Get Updates
Get notified of breaking news, exclusive insights, and must-see stories!

ಸಿಎಂ, ಮಾಜಿ ಸಿಎಂ ಸಾಮಾನ್ಯ ಭಕ್ತರಂತೆ ಬರಲಿ: ಹೆಗ್ಗಡೆ

Veerendra Heggade
ಉಜಿರೆ, ಜೂ 25: "ಆಣೆ ಹಾಕಲು ಬಂದಾಗ ಪದ್ಧತಿ ಪ್ರಕಾರ ಕರ್ತವ್ಯ ನಿರ್ವಹಿಸುತ್ತೇನೆ. ನ್ಯಾಯ ತೀರ್ಮಾನದಲ್ಲಿ ಯಾವ ಸ್ಥಾನವನ್ನೂ ಪರಿಗಣಿಸದೆ ಎಲ್ಲಾ ಭಕ್ತರಿಗೂ ಸಮಾನ ತೀರ್ಪು ಕೊಡುವುದಷ್ಟೇ ನನ್ನ ಕರ್ತವ್ಯ" ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿಕೆ ನೀಡಿದ್ದಾರೆ.

"ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ಸಾಮಾನ್ಯ ಭಕ್ತರಂತೆ ಕ್ಷೇತ್ರಕ್ಕೆ ಬರಲಿ. ಮಂಜುನಾಥ, ಅಣ್ಣಪ್ಪಸ್ವಾಮಿಯ ಮುಂದೆ ಎಲ್ಲರೂ ಒಂದೇ. ಕ್ಷೇತ್ರಕ್ಕೆ ಬರುವ ಬಗ್ಗೆ ಎರಡೂ ಬಣದಿಂದ ಇದುವರೆಗೆ ಅಧಿಕೃತ ಮಾಹಿತಿ ಬಂದಿಲ್ಲ. ವಾಕ್ ಸತ್ಯ ಪ್ರಮಾಣಕ್ಕೆ ವ್ಯವಸ್ಥೆ ಮಾಡಲಾಗುವುದು, ಆ ಸಮಯದಲ್ಲಿ ನಾನೂ ಅಲ್ಲಿ ಉಪಸ್ಥಿತನಿರುತ್ತೇನೆ" ಎಂದರು.

"ಪ್ರಮಾಣಕ್ಕೆ ಬಂದ ಉಭಯ ಬಣದವರು ನೇತ್ರಾವತಿಯಲ್ಲಿ ಸ್ನಾನ ಮಾಡಿ ದೇವರಿಗೆ 11 ರೂಪಾಯಿ ಕಾಣಿಕೆ ಹಾಕಿ ಮಂಜುನಾಥನ ಎದುರು ನಿಂತು "ನಾನು ಸತ್ಯವನ್ನೇ ಹೇಳುತ್ತೇನೆ, ನಾನು ಸುಳ್ಳು ಹೇಳಿದರೆ ಸೂಕ್ತ ಶಿಕ್ಷೆ ನೀಡು" ಎಂದು ಪ್ರಮಾಣ ಮಾಡಬೇಕೆಂದು ಹೆಗ್ಗಡೆಯವರು ತಿಳಿಸಿದ್ದಾರೆ.

"ಮಾತು ಬಿಡ ಮಂಜುನಾಥ" ಎನ್ನುವ ನಂಬಿಕೆ ಇಲ್ಲಿ ದೊಡ್ಡದು. ದೇವರ ಸನ್ನಿಧಿಯಲ್ಲಿ ಪ್ರಮಾಣ ಮಾಡುವ ಮೊದಲು ಸಾಕಷ್ಟು ಎಚ್ಚರ ವಹಿಸಲಿ. ಅವರು ಮಾಡುವ ಪ್ರಮಾಣ ಮತ್ತು ಮಂಜುನಾಥನ ಮಧ್ಯೆ ಧರ್ಮಾಧಿಕಾರಿಯಾಗಿ ನಾನು ಸಾಕ್ಷಿಯಾಗಿರುವುದೇ ಹೊರತು ಸರಿಯೋ ತಪ್ಪೋ ಎಂದು ವಿಮರ್ಶೆ ಮಾಡುವುದಿಲ್ಲ" ಎಂದು ವೀರೇಂದ್ರ ಹೆಗ್ಗಡೆ ಸ್ಪಷ್ಟನೆ ನೀಡಿದ್ದಾರೆ.

"ನಾವಾಗಿ ಅವರನ್ನು ಆಮಂತ್ರಿಸಲಿಲ್ಲ, ಸಾಮಾನ್ಯ ಭಕ್ತರಂತೆ ಅವರು ಕ್ಷೇತ್ರಕ್ಕೆ ಬರಲಿ ಸೂಕ್ತ ವ್ಯವಸ್ಥೆ ಮಾಡಲಾಗುವುದು. ಯಾವುದೇ ವ್ಯವಹಾರದಲ್ಲಿ ಸರಿಯಾದ ನ್ಯಾಯ ಸಿಗದಾಗ 'ದೇವರು ಸತ್ಯದ ವಿಮರ್ಶೆ ಮಾಡಿ, ಮಂಜುನಾಥ ನ್ಯಾಯ ಕೊಡಲಿ' ಎಂದು ಪ್ರಾರ್ಥಿಸುವುದು ಆಣೆಮಾತು. ವಚನ ಭ್ರಷ್ಟರಾದರೆ ಇದೆ ಶಾಪವಾಗಿ ಪರಿಣಮಿಸಿ ಮುಂದೆ ಅನೇಕ ಕಷ್ಟ ನಷ್ಟ ಎದುರಿಸಬೇಕಾಗುತ್ತದೆ ಎನ್ನುವ ಪ್ರತೀತಿ ನಂಬಿಕೆ ನಮ್ಮಲ್ಲಿದೆ" ಎಂದು ಹೆಗ್ಗಡೆ ಹೇಳಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+