ಭಾರತ ಕಪ್ ಗೆದ್ದ ಹಜಾರೆಗೆ ಬಿಡಿಎ ಸೈಟು

ದೇಶಕ್ಕೆ 64 ವರ್ಷಗಳ ಬಳಿಕ ಮತ್ತೊಮ್ಮೆ ಸ್ವಾತಂತ್ರ್ಯ ಬಂದಂತಾಗಿದೆ. ನಮ್ಮ ಸನ್ಮಾನ್ಯ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಸೇರಿದಂತೆ ಹಲವಾರು ಸಿನಿಮಾ ತಾರೆಗಳು ಅಣ್ಣಾ ಹಜಾರೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಆದರೆ ಕ್ರಿಕೆಟ್ ತಾರೆಗಳಿಗೆ ಏನು ಬಂತೋ ದಾಡಿ ಗೊತ್ತಿಲ್ಲ. ಕಮಕ್ ಕಿಮಕ್ ಎನ್ನಲಿಲ್ಲ. ಬರಿ ತಾವಾಯಿತು ತಮ್ಮ ಐಪಿಎಲ್ ಡೀಲ್ಗಳಾಯಿತು. ದೇಶ ಏನಾದರೆ ನಮಗೇನಾಗಬೇಕು ಎಂಬಂತೆ ಕೇವಲ ತಮ್ಮ ಪಾಲಿನ ಜಾಹೀರಾತುಗಳಿಗೆ ಸಹಿ ಹಾಕುವುದರಲ್ಲೇ ಮುಳುಗಿ ಹೋದರು.
ಇಂತಹ 'ಮಹಾನ್' ಪಟುಗಳಿಗೆ ನಮ್ಮ ಯಡಿಯೂರಪ್ಪನವರು ರು.25 ಲಕ್ಷ ಬಹುಮಾನ ಪ್ರಕಟಿಸಿದ್ದಾರೆ. ದೇಶದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲದ ಹೋರಾಟ ಮನೋಭಾವವೇ ಇಲ್ಲದ ಇಂತಹವರಿಗೆ ಈ ಪಾಟಿ ದುಡ್ಡು ಕೊಡುವುದು ಯಾವ ನ್ಯಾಯ? ಸಾಧ್ಯವಾದರೆ ಯಡಿಯೂರಪ್ಪನವರು ದೇಶ ಕಂಡ ನಿಜವಾದ ನಾಯಕ ಅಣ್ಣಾ ಹಜಾರೆಗೆ ಒಂದು ಬಿಡಿಎ ಸೈಟು ಕೊಡಲಿ ನೋಡೋಣ.
ಈಗಾಗಲೆ ಯಡಿಯೂರಪ್ಪ ಅವರ ಮೇಲೆ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಆರೋಪಗಳಿವೆ. ಅಣ್ಣಾ ಹಜಾರೆ ಅವರಿಗೆ ಸಿಕ್ಕ ಜನ ಬೆಂಬಲ ಕಂಡು ತಾವೂ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುತ್ತಿರುವುದಾಗಿ ಹೇಳಿದ್ದಾರೆ! ಇಂದು ಇಡೀ ದೇಶವೇ ಅಣ್ಣಾ ಹಜಾರೆ ಅವರನ್ನು ಕೊಂಡಾಡುತ್ತಿದೆ. ಅವರ ನಿಸ್ವಾರ್ಥ ಸೇವೆಯನ್ನು ಯಡಿಯೂರಪ್ಪ ಅವರು ಕೇವಲ ಅಭಿನಂದಿಸಿದರೆ ಸಾಲದು. ಅವರಿಗೊಂದು 40x60 ಬಿಡಿಎ ಸೈಟು ಕೊಡಲಿ ಅಥವಾ ರು.25-30 ಲಕ್ಷ ನಗದು ಬಹುಮಾನ ಘೋಷಿಸಿ ನಿಜವಾದ ನಾಯಕತ್ವವನ್ನು ಬೆಂಬಲಿಸಲಿ. ಏನಂತೀರಾ ಮಿಸ್ಟರ್ ಸಿಎಂ?
ನಮ್ಮ ಮಾತು ಕೇಳಿ ಅದರಂತೆ ವರ್ತಿಸಿದರೆ ನೀವೂ ಕೂಡ ಏಕ್ ದಂ ದೊಡ್ಡ ಹೀರೋನೇ ಆಗ್ತೀರಾ. ಇಡೀ ಇಂಡಿಯಾದಲ್ಲೇ ಯಾವ ಮುಖ್ಯಮಂತ್ರಿಯ ಕನಸಿನಲ್ಲೂ ಬಾರದ ಇಂಥ ಐಡಿಯಾಗಳನ್ನು ದಟ್ಸ್ ಕನ್ನಡ ದಯಪಾಲಿಸುತ್ತಿದೆ. ಉಪಯೋಗಿಸಿ, ಕರ್ನಾಟಕಕ್ಕೆ ಹೆಸರು ತನ್ನಿ. Thank you for listening to Oneindia-Kannada.
;-
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
ರಿಷಬ್ ಸಮಯ ಬಂದಾಗ ಮಾತಾಡ್ತೀನಿ ಅಂದ: ಅನ್ಫಾಲೋ, ಗೆಳೆಯರಲ್ಲಿ ಬಿರುಕು ವದಂತಿ ಬಗ್ಗೆ ಪ್ರಮೋದ್ ಶೆಟ್ಟಿ ಪ್ರತಿಕ್ರಿಯೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾ ಕುಮಾರಿ ನೇಮಕ -
April 5 Horoscope: ನಿಮ್ಮ ಅದೃಷ್ಟ ಹೇಗಿದೆ? ಸಂಪೂರ್ಣ ಮಾಹಿತಿ ಇಲ್ಲಿ -
ಬೆಂಗಳೂರಿನ ಹೊಸೂರು ರಸ್ತೆಯ ದುಸ್ಥಿತಿ: ಕೇಂದ್ರ ಸಚಿವ ನಿತಿನ್ ಗಡ್ಕರಿಗೆ ಟ್ಯಾಗ್ ಮಾಡಿ ಕಿರಣ್ ಮಜುಂದಾರ್ ಶಾ ಆಕ್ರೋಶ -
Bengaluru Viral: ಬೆಂಗಳೂರಿನ ಲಾಲ್ಬಾಗ್ ನೋಡಿ ತಪ್ಪೊಪ್ಪಿಗೆ ಕೊಡಬೇಕು ಎಂದ ವಿದೇಶಿಗ, ವಿಡಿಯೋ ವೈರಲ್ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
RCB vs CSK: ಆರ್ಸಿಬಿ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ: ಇಂದಿನ ಪಂದ್ಯಕ್ಕೂ ಮುನ್ನ ಇದು ಗಮನದಲ್ಲಿರಲಿ -
Virat Kohli: ಎಲ್ಲೂ ಅವಕಾಶ ಸಿಗದಿದ್ರೆ ಸ್ಯಾಂಡಲ್ವುಡ್ಗೆ ಬರ್ತೀನಿ: ವಿರಾಟ್ ಕೊಹ್ಲಿ ವಿಡಿಯೋ ವೈರಲ್












Click it and Unblock the Notifications