ಜನಾರ್ದನ ರೆಡ್ಡಿ ಹೆಲಿಕಾಪ್ಟರ್ ರುಕ್ಮಿಣಿ ನಾಪತ್ತೆ

ಜನಾರ್ದನ ರೆಡ್ಡಿ ಅವರು ಜಿಲ್ಲೆಯ ಹೂವಿನಹಡಗಲಿಯಲ್ಲಿ ಹಮ್ಮಿಕೊಂಡಿರುವ 'ನಿಮ್ಮೊಂದಿಗೆ ನಾವು" ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಗುರುವಾರ ಬೆಳಗ್ಗೆ 11.05ಕ್ಕೆ ಹವಂಭಾವಿಯ ಹೆಲಿಪ್ಯಾಡ್ನಿಂದ ಟೇಕಾಫ್ ಆಗಿದ್ದರು. ರುಕ್ಮಿಣಿ 11.35ರ ವೇಳೆಗೆ ಹೂವಿನಹಡಗಲಿಯಲ್ಲಿ ಲ್ಯಾಂಡ್ ಆಗಬೇಕಿತ್ತು.
ಆದರೆ, ಹೆಲಿಕಾಪ್ಟರ್ ವಾಯು ಮಾರ್ಗದಲ್ಲಿ ಹೊಸಪೇಟೆ ಸಮೀಪಿಸುತ್ತಿದ್ದಂತೆಯೇ ಏಕಾಏಕಿ ಸಿಗ್ನಲ್ ಪ್ರದೇಶದಿಂದ ಹೊರಕ್ಕೆ ತೆರಳಿತ್ತು. ಜಿಲ್ಲಾ ಉಸ್ತುವಾರಿ ಸಚಿವರ ಆಗಮನಕ್ಕಾಗಿ ಹೂವಿನಹಡಗಲಿಯಲ್ಲಿ ಕಾಯುತ್ತಿದ್ದ ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಡಾ. ಚಂದ್ರಗುಪ್ತ ಸೇರಿ ಎಲ್ಲಾ ಅಧಿಕಾರಿಗಳಲ್ಲಿ ಆತಂಕ ಸೃಷ್ಟಿಯಾಯಿತು.
ಇದೇ ಸಂದರ್ಭದಲ್ಲಿ ಜನಾರ್ದನ ರೆಡ್ಡಿ ಅವರ ಮನೆಯಲ್ಲೂ ಕೂಡ ಕೆಲ ಹೊತ್ತು ಗೊಂದಲ ನಿರ್ಮಾಣವಾಗಿ, ಅನೇಕರು ಮೌನಕ್ಕೆ ಶರಣಾಗಿದ್ದರು. ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮಿ ಅರುಣ ಅವರು ಸಚಿವರನ್ನು ಸಂಪರ್ಕಿಸಲು ನಿರಂತರ ಪ್ರಯತ್ನದಲ್ಲಿದ್ದರು. ಆದರೆ, ತೀವ್ರ ಒತ್ತಡಕ್ಕೆ ಒಳಗಾಗಿದ್ದ ಅವರು ದೇವರ ಮೊರೆ ಹೋಗಿದ್ದರು ಎನ್ನಲಾಗಿದೆ.
ಸುಮಾರು 12.35ರ ಸುಮಾರಿಗೆ ಹೆಲಿಕಾಪ್ಟರ್ ಹೂವಿನಹಡಗಲಿಯ ಆಗಸದಲ್ಲಿ ಹಾರಾಡುತ್ತಿದ್ದನ್ನು ಕಾಣಿಸಿದ ಎಲ್ಲರೂ ಹರ್ಷ ವ್ಯಕ್ತಪಡಿಸಿ, ಮುಗುಳ್ನಕ್ಕು ಪರಸ್ಪರ ಸಂಭ್ರಮಿಸಿದರು. ಅಲ್ಲದೇ, ಮೂಡಿದ್ದ ಆತಂಕ ಮರೆಯಾಗಿದ್ದಕ್ಕೆ ದೇವರಿಗೆ ಇದ್ದಲ್ಲಿಂದಲೇ ನಮಿಸಿ, ಭಕ್ತಿ ಸಮರ್ಪಿಸಿದರು. ಹೆಲಿಕಾಪ್ಟರ್ನಲ್ಲಿ ರೆಡ್ಡಿ ಅವರ ಜೊತೆಯಲ್ಲಿ ಸಂಸದೆ ಜೆ. ಶಾಂತ, ವಿಧಾನಪರಿಷತ್ ಸದಸ್ಯ ಮೃತ್ಯುಂಜಯ ಜಿನಗಾ ಅವರಿದ್ದರು.
ಇತ್ತ ಅವರ ಅಭಿಮಾನಿಗಳು, ಬಂಧುವರ್ಗ ಮತ್ತು ಕುಟುಂಬದ ಸದಸ್ಯರಲ್ಲಿ ನಗು ಮೂಡಿ, ಸಂಭ್ರಮಿಸುವಂತಾಯಿತು. ಇಷ್ಟಕ್ಕೂ ಈ ಸಮಸ್ಯೆಗೆ ಪೊಲೀಸ್ ಇಲಾಖೆ ನೀಡುವ ಕಾರಣ 'ಪೈಲೆಟ್ ಹೊಸಬ ಆಗಿರುವ ಕಾರಣ ಈ ಸಮಸ್ಯೆ ಕಾಣಿಸಿಕೊಂಡಿದೆ. ಅನಾಹುತ ಏನೂ ನಡೆದಿಲ್ಲ ಬಿಡಿ. ದೇವರು ದೊಡ್ಡವನಿದ್ದಾನೆ" ಎಂದು ನಿಟ್ಟಿಸಿರುಡುತ್ತಿದೆ.












Click it and Unblock the Notifications