ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಶ್ರೀಕೃಷ್ಣದೇವರಾಯನ ನಿಧಿ ಅನಂತಪದ್ಮನಾಭ ದೇವಸ್ಥಾನದಲ್ಲಿ ಪತ್ತೆ!
'ಶ್ರೀ ಕೃಷ್ಣದೇವರಾಯ ಆಡಳಿತ ಕಾಲದ ಚಿನ್ನದ ನಾಣ್ಯಗಳೂ ಪತ್ತೆಯಾಗಿವೆ. 29- 9-1109 ಎಂಬ ದಿನಾಂಕವಿರುವ ಕೆತ್ತನೆಯೂ ಲಭಿಸಿದೆ. ವಿಜಯನಗರ ಸಾಮ್ರಾಜ್ಯದ ಹಲವು ಆಭರಣಗಳು ಮುಖ್ಯಪ್ರಾಣ ದೇವ ಅನಂತಪದ್ಮನಾಭ ಸ್ವಾಮಿಯನ್ನು ಅಲಂಕರಿಸಿವೆ' ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇದರಿಂದ, ಶ್ರೀ ಕೃಷ್ಣದೇವರಾಯ ತನಗೆ ಆಪತ್ತು ಒದಗಿರುವುದನ್ನು ಅರಿತು ತನ್ನ ಸಾಮ್ರಾಜ್ಯದ ಸಂಪತ್ತನ್ನು ಅನೇಕ ಆನೆಗಳ ಮೇಲೆ ಸಾಗಿಸಿದನು ಎಂಬುದಕ್ಕೆ ಇದು ಪುಷ್ಟಿ ನೀಡುತ್ತದೆ. ತನ್ನ ವಿಜಯನಗರ ಸಾಮ್ರಾಜ್ಯದ ಸಂಪತ್ತನ್ನು ಕೃಷ್ಣದೇವರಾಯನ ತಿರುಪತಿ ಬೆಟ್ಟಕ್ಕೂ ಸಾಗಿಸಿದ್ದ ಎಂದೂ ಅನೇಕ ಇತಿಹಾಸಕಾರರು ಈಗಾಗಲೇ ಅಭಿಪ್ರಾಯಪಟ್ಟಿರುವುದು ಇಲ್ಲಿ ದಾಖಲಾರ್ಹ.
Comments
English summary
The coins used during Vijayanagara King Krishnadevaraya are found in Padmanabhaswamy temple vaults says a report in 'The Hindu' dated July 4.
Story first published: Monday, July 4, 2011, 19:59 [IST]