ಮದನಿ ಜಾಮೀನು: ಮುಖ್ಯ ನ್ಯಾಯಮೂರ್ತಿ ಇತ್ಯರ್ಥಕ್ಕೆ

ಆರೋಪಿ ಮದನಿಗೆ ಜಾಮೀನು ನೀಡುವ ವಿಚಾರದಲ್ಲಿ ನಮ್ಮ ಮಧ್ಯೆ ಭಿನ್ನಾಭಿಪ್ರಾಯ ಮೂಡಿದೆ. ಆದ್ದರಿಂದ ಅದನ್ನು ಮತ್ತೊಂದು ಪೀಠಕ್ಕೆ ಒಪ್ಪಿಸುವಂತೆ ನ್ಯಾಯಮೂರ್ತಿಗಳಾದ ಮಾರ್ಕಂಡೇಯ ಖಟ್ಜು ಮತ್ತು ಗ್ಯಾನ್ ಸುಧಾ ಮಿಶ್ರಾ ಅವರ ನ್ಯಾಯಪೀಠ ಮುಖ್ಯ ನ್ಯಾಯಮೂರ್ತಿ ಕಪಾಡಿಯಾ ಅವರನ್ನು ಕೋರಿದೆ.
ನ್ಯಾ. ಖಟ್ಜು ಮದನಿಗೆ ಜಾಮೀನು ನೀಡುವುದಕ್ಕೆ ಒಲವು ತೋರಿದ್ದರೆ ನ್ಯಾ. ಮಿಶ್ರಾ ಅವರು ಆರೋಪಿ ಗುರುತರ ಅಪರಾಧ ಎಸಗಿದ್ದಾನೆ. ಅದು ರಾಷ್ಟ್ರೀಯ ಭದ್ರತೆಗೆ ಸಂಚಕಾರ ತರುವಂತಹುದು. ಆದ್ದರಿಂದ ಜಾಮೀನು ನೀಡುವುದಕ್ಕೆ ತಾವು ಸುತರಾಂ ಒಪ್ಪುವುದಿಲ್ಲ ಎಂದು ಸ್ಪಷ್ಟವಾಗಿ ನುಡಿದಿದ್ದಾರೆ. ಮದನಿ ಪ್ರಸ್ತುತ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ.











Click it and Unblock the Notifications