ಅಣ್ಣಾ ಉಪವಾಸ ರಾಜ್ ಘಾಟ್ ಗೆ ಸ್ಥಳಾಂತರ

Anna Hazare
ನವದೆಹಲಿ, ಜೂನ್ 7: ಅಣ್ಣಾ ಹಜಾರೆ ಅವರು ಜನಲೋಕಪಾಲ ಮಸೂದೆ ಆಂದೋಲನವನ್ನು ಬುಧವಾರ (ಜೂನ್ 8) ಬೆಳಗ್ಗೆ ರಾಜಘಾಟ್ ಬಳಿ ಮುಂದುವರಿಸಲಿದ್ದಾರೆ ಎಂದು ಜನಲೋಕಪಾಲ ಕರಡು ಮಸೂದೆ ಸಮಿತಿ ಸದಸ್ಯ ಕೇಜ್ರಿವಾಲ್ ಪ್ರಕಟಿಸಿದ್ದಾರೆ.

ನಿಷೇದಾಜ್ಞೆ ಹೊರತಾಗಿ ರಾಜಘಾಟ್ ನಲ್ಲಿ ಪೊಲೀಸರೊಂದಿಗೆ ಘರ್ಷಣೆಯಲ್ಲಿ ತೊಡಗದೆ ಶಾಂತಿಯುತವಾಗಿ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ಉಪವಾಸ ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ. ಭಜನೆ, ಪ್ರಾರ್ಥನೆಗಳ ಜತೆ ಜತೆಗೆ 5 ಗಂಟೆಗೆ ಚರ್ಚಾ ಕಾರ್ಯಕ್ರಮವನ್ನೂ ಹಮ್ಮಿಕೊಂಡಿದ್ದೇವೆ ಎಂದು ಅವರು ತಿಳಿಸಿದರು.

ಈ ಮಧ್ಯೆ, ರಾಜಧಾನಿಯಲ್ಲಿ ಈಗಾಗಲೇ ನಿಷೇದಾಜ್ಞೆ ಜಾರಿಯಲ್ಲಿರುವುದರಿಂದ ಜಂತರ್ ಮಂತರ್ ನಲ್ಲಿ ಟೀಂ ಅಣ್ಣಾ ಉಪವಾಸ ಸತ್ಯಾಗ್ರಹಕ್ಕೆ ಅನುಮತಿ ನೀಡಲು ಸರಕಾರ ನಿರಾಕರಿಸಿತು. ಆದರೆ, ರಾಜಘಾಟ್ ಸುತ್ತಮುತ್ತ ನಿಷೇದಾಜ್ಞೆ ಇಲ್ಲದಿರುವುದರಿಂದ ಅಲ್ಲಿಗೆ ಸತ್ಯಾಗ್ರಹ ಸ್ಥಳವನ್ನು ಬದಲಾಯಿಸಲಾಗಿದೆ ಎಂದು ಟೀಂ ಅಣ್ಣಾ ಘೋಷಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+