ಕರ್ನಾಟಕದ ಕರಾವಳಿಗೆ ಕಾಲಿಟ್ಟ ಮುಂಗಾರು

ಕಾದ ಕಾವಲಿಯಂತಾಗಿದ್ದ ನೆಲ ಮೊದಲ ಮಳೆಯ ಸಿಂಚನಕ್ಕೆ ಮೈಯೊಡ್ಡಿಕೊಂಡಿತು. ಮರಗಿಡಗಳು ಮುಂಗಾರು ಮುಸಲಧಾರೆಗೆ ಮುದಗೊಂಡವು. ಗುರುವಾರ ಮನೆಯಿಂದ ಶಾಲೆಗೆ ಹೊರಟ ಮಕ್ಕಳು, ಕೆಲಸಕ್ಕೆ ಹೊರಟವರು ಮಳೆಯ ಸೂಚನೆಯೇ ಇರದ ಕಾರಣ ಬರಿಗೈಯಲ್ಲಿ ತೆರಳಿ ಇದ್ದಕ್ಕಿದ್ದಂತೆಯೇ ಮಳೆ ಶುರುವಿಟ್ಟುಕೊಂಡ ಕಾರಣ ಒದ್ದೆಯಾಗಬೇಕಾಯಿತು. ಸುಡುಬಿಸಿಲಿಂದ ಕಂಗೆಟ್ಟಿದ್ದ ಕಾರಣ ಮೊದಲ ಮಳೆಗೆ ಒದ್ದೆಯಾಗುವುದರಲ್ಲೂ ಒಂಥರಾ ಖುಷಿಪಟ್ಟರು.
ಮಳೆಯಿಂದಾಗಬಹುದಾದ ಅನಾಹುತಗಳನ್ನು ಎದುರಿಸಲು ಮಂಗಳೂರು ಮಹಾನಗರ ಪಾಲಿಕೆ ಸಿದ್ದವಿರುವುದಾಗಿ ಮೇಯರ್ ಮತ್ತು ಆಯುಕ್ತರು ಬುಧವಾರ ಹೇಳಿದ್ದರು. ಜಿಲ್ಲಾಡಳಿತವೂ ಮುಂಗಾರು ಉಂಟುಮಾಡಬಹುದಾದ ಅನಾಹುತಗಳನ್ನು ಎದುರಿಸಲು ಸಕಲ ಸಿದ್ದತೆ ಮಾಡಿರುವುದಾಗಿ ಜಿಲ್ಲಾಧಿಕಾರಿಗಳು ಗುರುವಾರ ತಿಳಿಸಿದರು. ಕಾದುನೋಡಬೇಕು ಮುಂಗಾರು ಮಾಡಬಹುದಾದ ಅವಾಂತರಗಳೇನು? ಅವಾಂತರಗಳ ತಡೆಗೆ ಆಡಳಿತ ಯಂತ್ರದ ತಂತ್ರಗಳೇನೆಂದು.











Click it and Unblock the Notifications