ರಾಮದೇವ್ ಬಂಧನ: ದೆಹಲಿಯಲ್ಲಿ ಅರಾಜಕತೆ

ಬಾಬಾ ಬಂಧನದಿಂದ ಕೆರಳಿದ ಅನುಯಾಯಿಗಳನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಆಶ್ಚರ್ಯವೆಂದರೆ ನಿರಶನದಲ್ಲಿ ಪಾಲ್ಗೊಂಡಿದ್ದ ಮಹಿಳೆಯರನ್ನು ಲೆಕ್ಕಿಸದೆ ಪೊಲೀಸರು ಎಲ್ಲರ ಮೇಲೂ ಬಲ ಪ್ರಯೋಗ ಮಾಡಿದ್ದಾರೆ. ಮಹಿಳೆಯರ ವಿರುದ್ಧ ಕ್ರಮ ಕೈಗೊಳ್ಳುವ ವೇಳೆ ಒಬ್ಬೇ ಒಬ್ಬ ಮಹಿಳಾ ಪೊಲೀಸ್ ಸ್ಥಳದಲ್ಲಿರಲಿಲ್ಲ. ಎಲ್ಲ ಪುರುಷ ಪೊಲೀಸರದ್ದೇ ಕಾರುಬಾರು ನಡೆದಿದೆ.
ಭದ್ರತೆಯ ದೃಷ್ಟಿಯಿಂದ ಉಪವಾಸಕ್ಕೆ ನೀಡಿದ್ದ ಒಪ್ಪಿಗೆಯನ್ನು ವಾಪಸ್ ತೆಗೆದುಕೊಳ್ಳಲಾಗಿದ್ದು, ನಿರಶನ ನಿರತ ಬಾಬಾ ಅನುಯಾಯಿಗಳನ್ನು ರಾಮಲೀಲಾ ಮೈದಾನದಿಂದ ಹೊರಕ್ಕೆ ಹಾಕಲಾಗಿದೆ. ರಾಮಲೀಲಾ ಮೈದಾನದ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಬಾಬಾ ಅವರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಅವರನ್ನು ಹರಿದ್ವಾರದಲ್ಲಿರುವ ಅವರ ಆಶ್ರಮಕ್ಕೆ ಕರೆದೊಯ್ದಿದ್ದಾರೆ ಎಂದು ಮೂಲಗಳು ತಿಳಿಸಿವೆ.












Click it and Unblock the Notifications