ಕರ್ನಾಟಕದ ಕರಾವಳಿಗೆ ಕಾಲಿಟ್ಟ ಮುಂಗಾರು

It is raining in Mangalore
ಮಂಗಳೂರು, ಜೂ. 2 : ಕರಾವಳಿಗೆ ಮುಂಗಾರು ಗುರುವಾರ ಅಧಿಕೃತವಾಗಿ ಕಾಲಿಟ್ಟಿತು. ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಪುತ್ತೂರು ತಾಲೂಕಿನಾದ್ಯಂತ ಕಳೆದ ಕೆಲವು ದಿನಗಳಿಂದ ಮಳೆಯಾಗುತ್ತಿತ್ತಾದರೂ ಮಂಗಳೂರು ತಾಲೂಕಿನಲ್ಲಿ ಮಾತ್ರ ಸುಡುಬಿಸಿಲಿತ್ತು. ಗುರುವಾರ ಬೆಳಿಗ್ಗೆ ಹತ್ತು ಗಂಟೆಗೆ ಆರಂಭವಾದ ತುಂತುರು ಮಳೆ ಬಿಸಿಲಿನ ಝಳವನ್ನು ತಗ್ಗಿಸಿತು.

ಕಾದ ಕಾವಲಿಯಂತಾಗಿದ್ದ ನೆಲ ಮೊದಲ ಮಳೆಯ ಸಿಂಚನಕ್ಕೆ ಮೈಯೊಡ್ಡಿಕೊಂಡಿತು. ಮರಗಿಡಗಳು ಮುಂಗಾರು ಮುಸಲಧಾರೆಗೆ ಮುದಗೊಂಡವು. ಗುರುವಾರ ಮನೆಯಿಂದ ಶಾಲೆಗೆ ಹೊರಟ ಮಕ್ಕಳು, ಕೆಲಸಕ್ಕೆ ಹೊರಟವರು ಮಳೆಯ ಸೂಚನೆಯೇ ಇರದ ಕಾರಣ ಬರಿಗೈಯಲ್ಲಿ ತೆರಳಿ ಇದ್ದಕ್ಕಿದ್ದಂತೆಯೇ ಮಳೆ ಶುರುವಿಟ್ಟುಕೊಂಡ ಕಾರಣ ಒದ್ದೆಯಾಗಬೇಕಾಯಿತು. ಸುಡುಬಿಸಿಲಿಂದ ಕಂಗೆಟ್ಟಿದ್ದ ಕಾರಣ ಮೊದಲ ಮಳೆಗೆ ಒದ್ದೆಯಾಗುವುದರಲ್ಲೂ ಒಂಥರಾ ಖುಷಿಪಟ್ಟರು.

ಮಳೆಯಿಂದಾಗಬಹುದಾದ ಅನಾಹುತಗಳನ್ನು ಎದುರಿಸಲು ಮಂಗಳೂರು ಮಹಾನಗರ ಪಾಲಿಕೆ ಸಿದ್ದವಿರುವುದಾಗಿ ಮೇಯರ್ ಮತ್ತು ಆಯುಕ್ತರು ಬುಧವಾರ ಹೇಳಿದ್ದರು. ಜಿಲ್ಲಾಡಳಿತವೂ ಮುಂಗಾರು ಉಂಟುಮಾಡಬಹುದಾದ ಅನಾಹುತಗಳನ್ನು ಎದುರಿಸಲು ಸಕಲ ಸಿದ್ದತೆ ಮಾಡಿರುವುದಾಗಿ ಜಿಲ್ಲಾಧಿಕಾರಿಗಳು ಗುರುವಾರ ತಿಳಿಸಿದರು. ಕಾದುನೋಡಬೇಕು ಮುಂಗಾರು ಮಾಡಬಹುದಾದ ಅವಾಂತರಗಳೇನು? ಅವಾಂತರಗಳ ತಡೆಗೆ ಆಡಳಿತ ಯಂತ್ರದ ತಂತ್ರಗಳೇನೆಂದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+