ಬಿಎಂಟಿಸಿಯಿಂದ ಯುಎಸ್ ಸಾರಿಗೆಗೆ ಸ್ಪರ್ಧೆ: ಅಶೋಕ್
ಇಂದಲ್ಲಾ ಅಂದ್ರೆ ನಾಳೆ ಅಥವಾ ಯಾವತ್ತಾದರೂ ಬಸ್ ಗಳಲ್ಲಿ ಚಿಲ್ಲರೆ ಸಮಸ್ಯೆ ಬಗೆಹರಿಸಲು ಸಾಧ್ಯವೇ? ಎಂಬ ಪ್ರಶ್ನೆಗೆ ಉತ್ತರಿಸಿದ ಅಶೋಕ್ ಸಾಹೇಬ್ರು, ಕಾಮನ್ ಮೊಬಿಲಿಟಿ ಕಾರ್ಡ್ ವಿಧಾನ ಜಾರಿಗೆ ತರಲಾಗುವುದು. ಹಣವಿಟ್ಟುಕೊಳ್ಳದೆ ಪ್ರೀಪೇಯ್ಡ್ ಕಾರ್ಡ್ ಬಳಸಿ ಪ್ರಯಾಣ ಬೆಳಸಬಹುದು ಎಂದು ಸಚಿವರು ಹೇಳಿದರು. ಆದರೆ, ಇದು ಜಾರಿಗೆ ಬರಲು ಕನಿಷ್ಠ ಒಂದು ವರ್ಷವಾದರೂ ಬೇಕು.
ಬಿಎಂಟಿಸಿ ಇಸ್ ಹೈಟೆಕ್ : ಈಗಾಗಲೇ ವಾಯುವಜ್ರ ಬಸ್ ಗಳಲ್ಲಿ ಉಚಿತ ಇಂಟರ್ ನೆಟ್ ವ್ಯವಸ್ಥೆ, ನಗರ ಸಾರಿಗೆ ಬಸ್ ಗಳಲ್ಲಿ ವಾಯ್ಸ್ ಅನೌನ್ಸ್ ಮೆಂಟ್ ಸಿಸ್ಟಮ್ ಅಳವಡಿಸಲಾಗಿದೆ. ಪ್ರಮುಖ ಮಾರ್ಗಗಳ ಬಸ್ ಗಳಿಗೆ ಜಿಪಿಎಸ್ ಅಳವಡಿಕೆ ಜಾರಿಯಲ್ಲಿದೆ. ನಮ್ಮ ಸೌಲಭ್ಯಗಳು ಮುಂದುವರಿದ ರಾಷ್ಟ್ರಗಳಲ್ಲಿ ಸಿಗುವ ಸೌಲಭ್ಯದಂತೆ ಇರುತ್ತದೆ.ಕಡಿಮೆ ದರದಲ್ಲಿ ವೋಲ್ವೋ, ಬೆಂಜ್ ಬಸ್ ಗಳಲ್ಲಿ ಪ್ರಯಾಣಕ್ಕೆ ಅವಕಾಶ ಕಲ್ಪಿಸಿದ ಸಾಧನೆ ಬಿಎಂಟಿಸಿ ಹೆಸರಿನಲ್ಲಿದೆ. ಎಂದು ಅಶೋಕ್ ಹೇಳಿದರು.
32 ಕೋಟಿ ರು. ವೆಚ್ಚದ ಬನಶಂಕರಿ ಬಸ್ ನಿಲ್ದಾಣ ಮುಂದಿನ ತಿಂಗಳು ಉದ್ಘಾಟನೆಯಾಗಲಿದೆ. ಇಂದು ಇಸ್ರೋ ಲೇಔಟ್ ನಲ್ಲಿ ಶಂಕುಸ್ಥಾಪನೆಗೊಂಡ 10 ಕೋಟಿ ರು ವೆಚ್ಚದ ಹೈಟೆಕ್ ಬಸ್ ನಿಲ್ದಾಣ ಮುಂದಿನ ವರ್ಷದೊಳಗೆ ಸಾರ್ವಜನಿಕ ಸೇವೆಗೆ ಮುಕ್ತವಾಗಲಿದೆ ಎಂದು ಅಶೋಕ್ ತಿಳಿಸಿದರು.