ತುಮಕೂರು ಮಹಿಳೆಯ ಕೊಲೆ, ಪತಿ ಬಂಧನ

ಕೊಲೆಯಾದ ಮಹಿಳೆ ಶಿವಲಿಂಗಮ್ಮ(23) ಅಂಗನವಾಡಿ ಕಾರ್ಯಕರ್ತೆ. ಶಿವಲಿಂಗಮ್ಮ ಮತ್ತು ಹನುಮಂತರಾಯಪ್ಪ ನಾಲ್ಕು ವರ್ಷದ ಹಿಂದೆ ಮದುವೆಯಾಗಿದ್ದರು. ಸಂಸಾರದಲ್ಲಿ ಸಾಮರಸ್ಯದ ಕೊರತೆಯಿಂದ ಅವರು ನಿತ್ಯ ಕಚ್ಚಾಡುತ್ತಿದ್ದರು. ಅವರಿಗೆ ದಿವ್ಯಾಶ್ರೀ ಎಂಬ ಮೂರು ವರ್ಷದ ಮಗಳಿದ್ದಾಳೆ.
ಮುಂಜಾನೆ ಪತ್ನಿ ಮಲಗಿದ್ದ ವೇಳೆ ಹನುಮಂತರಾಯಪ್ಪ ಬಲವಾದ ವಸ್ತುವಿನಿಂದ ಪತ್ನಿಯ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ. ಈ ಕುರಿತು ಅರಸಿಕೆರೆ ಪೋಲಿಸ್ ಸ್ಟೇಷನ್ ನಲ್ಲಿ ಪ್ರಕರಣ ದಾಖಲಿಸಲಾಗಿದ್ದು ಹನುಮಂತರಾಯಪ್ಪನನ್ನು ಬಂಧಿಸಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.












Click it and Unblock the Notifications