ಕನ್ನಿಮೋಳಿ ಜಾಮೀನು ವಿಚಾರಣೆ : ಮೇ 14 ತೀರ್ಪು

ಸಿಬಿಐ ವಿಶೇಷ ನ್ಯಾಯಾಲಯವು ಕನ್ನಿಮೋಳಿ ಜಾಮೀನು ತೀರ್ಪನ್ನು ಮೇ 14ಕ್ಕೆ ಕಾಯ್ದಿರಿಸಿದೆ. ಜೊತೆಗೆ ಇಂದಿನ ವಿಚಾರಣೆಯಲ್ಲಿ 2ಜಿ ಸ್ಪೆಕ್ಟಮ್ ಹಂಚಿಕೆಯಲ್ಲಿ ಕನ್ನಿಮೋಳಿ ಆಕ್ಟಿವ್ ಆಗಿದ್ದರು ಎಂದು ಸಿಬಿಐ ನ್ಯಾಯಾಲಯವು ಬಲವಾಗಿ ವಾದಿಸಿದೆ. ಕನ್ನಿಮೋಳಿ ಅವರು ಕಲೈಞ್ಙರ್ ಟಿವಿ ವಾಹಿನಿಯ ಎಲ್ಲಾ ಚಟುವಟಿಕೆಗಳನ್ನು ನಿಯಂತ್ರಿಸುತ್ತಿದ್ದಾರೆ. ಹೀಗಾಗಿ ತಮ್ಮ ಸಂಸ್ಥೆಯಲ್ಲಿ ನಡೆದ ಇಷ್ಟೊಂದು ಬೃಹತ್ ಪ್ರಮಾಣದ ಹಣಕಾಸು ವ್ಯವಹಾರದ ಅರಿವಿಲ್ಲವೆಂಬ ವಾದ ಹಲವು ಸಂಶಯಗಳಿಗೆ ಎಡೆ ಮಾಡಿಕೊಡುತ್ತದೆ ಎಂದಿದೆ.
"ಕಲೈಞ್ಙರ್ ಟಿವಿ ವಾಹಿನಿಗೆ ಸುಮಾರು 200 ಕೋಟಿ ರೂ. ನೀಡಿರುವ ಬಗ್ಗೆ ಆಕೆಗೆ ಏನೂ ತಿಳಿದಿಲ್ಲವೆಂಬುದು ಸಂಪೂರ್ಣ ಸುಳ್ಳು. ಯಾಕೆಂದರೆ ಆ ಸಮಯದಲ್ಲಿ ಆಕೆ ಅದರ ನಿರ್ದೇಶಕಿಯಾಗಿದ್ದರು. ಸಂಸ್ಥೆಗೆ ಇಷ್ಟೊಂದು ಮೊತ್ತದ ಹಣ ಪಾವತಿಯಾದ ನಂತರ ಅವರು ಟಿವಿ ಚಾನೆಲ್ ಗೆ ರಾಜಿನಾಮೆ ನೀಡಿದ್ದಾರೆ. ಇದೆಲ್ಲವೂ 2ಜಿ ಸ್ಪೆಕ್ಟ್ರಂ ಸ್ಕಾಮ್ ನ ನಾಟಕದಲ್ಲಿ ಕನ್ನಿಮೋಳಿ ಆಕ್ಟಿವ್ ಆಗಿದ್ದರು ಎಂದು ನಿರೂಪಿಸಿದೆ" ಎಂದು ಸಿಬಿಐ ವಕೀಲ ಯು.ಯು. ಲಲಿತ್ ಮೋದಿ ವಾದಿಸಿದರು.
"ಕನ್ನಿಮೋಳಿ ಅವರು ರಾಜಾ ಅವರಿಗೆ ನಿಕಟವಾಗಿ ಕೆಲಸ ಮಾಡಿದ್ದಾರೆ ಮತ್ತು ದೂರಸಂಪರ್ಕ ಕಂಪನಿಗಳಿಗೆ ಸ್ಪೆಕ್ಟ್ರಮ್ ಹಂಚಿಕೆಯಲ್ಲಿ ಇವರ ಪಾತ್ರವೂ ಇದೆ. ಸುಮಾರು 47.51 ಕೋಟಿ ರೂಪಾಯಿ ವಹಿವಾಟಿನ ಕಲೈಞ್ಙರ್ ಟಿವಿಗೆ ಸುಮಾರು 200 ಕೋಟಿ ನೀಡಲಾಗಿದೆ. ಪೆಯ್ಡ್ ಅಪ್ ಕ್ಯಾಪಿಟಲ್ ಎಂಬುದು ಕೇವಲ ಒಂದು ಲಕ್ಷ ರೂಪಾಯಿ ಆಗಿದೆ. ಯಾವುದೇ ದಾಖಲೆ ನೀಡದೆ ಸುಮಾರು 200 ಕೋಟಿ ರೂ.ವನ್ನು ನೀಡಲಾಗಿದೆ. ಈ ಹಣ ಪಾವತಿ ಸಂದೇಹಕ್ಕೆ ಎಡೆ ಮಾಡಿಕೊಡುತ್ತದೆ" ಎಂದು ಅವರು ವಾದಿಸಿದ್ದಾರೆ.
ನ್ಯಾಯಾಲಯ ತೀರ್ಪನ್ನು ಮೇ 14ಕ್ಕೆ ಕಾಯ್ದಿರಿಸಿರುವುದು ರಾಜಕೀಯ ಕೆಸರಾಟಗಳಿಗೆ ಎಡೆ ಮಾಡಿಕೊಡಲಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಎಂದು ಹಲವು ಜನರು ಪ್ರತಿಕ್ರಿಯಿಸಿದ್ದಾರೆ. ಯಾಕೆಂದರೆ ಮೇ 13ರಂದು ತಮಿಳುನಾಡು ಫಲಿತಾಂಶವಿದ್ದು 14ಕ್ಕೆ ನ್ಯಾಯಾಲಯ ತೀರ್ಪು ಪ್ರಕಟಿಸುವುದು ಇಂತಹ ಸಂಶಯಗಳಿಗೆ ಎಡೆ ಮಾಡಿಕೊಡುತ್ತದೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ












Click it and Unblock the Notifications