ಕರುಣಾನಿಧಿ 88ನೇ ವಸಂತಕ್ಕೆ; ಸಂಭ್ರಮಾಚರಣೆ ಮಾಯ

ತಮಿಳುನಾಡು ವಿಧಾನಸಭೆ ಚುನಾವಣೆ ಸೋಲು, ಪುತ್ರಿ ಕನಿಮೋಳಿ, ಪಕ್ಷದ ಮುಖಂಡ ಎ. ರಾಜಾ 2ಜಿ ಹಗರಣದ ಹಿನ್ನೆಲೆಯಲ್ಲಿ ಜೈಲುಪಾಲಾಗಿರುವುದು, ಮತ್ತೊಬ್ಬ ನೆಂಟ ದಯಾನಿಧಿ ಮಾರನ್ ಮೇಲೆ ಸಿಬಿಐ ತೂಗುಕತ್ತಿ ತೂಗುತ್ತಿರುವುದರಿಂದ ಕರುಣಾನಿಧಿ ಮಂಕಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಹುಟ್ಟುಹಬ್ಬ ಅಷ್ಟೊಂದು ಕಳೆಕಟ್ಟಿಲ್ಲ.
ಆದರೂ ಪಕ್ಷದ ಕಾರ್ಯಕರ್ತರು ಒಂದಷ್ಟು ಉತ್ಸಾಹ ತೋರಿದ್ದಾರೆ. ರಾಜ್ಯದ ಮೂಲೆಮೂಲೆಯಲ್ಲೂ ಕರುಣಾ ಹುಟ್ಟುಹಬ್ಬ ಆಚರಿಸುವಂತೆ ಕಾರ್ಯಕರ್ತರಿಗೆ ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ. ಅನ್ಬಳಗನ್ ಕಳೆದ ವಾರವೇ ಕರೆ ಕೊಟ್ಟಿದ್ದಾರೆ.











Click it and Unblock the Notifications