ಬೆಲೆ ಏರಿಕೆ ಚಿಂತೆ- ಸಾಯೋಕೆ ಬಿಡಿ: ಬಿಜೆಪಿ ಸಂಸದ!

'ದೇಶದಲ್ಲಿನ ಬೆಲೆ ಏರಿಕೆ ಹಾಗೂ ವ್ಯಾಪಕ ಭ್ರಷ್ಟಾಚಾರ ಜನರನ್ನು ಸಾವಿನಂಚಿಗೆ ದೂಡಿದೆ. ನೀವು ದೇಶದ 115 ಕೋಟಿ ಜನರ ತಾಯಿ. ನಿಮಗೂ ಬೆಲೆ ಏರಿಕೆಯಿಂದ ದುಃಖ ಆಗಿರಬಹುದು' ಎಂದು ಹೇಳಿದ್ದಾರೆ.
ಕಾಂಗ್ರೆಸ್ ಲೇವಡಿ: ಝಾ ಅವರ ಈ ಬೇಡಿಕೆಯನ್ನು ರಾಜಕೀಯ ದೊಂಬರಾಟ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ. 'ಅವರಿಗೆ ಪಕ್ಷದ ಮುಖಂಡರೊಂದಿಗೆ ಭಿನ್ನಾಭಿಪ್ರಾಯ ಇರಬೇಕು. ಹಾಗಾಗಿ ಈ ಪತ್ರ ಬರೆದಿದ್ದಾರೆ. ಇಲ್ಲದಿದ್ದರೆ ಮಧ್ಯಪ್ರದೇಶದಲ್ಲಿರುವ ತಮ್ಮ ಪಕ್ಷದ ಸರ್ಕಾರದ ಜತೆ ಮಾತನಾಡಿ ಮಮತಾ ಬ್ಯಾನರ್ಜಿ ಅವರಂತೆ ರಾಜ್ಯದಲ್ಲೂ ತೆರಿಗೆ ಇಳಿಸಲು ಮನವೊಲಿಸುತ್ತಿದ್ದರು' ಎಂದು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಕಾಂತಿಲಾಲ್ ಭೂರಿಯಾ ಹೇಳಿದ್ದಾರೆ.












Click it and Unblock the Notifications