ಬೆಂಗಳೂರಿನ ನೂತನ ಮೇಯರ್ ಶಾರದಮ್ಮ, ಎಸ್ಎಸ್ಎಲ್ ಸಿ

ಮೀಸಲಾತಿ ಪ್ರಕಾರ ಈ ಬಾರಿ ಪರಿಶಿಷ್ಟ ಜಾತಿಯ ಮಹಿಳೆಯ ಆಯ್ಕೆಯಾಬೇಕಿತ್ತು. ಅದರಂತೆ ಆಡಳಿತಾರೂಢ ಬಿಜೆಪಿಯ ಶಾರದಮ್ಮ ಅವರು ಬೆಂಗಳೂರಿಗೆ ಐದನೆಯ ಮಹಿಳಾ ಪುರಪಿತೃವಾಗಿ ಆಯ್ಕೆಯಾಗಿದ್ದಾರೆ. ಬಿಳೇಕಹಳ್ಳಿಯ ರೂಪಾ ರಮೇಶ್ ಅವರು ಆಯ್ಕೆಯಾಗುವ ಸಾಧ್ಯತೆ ಇದೆಯೆಂದು ಹೇಳಲಾಗಿತ್ತು.
ಆದರೆ ಅಂತಿಮವಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಶಾರದಮ್ಮ ಅವರ ಮೇಲೆ ಕೃಪೆ ತೋರಿದ್ದರಿಂದ ರೂಪಾ ದೂರ ಸರಿದರು ಎನ್ನಲಾಗಿದೆ. ಇನ್ನು, ಉಪಮೇಯರ್ ಸ್ಥಾನಕ್ಕೆ ಪರಿಶಿಷ್ಟ ವರ್ಗಕ್ಕೆ (ಎ ಕೆಟಗರಿ) ಮೀಸಲಾಗಿತ್ತು. ಅದರಂತೆ ಹರೀಶ್ ಆಯ್ಕೆಯಾಗಿದ್ದಾರೆ.











Click it and Unblock the Notifications