ಸಾಯಿಬಾಬಾ ಬೆನ್ನತ್ತಿರುವ ಪವಾಡ ಮತ್ತು ವಿವಾದ

ಭಗವಾನ್ ರನ್ನು ಕಳೆದುಕೊಂಡು ದುಃಖತಪ್ತರಾಗಿದ್ದ ಭಕ್ತರಿಗೆ ಈ ಅಚ್ಚರಿಯ ವಿದ್ಯಮಾನ ತಂಗಾಳಿಯಂತೆ ತೂರಿಬಂದಿತು. ಆ ಒಂದು ಕ್ಷಣ ನೆತ್ತಿಯ ಮೇಲೆ ಸೆರಗು ಹೊದ್ದುವುದನ್ನು ಮರೆತು, ಸಿಕ್ಕ ವಸ್ತುವಿನಿಂದ ಗಾಳಿ ಹಾಕಿಕೊಳ್ಳುವುದನ್ನು ಬದಿಗಿಟ್ಟು ಎಲ್ಲರೂ ಆಕಾಶದತ್ತ ಕತ್ತು ಎತ್ತಿದರು. ಅಲ್ಲಿ ಅರ್ಧ ಚಂದ್ರಾಮ ನಗುತ್ತಿದ್ದ. ಭಕ್ತರೆಲ್ಲ ಓಂ ಸಾಯಿರಾಂ, ಓಂ ಸಾಯಿರಾಂ ಎಂಬ ಘೋಷಣೆಗಳನ್ನೆಲ್ಲ ಕೂಗಲು ಪ್ರಾರಂಭಿಸಿದರು. [ಗ್ಯಾಲರಿ ನೋಡಿರಿ]
ಮತ್ತೊಂದು ವಿವಾದ : ಸಾಯಿಬಾಬಾ ಮಣ್ಣಾಗುವ ಹೊತ್ತಿನಲ್ಲಿಯೇ ಮತ್ತೊಂದು ವಿವಾದ ಭುಗಿಲೆದ್ದಿದೆ. ಬಾಬಾ ಅವರು ತೀರಿಕೊಂಡಿದ್ದು ಏ.24 ಆದರೂ ಏ.4ರಂದೇ ಅವರಿಗಾಗಿ ಶವವನ್ನು ಕೆಡದಂತೆ ಇಡುವ ಪೆಟ್ಟಿಗೆಯನ್ನು ಬೆಂಗಳೂರಿನಿಂದ ತರಿಸಿಕೊಂಡಿದ್ದೇಕೆ? ಎಂಬ ಪ್ರಶ್ನೆ ಆವರಿಸಿಕೊಂಡಿದೆ. ಈ ಪ್ರಶ್ನೆಗೆ ಸದ್ಯಕ್ಕೆ ಯಾರೂ ಉತ್ತರ ನೀಡುವ ಪರಿಸ್ಥಿತಿಯಲ್ಲಿಲ್ಲ.
ದೇಹಸ್ಥಿತಿ ವಿಷಮಿಸಿ ಮಾರ್ಚ್ 28ರಂದು ಶ್ರೀ ಸತ್ಯ ಸಾಯಿ ಆಸ್ಪತ್ರೆಗೆ ಬಾಬಾ ಅವರನ್ನು ದಾಖಲಿಸಲಾಯಿತು. ಅವರು ಅಸ್ತಂಗತರಾಗಿದ್ದಾರೆ ಎಂದು ಅಧಿಕೃತವಾಗಿ ಸಾಯಿ ಟ್ರಸ್ಟ್ ಪ್ರಕಟಿಸುವ ಮುನ್ನವೇ ಏ.4ರಂದು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜೇಂದ್ರನಾಥ್ ರೆಡ್ಡಿ ಎಂಬುವವರಿಂದ ಶವಪೆಟ್ಟಿಗೆ ಪುಟ್ಟಪರ್ತಿಗೆ ರವಾನೆಯಾಗಿದೆ. ಬಾಬಾ ಸಾಯುವ ಮೊದಲೇ ಸುಮಾರು 1 ಲಕ್ಷದಷ್ಟು ಹಣ ತೆತ್ತು ಶವಪೆಟ್ಟಿಗೆಯನ್ನು ಸಾಯಿ ಟ್ರಸ್ಟ್ ಆರ್ಡರ್ ಮಾಡಿದ್ದೇಕೆ ಎಂಬ ಸಂಶಯ ಎಲ್ಲರನ್ನು ಕಾಡುತ್ತಿದೆ.
ಬಾಬಾ ಇಹಲೋಕ ತ್ಯಜಿಸುವ ಮೊದಲೇ ಅವರ ಪ್ರಾಣಪಕ್ಷಿ ಹಾರಿಹೋಗಿದೆ, ಅದನ್ನು ಟ್ರಸ್ಟ್ ಮುಚ್ಚಿಟ್ಟಿದೆ ಎಂಬ ನಾನಾ ಊಹಾಪೋಹಗಳು ಗರಿಗೆದರಿದ್ದವು. ಈ ಗಾಳಿಸುದ್ದಿಯನ್ನು ಟ್ರಸ್ಟ್ ನ ಸದಸ್ಯರು ಮತ್ತು ಬಾಬಾ ಅವರನ್ನು ನೋಡಿಕೊಳ್ಳುತ್ತಿದ್ದ ವೈದ್ಯರು ತಳ್ಳಿಹಾಕುತ್ತಲೇ ಬಂದಿದ್ದರು. ಬಾಬಾ ಅವರು ತಮ್ಮ ಸಂಧ್ಯಾಕಾಲದಲ್ಲಿ ಪವಾಡ ಮತ್ತು ವಿವಾದಗಳಿಂದ ದೂರವಿದ್ದರೂ, ಅವರು ಸತ್ತ ನಂತರವೂ ಪವಾಡ ಮತ್ತು ವಿವಾದಗಳು ಅವರನ್ನು ಬೆನ್ನತ್ತಿಕೊಂಡು ಬರುತ್ತಿವೆ. ಇನ್ನೂ ಏನೇನು ಕಾದಿದೆಯೊ?
-
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
B Khata: ಬಿ ಖಾತಾದಿಂದ ಎ ಖಾತಾ ಪರಿವರ್ತನೆ ಸವಾಲುಗಳು: ವೆಚ್ಚ, ಪ್ರಕ್ರಿಯೆ ಸ್ವಂತ ವಿವರ ಹಂಚಿಕೊಂಡ ಆಸ್ತಿದಾರ ಶ್ರೀನಿವಾಸ ಮಠ -
Weekly Horoscope March 16-22: ಈ ಯುಗಾದಿಗೆ ಯಾವ ರಾಶಿಯವರಿಗೆ ಅದೃಷ್ಟದ ಬಾಗಿಲು ತೆರೆಯಲಿದೆ? ಇಲ್ಲಿದೆ ಈ ವಾರದ ನಿಮ್ಮ ರಾಶಿ ಫಲ -
New Airport: 3 ಜಿಲ್ಲೆ ಜನರ ಅನುಕೂಲಕ್ಕಾಗಿ ಸರ್ಕಾರದ ಮಾಸ್ಟರ್ ಪ್ಲ್ಯಾನ್: ಬಳ್ಳಾರಿ ಬಳಿ ಹೊಸ ಏರ್ಪೋರ್ಟ್ -
PUC ವಿದ್ಯಾರ್ಥಿಗಳ ಗಮನಕ್ಕೆ: ದ್ವಿತೀಯ ಪಿಯುಸಿ ಫಲಿತಾಂಶ ಸುಧಾರಣೆಗೆ ಇನ್ಮುಂದೆ 2 ವರ್ಷ ಮಾತ್ರ ಅವಕಾಶ -
National Highway: ಕರ್ನಾಟಕದ ನಾಲ್ಕು ಪ್ರಮುಖ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಗ್ಗೆ ಮಹತ್ವದ ಮಾಹಿತಿ ಹಂಚಿಕೊಂಡ ನಿತಿನ್ ಗಡ್ಕರಿ -
Gold Rate: ಬೆಂಗಳೂರಿನಲ್ಲಿ ಇಳಿಕೆಯಾಯ್ತು ಚಿನ್ನ-ಬೆಳ್ಳಿ ಬೆಲೆ; ಇಲ್ಲಿದೆ ದರ ಪಟ್ಟಿ -
Rain in Karnataka: ಬಿರು ಬಿಸಿಲಿನ ನಡುವೆ ಬೆಂಗಳೂರು ಸೇರಿ ಕರ್ನಾಟಕದ ಈ ಜಿಲ್ಲೆಗಳಲ್ಲಿ ನಾಲ್ಕು ದಿನ ಮಳೆ: ಐಎಂಡಿ ರಿಪೋರ್ಟ್ -
Horoscope March 14: ಈ ರಾಶಿಯವರ ಆರ್ಥಿಕ ಸ್ಥಿತಿ ಸುಧಾರಣೆ, ದಾಂಪತ್ಯ ಜೀವನದಲ್ಲಿ ಸಂತಸ, ದಿನ ಭವಿಷ್ಯ -
BCCI: ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ರಾಹುಲ್ ದ್ರಾವಿಡ್, ರೋಜರ್ ಬಿನ್ನಿಗೆ ಬಿಸಿಸಿಐ ಅತ್ಯುನ್ನತ ಪ್ರಶಸ್ತಿ












Click it and Unblock the Notifications