ್ಮ ರಾಜೀನಾಮೆ ಪತ್ರಗಳನ್ನು ಜುಲೈ 4ರಂದು ಸಲ್ಲಿಸಿದ್ದಾರೆ.
ರಾಜೀನಾಮೆ ನೀಡಿದ ಕಾಂಗ್ರೆಸ್ ಸದಸ್ಯರ ಪೈಕಿ 11 ಮಂದಿ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿ ಅವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದಾರೆ. ಟಿಡಿಪಿಯ 4 ಭಿನ್ನಮತೀಯ ಶಾಸಕರೂ ರಾಜೀನಾಮೆ ಸಲ್ಲಿಸಿದ್ದು, ಒಟ್ಟು 72 ಶಾಸಕರು ರಾಜೀನಾಮೆ ನೀಡಿದ್ದಾರೆ. ಈ ಮಧ್ಯೆ, ರಾಜ್ಯಸಭಾ ಸದಸ್ಯ ಕೆ. ಕೇಶವ ರಾವ್ ಸಹ ರಾಜೀನಾಮೆ ಸಲ್ಲಿಸಿದ್ದಾರೆ.
ಇದೇ ವೇಳೆ, ತೆಲಂಗಾಣ ಭಾಗದ ಇನ್ನೂ 53 ಶಾಸಕರು ಮತ್ತು 9 ಕಾಂಗ್ರೆಸ್ ಸಂಸದರು ಇಂದು ಸಂಜೆ ವೇಳೆಗೆ ರಾಜೀನಾಮೆ ನಿಡುವ ಸಾಧ್ಯತೆಗಳಿವೆ. ಈ ಮಧ್ಯೆ ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ ಎಸ್) ಅಧ್ಯಕ್ಷ ಕೆ. ಚಂದ್ರಶೇಖರ್ ರಾವ್ ಮತ್ತು ಮೇಡಕ್ ಸಂಸದೆ, ನಟಿ ವಿಜಯಶಾಂತಿ ಅವರು ಇನ್ನೂ ರಾಜೀನಾಮೆ ಸಲ್ಲಿಸಿಲ್ಲ.
ಸಾಮೂಹಿಕ ರಾಜೀನಾಮೆ ಪರಿಣಾಮವಾಗಿ ರಾಜಕೀಯ ಮತ್ತು ಸಂವಿಧಾನಾತ್ಮಕ ಬಿಕ್ಕಟ್ಟು ತೀವ್ರವಾಗಿದೆ. ಮುಖ್ಯಮಂತ್ರಿ ರೆಡ್ಡಿ ಅವರ ತಲೆನೋವು ಹೆಚ್ಚಾಗಿದೆ. ಚಿರಂಜೀವಿ ನೇತೃತ್ವದ ಪ್ರಜಾರಾಜ್ಯಂ ಪಾರ್ಟಿಯ 17 ಶಾಸಕರು ರೆಡ್ಡಿಗೆ ಬೆಂಬಲ ನೀಡುವ ಸಾಧ್ಯತೆ ಇದೆಯಾದರೂ ರಾಜ್ಯ ಮತ್ತು ಕೇಂದ್ರದ ಎರಡೂ ಸರಕಾರಗಳಿಗೆ ವಿಷಯ ಪರಿಸ್ಥಿತಿ ತಲೆದೋರುವುದು ಖಚಿತವಾಗಿದೆ.
ಆಂಧ್ರ
ವಿಧಾನಸಭೆ
ಬಲ
-
294
ಕಾಂಗ್ರೆಸ್ನ
ಹಾಲಿ
ಬಲ
-
164
ತೆಲಂಗಾಣ
ಕಾಂಗ್ರೆಸ್
ಶಾಸಕರು
-
50
ಸರ್ಕಾರ
ರಚನೆಗೆ
ಬೇಕಿರುವ
ಬಲ
-
148