ಆ ಮಂಜುನಾಥ ಇಬ್ಬರಿಗೂ ಶಿಕ್ಷೆ ನೀಡಲಿ: ನ್ಯಾ. ಹೆಗ್ಡೆ

ಪತ್ರಕರ್ತರ ಜತೆ ಮಾತನಾಡಿದ ಅವರು, ಇಂತಹ ಮಾತುಗಳಿಂದ ಮಂಜುನಾಥನ ಬಗೆಗೆ ಇರುವ ನಂಬಿಕೆ ದೂರವಾಗುತ್ತದೆ. ರಾಜಕೀಯವನ್ನು ಇಲ್ಲಿ ತರಬಾರದು. ಇದು ದೇವಸ್ಥಾನದಲ್ಲಿ ಇತ್ಯರ್ಥವಾಗುವ ವಿಷಯವಲ್ಲ. ಇದಕ್ಕೆ ವಿಚಾರಣಾ ಆಯೋಗವನ್ನು ನೇಮಕ ಮಾಡಬೇಕು ಎಂದು ಪ್ರತಿಪಾದಿಸಿದರು. ಈ ಮಧ್ಯೆ, ಇಂದು (ಜೂ. 21) ನಡೆಯುವ ಲೋಕಪಾಲ ಸಮಿತಿಯ ಅಂತಿಮ ಸಭೆಯಲ್ಲಿ ಪಾಲ್ಗೊಳ್ಳಲು ನ್ಯಾ. ಹೆಗ್ಡೆ ಅವರು ದೆಹಲಿಗೆ ತೆರಳಿದರು.
ಇದೇ ವೇಳೆ, ರಾಜಕಾರಣಿಗಳು ದೇವರ ಮುಂದೆ ಪ್ರಮಾಣ ಮಾಡುತ್ತಾರೆ ಎಂಬ ವಿಚಾರ ಕರ್ನಾಟಕಕ್ಕೆ ಬಂದ ಮೇಲೆಯೇ ಗೊತ್ತಾಗಿದ್ದು' ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ಆಣೆ-ಪ್ರಮಾನ ಪ್ರಹಸನಕ್ಕೆ ಹೊಸ ರೂಪ ನೀಡಿದ್ದಾರೆ.












Click it and Unblock the Notifications