ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಮಾಚಲದಲ್ಲಿ ಬಾಬಾ ಭೂಮಿ ಮುಟ್ಟುಗೋಲು : ಕಾಂಗ್ರೆಸ್‌

By Srinath
|
Google Oneindia Kannada News

ramdev
ಧರ್ಮಶಾಲಾ, ಜೂನ್ 12: ಭ್ರಷ್ಟಾಚಾರದ ವಿರುದ್ಧ ಉಪವಾಸ ಸತ್ಯಾಗ್ರಹಕ್ಕಿಳಿದಿರುವ ಬಾಬಾ ರಾಮದೇವ್‌ ವಿರುದ್ಧ ಕಾಂಗ್ರೆಸ್‌ ಮುಗಿಬಿದ್ದಿದೆ. ಪಕ್ಷ ಮುಂದಿನ ಚುನಾವಣೆಯಲ್ಲಿ ಗೆದ್ದರೆ ಬಾಬಾಗೆ ನೀಡಲಾಗಿರುವ ಜಮೀನು ಮುಟ್ಟುಗೋಲು ಹಾಕಿಕೊಳ್ಳಲು ಕ್ರಮ ಕೈಗೊಳ್ಳಲಿದೆ ಎಂದು ಹಿಮಾಚಲ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಠಾಕೂರ್ ಕೌಲ್‌ ಸಿಂಗ್‌ ಹೇಳಿದ್ದಾರೆ.

ಹಿಮಾಚಲಪ್ರದೇಶದಲ್ಲಿ ಬಾಬಾ ರಾಮದೇವ್‌ ಆಶ್ರಮಕ್ಕೆ ಅಲ್ಲಿನ ಬಿಜೆಪಿ ಸರ್ಕಾರ ಜುಜುಬಿ ಹಣಕ್ಕೆ ಎಕರೆಗಟ್ಟಲೆ ಜಮೀನು ನೀಡಿದೆ. ಸೋಲನ್‌ ಜಿಲ್ಲೆಯಲ್ಲಿ 59 ಎಕರೆ ಬೆಲೆಬಾಳುವ ಭೂಮಿಯನ್ನು ಬಾಬಾಗೆ ಜುಜುಬಿ ಹಣಕ್ಕೆ ಮಾರಾಟ ಮಾಡಿದೆ.

ಇದರ ಜತೆಗೆ ಹಿಮಾಚಲ ಪ್ರದೇಶದ ನಿವಾಸಿಗಳಲ್ಲದವರಿಗೆ ಸುಮಾರು 25 ಸಾವಿರ ಎಕರೆ ಭೂಮಿಯನ್ನು ಪರಭಾರೆ ಮಾಡಲಾಗಿದೆ. ರಾಜ್ಯದಲ್ಲಿ ಒಂದೊಮ್ಮೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಅದನ್ನು ಮರಳಿ ವಶಪಡಿಸಿಕೊಳ್ಳಲಾಗುವುದು ಕೌಲ್‌ ಸಿಂಗ್‌ ಹೇಳಿದ್ದಾರೆ.

ಬೇರೆ ರಾಜ್ಯದ ಜನರು ಭೂಮಿಯನ್ನು ಕೊಳ್ಳುವ ನಿರ್ಬಂಧವಿರುವ ಸೆಕ್ಷನ್‌ 118ರಡಿಯ ರಾಜ್ಯ ಭೂಸುಧಾರಣೆ ಮತ್ತು ಒಕ್ಕಲುತನ ಕಾಯ್ದೆಯನ್ನು ಹಾಲಿ ಬಿಜೆಪಿ ಸರ್ಕಾರ ಸಂಪೂರ್ಣ ಉಲ್ಲಂಘಿಸಿದೆ ಎಂದೂ ಕೌಲ್‌ ಸಿಂಗ್‌ ಆಪಾದಿಸಿದ್ದಾರೆ.

English summary
The Himachal government (BJP) had given 96 bighas of prime land near Solan to Ramdev's Patanjali Yogpeeth Trust at a throwaway price, allege State Congress. Now congress vows to confiscate it once it comes to power.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X