ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಮನಿಸಿ: ಕೊಂಕಣ ರೈಲು ವೇಳಾಪಟ್ಟಿ ಬದಲಾಗಿದೆ

|
Google Oneindia Kannada News

ರೈಲು ವೇಳಾಪಟ್ಟಿ ಬದಲಾವಣೆ
ಮುಂಗಾರು ಮಳೆಯಲ್ಲಿನ ಸಂಭಾವ್ಯ ಅನಾಹುತಗಳನ್ನು ತಪ್ಪಿಸಲು ಕೊಂಕಣ ರೈಲ್ವೆ ತನ್ನ ರೈಲು ವೇಳಾಪಟ್ಟಿಯನ್ನು ಬದಲಾಯಿಸಿದೆ. ನೂತನ ವೇಳಾಪಟ್ಟಿ ಅಕ್ಟೋಬರ್ 31ರವರೆಗೆ ಮುಂದುವರೆಯಲಿದೆ. ಹೊಸ ವೇಳಾಪಟ್ಟಿಯನ್ನು ರೈಲ್ವೆ ಯಾತ್ರಿ ಸಂಘದ ಅಧ್ಯಕ್ಷರು ಪ್ರಕಟಿಸಿದ್ದಾರೆ.

ಜೂನ್ ಹತ್ತರಿಂದ ಅನ್ವಯವಾಗುವಂತೆ ತೊಕ್ಕೂರು ಮತ್ತು ದಿವಾ ಸ್ಟೇಷನ್ ನಡುವಿನ ರೈಲ್ವೆ ಸಮಯ ಬದಲಾಗಲಿದೆ. ಮತ್ಸ್ಯಗಂಧ ಎಕ್ಸ್ ಪ್ರೆಸ್(ಟ್ರೈನ್ ನಂ. 12620) ಇನ್ನು ಮುಂದೆ ಮಂಗಳೂರಿನಿಂದ ಅಪರಾಹ್ನ 12.50ಕ್ಕೆ ಹೊರಡಲಿದೆ. ಈ ಮೊದಲು ಇದು ಮಧ್ಯಾಹ್ನ 2.40ಕ್ಕೆ ಹೊರಡುತ್ತಿತ್ತು. ಇನ್ನು ಮುಂದೆ ಈ ರೈಲು ಉಡುಪಿಯಿಂದ ಅಪರಾಹ್ನ 2.22 ಗಂಟೆ(ಎರಡು ನಿಮಿಷ ನಿಂತು)ಗೆ ಹೊರಡಲಿದೆ.

ಕ್ರಮಾಂಕ 12619 ರೈಲು ಮಂಗಳೂರಿಗೆ ಬೆಳಗ್ಗೆ 10.15 ಗಂಟೆಗೆ ತಲುಪಲಿದೆ. ಈ ಹಿಂದೆ ಇದು ಮುಂಜಾನೆ 7.30 ಗಂಟೆಗೆ ತಲುಪುತ್ತಿತ್ತು. ಮಡಗಾಂವ್-ಮಂಗಳೂರು ಪ್ರಯಾಣಿಕ ರೈಲು(ಡೈಲಿ ಟ್ರೈನ್ ನಂಬರ್: 56641) ಮಂಗಳೂರು ಸೆಂಟ್ರಲ್ ಸ್ಟೇಷನ್ ಗೆ ರಾತ್ರಿ ಹತ್ತು ಗಂಟೆಗೆ ತಲುಪಲಿದೆ. ಇದು ಈ ಮೊದಲು ರಾತ್ರಿ 8.55 ನಿಮಿಷಕ್ಕೆ ಮಂಗಳೂರು ಸೆಂಟ್ರಲ್ ರೈಲ್ವೆ ಸ್ಟೇಷನ್ ಗೆ ತಲುಪುತ್ತಿತ್ತು.

English summary
Konkan Railway has changed its train timings from Friday ( 10th June) in order to avoid accidents during monsoon. The timings will be in force till October 31.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X