ಹಿಮಾಚಲದಲ್ಲಿ ಬಾಬಾ ಭೂಮಿ ಮುಟ್ಟುಗೋಲು : ಕಾಂಗ್ರೆಸ್

ಹಿಮಾಚಲಪ್ರದೇಶದಲ್ಲಿ ಬಾಬಾ ರಾಮದೇವ್ ಆಶ್ರಮಕ್ಕೆ ಅಲ್ಲಿನ ಬಿಜೆಪಿ ಸರ್ಕಾರ ಜುಜುಬಿ ಹಣಕ್ಕೆ ಎಕರೆಗಟ್ಟಲೆ ಜಮೀನು ನೀಡಿದೆ. ಸೋಲನ್ ಜಿಲ್ಲೆಯಲ್ಲಿ 59 ಎಕರೆ ಬೆಲೆಬಾಳುವ ಭೂಮಿಯನ್ನು ಬಾಬಾಗೆ ಜುಜುಬಿ ಹಣಕ್ಕೆ ಮಾರಾಟ ಮಾಡಿದೆ.
ಇದರ ಜತೆಗೆ ಹಿಮಾಚಲ ಪ್ರದೇಶದ ನಿವಾಸಿಗಳಲ್ಲದವರಿಗೆ ಸುಮಾರು 25 ಸಾವಿರ ಎಕರೆ ಭೂಮಿಯನ್ನು ಪರಭಾರೆ ಮಾಡಲಾಗಿದೆ. ರಾಜ್ಯದಲ್ಲಿ ಒಂದೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅದನ್ನು ಮರಳಿ ವಶಪಡಿಸಿಕೊಳ್ಳಲಾಗುವುದು ಕೌಲ್ ಸಿಂಗ್ ಹೇಳಿದ್ದಾರೆ.
ಬೇರೆ ರಾಜ್ಯದ ಜನರು ಭೂಮಿಯನ್ನು ಕೊಳ್ಳುವ ನಿರ್ಬಂಧವಿರುವ ಸೆಕ್ಷನ್ 118ರಡಿಯ ರಾಜ್ಯ ಭೂಸುಧಾರಣೆ ಮತ್ತು ಒಕ್ಕಲುತನ ಕಾಯ್ದೆಯನ್ನು ಹಾಲಿ ಬಿಜೆಪಿ ಸರ್ಕಾರ ಸಂಪೂರ್ಣ ಉಲ್ಲಂಘಿಸಿದೆ ಎಂದೂ ಕೌಲ್ ಸಿಂಗ್ ಆಪಾದಿಸಿದ್ದಾರೆ.












Click it and Unblock the Notifications