ಶಾಸಕ ಸಂಗಮೇಶ್ ಬಂಧನ, ಆಸ್ಪತ್ರೆ ಪಾಲು

ಬಂಧನವಾದ ಬಳಿಕ ಹಠಾತ್ತನೇ ತೀವ್ರ ಅನಾರೋಗ್ಯಕ್ಕೆ ಈಡಾದ ಶಾಸಕ ಸಂಗಮೇಶ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಅವರನ್ನಿಂದು ಸ್ಥಳೀಯ ನ್ಯಾಯಾಲಯದಲ್ಲಿ ಹಾಜರುಪಡಿಸಲಿದ್ದಾರೆ.
ಶಾಸಕರ ಮನೆಯ ಬಾಗಿಲನ್ನು ಬಲವಂತವಾಗಿ ತೆಗೆಸಿ, ಪೊಲೀಸರು ಅವರನ್ನು ಬಂಧಿಸುವ ಪ್ರಮೇಯ ಏರ್ಪಟ್ಟಿತ್ತು. ಮನೆಯಲ್ಲೂ ಶಾಸಕರ ಬೆಂಬಲಿಗರು ಮತ್ತು ಪೊಲೀಸರ ಮಧ್ಯೆ ಚಕಮಕಿ ನಡೆದಿದೆ. ಆ ವೇಳೆ ಮನೆಯಲ್ಲಿದ್ದ ಪೀಠೋಪಕರಣ ಮತ್ತು ಗಾಜುಗಳು ಒಡೆದಿವೆ. ಪೊಲೀಸರು ಬೆಂಬಲಿಗರನ್ನು ಮನೆಯಿಂದ ಹೊರಹಾಕಿದ ಬಳಿಕವಷ್ಟೇ ಸಂಗಮೇಶ್ ಬಂಧನ ಸಾಧ್ಯವಾಗಿದೆ. ಇನ್ಸ್ ಪೆಕ್ಟರ್ ನಿತ್ಯಾನಂದ ನೇತೃತ್ವದಲ್ಲಿ ಸುಮಾರು 200 ಮಂದಿ ಪೊಲೀಸರ ತಂಡ ಈ ಕಾರ್ಯಾಚರಣೆ ನಡೆಸಿದೆ.
ಏಪ್ರಿಲ್ 25ರಂದು ನಡೆದ ಎಪಿಎಂಸಿ ಚುನಾವಣೆ ವೇಳೆ ಮತದಾರರ ಪಟ್ಟಿಗೆ ಸಂಬಂಧಿಸಿದಂತೆ ತಹಸೀಲ್ದಾರ್ ಅಭಿನವ್ ಮೇಲೆ ಸಂಗಮೇಶ್ ಹಲ್ಲೆ ನಡೆಸಿದರು ಎಂದು ಆರೋಪಿಸಲಾಗಿದೆ. ಈ ಸಂಬಂಧ ಹಳೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.












Click it and Unblock the Notifications