ಧರ್ಮಸ್ಥಳದಲ್ಲಿ ಏನಂತ ಆಣೆ ಮಾಡಲಿದ್ದಾರೆ ಅಂದರೆ...

ಯಡಿಯೂರಪ್ಪ ಅವರು ವಿಶ್ರಾಂತಿ ಬಯಸಿ ಕೊಟ್ಟಕಲ್ ಆಸ್ಪತ್ರೆಯಲ್ಲಿ ಇನ್ನೂ ಸರಿಯಾಗಿ ಕಾಲಿಟ್ಟಿರಲಿಲ್ಲ. ಆಗಲೇ 'ತಮ್ಮ ಭ್ರಷ್ಟಾಚಾರಗಳನ್ನು ಗುಪ್ತವಾಗಿಡಲು ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ನೋರು ತಮ್ಮ ಬಂಟ ಲೆಹರ್ ಸಿಂಗ್ ಮೂಲಕ ರಾಜಿ ಸಂಧಾನಕ್ಕೆ ಯತ್ನಿಸಿದ್ದರು' ಎಂದು ಎಚ್ ಡಿ ಕುಮಾರಸ್ವಾಮಿ ಬಾಂಬ್ ಸಿಡಿಸಿದ್ದರು. ವಿಶ್ರಾಂತಿ ಹಾಗಿರಲಿ ಯಡಿಯೂರಪ್ಪನವರ ನೆಮ್ಮದಿಯೂ ಪಾತಾಳ ಕಚ್ಚಿತು.
ಸ್ವತಃ ಲೆಹರ್ ಸಿಂಗ್ ಸೇರಿದಂತೆ ಬಿಜೆಪಿಯ ಅನೇಕ ನಾಯಕರು 'ಕುಮಾರ ಸಂಧಾನ'ಕ್ಕೆ ಇಲ್ಲ-ಬೆಲ್ಲ ಎಂದು ಸ್ಪಷ್ಟೀಕರಣ ಕೊಡುತ್ತಾ ಬಂದರಾದರೂ ಎಚ್ ಡಿಕೆ ಸುತಾಂ ಜಗ್ಗಲಿಲ್ಲ. ಇಲ್ಲ, ಇಲ್ಲ. ಯಡಿಯೂರಪ್ನೋರು ರಾಜಿ ಸಂಧಾನಕ್ಕೆ ಯತ್ನಿಸಿದ್ದರು ಅಂತಲೇ ಪಟ್ಟು ಹಿಡಿದರು. ಆಗ ಸಾಕ್ಷಾತ್ ಯಡಿಯೂರಪ್ಪನವರೇ ರಂಗಕ್ಕೆ ಇಳಿದರು.
ಎಚ್ ಡಿ ಕುಮಾರಸ್ವಾಮಿಗಳೇ, ನಿಮ್ಮದೆಲ್ಲ ಹಿಟ್ ಅಂಡ್ ರನ್ ಕೇಸ್ ಎಂದು ವರ್ತಮಾನ ಪತ್ರಿಕೆಗಳ ಮೂಲಕ ಜೂನ್ 18ರಂದು ಸರಕಾರಿ ಸವಾಲು ಎಸೆದರು. ಬನ್ನಿ, ಧರ್ಮಸ್ಥಳಕ್ಕೆ ಎಂದು ಕುಮಾರಸ್ವಾಮಿಗೆ ಪಂಥಾಹ್ವಾನ ನೀಡಿದ ಬಿಎಸ್ ವೈ ಮಂಜುನಾಥನ ಮೇಲೆ ಆಣೆ ಮಾಡಿ ಎಂದರು. ಆದರೆ, ಸ್ವತಃ ಮುಖ್ಯಮಂತ್ರಿಯೇ ಪತ್ರಿಕಾ ಜಾಹೀರಾತಿಗೆ ಒಂದು ಕೋಟಿ ರುಪಾಯಿಗೂ ಹೆಚ್ಚು ಹಣವನ್ನು ಸುರಿದಿದ್ದು, ಬೆಂಕಿಗೆ ತುಪ್ಪ ಸುರಿದಂತಾಗಿತ್ತು. 'ಇಷ್ಟಕ್ಕೂ, ಜಾಹಿರಾತಿಗೆ ದುಡ್ಡು ಯಾರದು ಯಡ್ಡಿಯೂರಪ್ಪ' ಎಂದು ಜನ ಯಕಾಮಕಾ ಕೇಳತೊಡಗಿದರು.
ಸೋ, ಹಾಗೆ ಆರಂಭ ಪಡೆದ ಆಣೆ-ಪ್ರಮಾಣ ಪ್ರಹಸನ ಮುಂದೆ ಭಾರಿ ಬೀದಿ ರಂಪಕ್ಕೆ ಹಾದಿಯಾಯಿತು. ಈ ಮಧ್ಯೆ, ಕುಮಾರ ಸಂಧಾನ ವಿಷಯ ಮರೆತುಹೋಯಿತೇ ಎಂದು ಕೇಳುವಂತಾಯಿತು. ಹಾಗಾಗಿಯೇ ಈಗ 'ಇಷ್ಟಕ್ಕೂ ಯಡಿಯೂರಪ್ಪ ಮತ್ತು ಎಚ್ ಡಿಕೆ ಜೋಡಿ ಏನಂತ ಆಣೆ ಪ್ರಮಾಣ ಮಾಡಲಿದ್ದಾರೆ?' ಎಂಬ ಕವಡೆ ಕಿಮ್ಮತ್ತಿನ ಪ್ರಶ್ನೆ ಉದ್ಭವವಾಗಿದೆ. ಇದಕ್ಕೆ ಉತ್ತರ ಸ್ಪಷ್ಟ ...
ಮಂಜುನಾಥನ ಮೇಲಾಣೆ, ಮೇಲ್ಮನೆಯ ಹಿರಿಯ ಸದಸ್ಯ ಲೆಹರ್ ಸಿಂಗ್ ಅವರ ಮೂಲಕವಾಗಲಿ ಅಥವಾ ಇನ್ಯಾವುದೇ ಮಾರ್ಗದಲ್ಲಿ ಕುಮಾರ ಸಂಧಾನಕ್ಕೆ ನಾನು ಯತ್ನಿಸಿಲ್ಲ ಎಂದು ಶ್ರೀಮಾನ್ ಯಡಿಯೂರಪ್ಪನವರು ಪ್ರಮಾಣ ಮಾಡಲಿದ್ದಾರೆ. ಇದೇ ವೇಳೆ, 'ಮಂಜುನಾಥನ ಮೇಲಾಣೆ, ಈ ಹಿಂದೆ ನಾನು ಹೇಳಿದಂತೆ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಬಲಗೈ ಬಂಟ ಲೆಹರ್ ಸಿಂಗ್ ಮೂಲಕ ನನ್ನೊಂದಿಗೆ ರಾಜಿ ಸಂದಾನಕ್ಕೆ ಯತ್ನಿಸಿದ್ದರು' ಎಂದು ಸನ್ಮಾನಕುಮಾರಸ್ವಾಮಿ ಅವರು ಪ್ರಮಾಣ ಮಾಡಬೇಕಾಗಿದೆ.
ಇದಕ್ಕೆ ಜೂನ್ 27ರಂದು ಮಂಜುನಾಥನಿಗೆ ಪ್ರಶಸ್ತವಾದ ಸೋಮವಾರದಂದು ಮಹೂರ್ತವೂ ನಿಗದಿಯಾಗಿದೆ. ಅಥವಾ ಚಿತ್ರದಲ್ಲಿರುವಂತೆಯೇ ಇಬ್ಬರೂ ಧೀಮಂತ ನಾಯಕರು ಕೈಯೆತ್ತಿ ಜನರನ್ನು ಮಂಗ್ಯಾ ಮಾಡ್ತಾರೋ, ಇಡೀ ಜಗತ್ತು ಕುತೂಹಲದಿಂದ ಕಾಯುತ್ತಿದೆ.
-
Sachin Tendulkar: ಅಭಿಷೇಕ್ ಶರ್ಮಾಗೆ ಕ್ರಿಕೆಟ್ ದೇವರು ಸಚಿನ್ ತೆಂಡ್ಯೂಲ್ಕರ್ ವಿಶೇಷ ಸಂದೇಶ -
Bengaluru Home: ಬೆಂಗಳೂರಲ್ಲಿ ಸ್ವಂತ ಮನೆಯ ಕನಸು ಕಾಣುತ್ತಿರುವವರಿಗೆ ಜಿಬಿಎ ಗುಡ್ನ್ಯೂಸ್: ಒಂಟಿ ಮನೆ ಯೋಜನೆ ಅಪ್ಡೇಟ್ಸ್ -
Petrol Price: ಇರಾನ್,ಅಮೆರಿಕ – ಇಸ್ರೇಲ್ ಯುದ್ಧ: ಕಚ್ಚಾ ತೈಲ ದರ ಏರಿಕೆ, ಭಾರತದಲ್ಲಿ ಪೆಟ್ರೋಲ್ ಬೆಲೆ ಶೀಘ್ರ 200 ರೂ. ? -
"ನನ್ನನ್ನೇಕೆ ಮದುವೆಗೆ ಕರೆದಿಲ್ಲ" ಎಂದು ದಬಾಯಿಸಿದ ಪುಟಾಣಿ ಅಭಿಮಾನಿ: ಮನೆಗೆ ಊಟಕ್ಕೆ ಆಹ್ವಾನಿಸಿದ ವಿಜಯ್ ದೇವರಕೊಂಡ-ರಶ್ಮಿಕಾ -
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
Suryakumar Yadav: ಮೀಟರ್ ಇದ್ರೆ ಮೈದಾನದಲ್ಲಿ ಅಭಿಮಾನಿಗಳ ಬಾಯಿ ಮುಚ್ಚಿಸಿ: ಮಿಚೆಲ್ ಸ್ಯಾಂಟ್ನರ್ಗೆ ಸೂರ್ಯ ಸವಾಲು -
ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ ಎಂಬ ಮಾತಿನಂತೆ ನಡೆದುಕೊಂಡ ಯುವರಾಜ್ ಸಿಂಗ್ ಶಿಶ್ಯ ಅಭಿಷೇಕ್ ಶರ್ಮಾ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
"ಬೆಂಗಳೂರು ಮಲಯಾಳಿಗರ ಹಬ್" ಎಂದ ಕೇರಳಿಗರು, ವೈರಲ್ ವಿಡಿಯೋ ನೋಡಿ ಕಣ್ಣು ಕೆಂಪಾಗಿಸಿದ ಕನ್ನಡಿಗರು -
Bengaluru Property: ಬೆಂಗಳೂರಿನ 510 ಕೋಟಿ ಮೌಲ್ಯದ 14 ಎಕರೆ ಭೂಮಿ ವಶಕ್ಕೆ ಪಡೆದ ಜಿಬಿಎ, ಕಾರಣವೇನು -
Jaggery: ಬೆಲ್ಲದಲ್ಲಿ ಕಲಬೆರಕೆಯ ಕೆಮಿಕಲ್, ಬಣ್ಣ, ಸಕ್ಕರೆ ಮಿಶ್ರಣ: ಪರಿಶೀಲನೆ ಮಾಡುವ ಸರಳ ವಿಧಾನಗಳು -
ಟಿ20 ವಿಶ್ವಕಪ್ 2026 ಭಾರತದ ಮುಡಿಗೆ: ಬಾಲ ಮುದುರಿಕೊಂಡ 'ಸೈಲೆಂಟ್' ಸ್ಯಾಂಟ್ನರ್












Click it and Unblock the Notifications