ಮಲ್ಲೇಶ್ವರದಲ್ಲಿ ಬಿಜೆಪಿಯ ನೂತನ ಆಶಾಸೌಧ

ಏಪ್ರಿಲ್ 20 ಅಂದರೆ ನಾಡಿದ್ದು ಗುರುವಾರ ಪೂರ್ವಾಹ್ನ 11 ಗಂಟೆಗೆ ಎಲ್ ಕೆ ಅಡ್ವಾಣಿಯವರು ನೂತನ ಭವನವನ್ನು ಉದ್ಘಾಟಿಸಲಿದ್ದಾರೆ. ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ರಾಜ್ಯದ ಮುಖ್ಯಮಂತ್ರಿ ಬಿಎಸ್ ಯುಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅನಂತ್ ಕುಮಾರ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಬಿಜೆಪಿ ಉಸ್ತುವಾರಿ ಹೊಂದಿರುವ ಧರ್ಮೇಂದ್ರ ಪ್ರಧಾನ್ ಭಾಗವಹಿಸಲಿದ್ದಾರೆ.
ಹೊಸ ಕಟ್ಟಡ ಮಲ್ಲೇಶ್ವರಂನಲ್ಲಿ ಎಲ್ಲಿ ಎಂದು ಹುಡುಕಾಡೋದು ಕಷ್ಟವಿಲ್ಲ. ಅಲ್ಲೇ 11ನೇ ಅಡ್ಡರಸ್ತೆಯ ಕಾಡು ಮಲ್ಲೇಶ್ವರ ದೇವಾಲಯದ ಸಮೀಪದಲ್ಲಿ ಐದು ಅಂತಸ್ತಿನ ನೂತನ ಭವ್ಯ ಬಿಜೆಪಿ ಕಟ್ಟಡ ಎದ್ದು ಕಾಣುತ್ತದೆ.











Click it and Unblock the Notifications