ಗ್ಯಾಸ್ ಬೆಲೆ ಇಳಿಸಬೇಕಾ, ವೈ ಎಂದರು ಬಿಎಸ್ ವೈ

'ಏರಿದವನು ಇಳಿಯಲೇಬೇಕು ಎಂಬಾ ಮಾತನು ಸಾರುವನು' ಎಂಬ ವಿವೇಕವಾಣಿ ಏರಿದ ಬೆಲೆಗಳಿಗೆ ನಮ್ಮ ದೇಶದಲ್ಲಿ ಅನ್ವಯಿಸುವುದಿಲ್ಲ. ಆದರೂ, ಬಡವರ ಸಂಕಷ್ಟ ನೋಡಿ ಕೆಲ ರಾಜ್ಯಗಳು ಎಲ್ ಪಿಜಿ ಬೆಲೆಯನ್ನು ತುಸು ಇಳಿಸಿದ್ದು, ಬಡವನ ಕಣ್ಣೀರು ಕಪಾಳಕ್ಕಿಳಿಯದಂತೆ ತಡೆದಿವೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 16 ರು.ನಷ್ಟು ಇಳಿಸಿ ಬಡವರ ಮೇಲೆ ಮಮತೆ ತೋರಿದರು. ಕೇರಳ ಸರಕಾರ ಕೂಡ ಈ ಕುರಿತು ಚಿಂತಿಸುತ್ತಿದೆ. ಈಗ ತಾನೂ ಬಡವರ ಪರವಾಗಿದ್ದೇನೆ ಎಂದು ದೆಹಲಿ ಸರಕಾರ ಬಡತನ ರೇಖೆಗಿಂತ ಕೆಳಗಿರುವವರಿಗಾಗಿ 40 ರು. ಇಳಿಸಿ ಮಂಗಳವಾರ ಆದೇಶ ಹೊರಡಿಸಿದೆ.
ಆದರೆ, ನಮ್ಮ ಕರ್ನಾಟಕ ಸರಕಾರಕ್ಕೇನಾಗಿದೆ? ನಾವು ಬಡವರ ಪರವಾಗಿದ್ದೇವೆ ಎಂದು ಎದೆತಟ್ಟಿ ಹೇಳುವ ನಮ್ಮ ಮುಖ್ಯಮಂತ್ರಿ ಯಡಿಯೂರಪ್ಪನವರಿಗೇನಾಗಿದೆ? ಆಣೆ ಪ್ರಮಾಣ ಮಾಡುವುದರಿಂದ ಹಿಂದೆ ಸರಿದ ಯಡಿಯೂರಪ್ಪ ದಕ್ಷಿಣ ಕನ್ನಡ ತೀರ್ಥಯಾತ್ರೆಯ ಸಮಯದಲ್ಲಿ, ದೇವರ ಸನ್ನಿಧಿಯಲ್ಲಿ ಹೇಳಿದ್ದೇನು ಗೊತ್ತೆ?
"ನಾವ್ಯಾಕೆ ಬೆಲೆ ಕಡಿಮೆ ಮಾಡಬೇಕು? ಬೇಕಿದ್ದರೆ ಕೇಂದ್ರ ಸರಕಾರವೇ ಬೆಲೆ ಕಡಿಮೆ ಮಾಡಲಿ. ಎಲ್ ಪಿ ಜಿ ಬೆಲೆಯನ್ನು ಏರಿಸಿದ್ದೇ ಕೇಂದ್ರ ಸರಕಾರ" ಎಂದು ಹೇಳುತ್ತ ಪತ್ರಕರ್ತರಿಗೆ ದೊಡ್ಡ ನಮಸ್ಕಾರ ಮಾಡುತ್ತ ಕಾಲುಕಿತ್ತರು. ಇನ್ನು ಉಳಿದದ್ದು ತಿಳಿದುಕೊಳ್ಳುವುದು, ತಿಳಿದುಕೊಳ್ಳದೇ ಇರುವುದು ನಮ್ಮ ಜನರ ವಿವೇಚನೆಗೆ ಬಿಟ್ಟಿದ್ದು.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications