ಪ್ರಜಾಪ್ರಭುತ್ವಕ್ಕೆ ಸಂದ ಜಯ; ಜೈ ಹೋ ಅಣ್ಣಾ ಹಜಾರೆ

ಬಳಿಕ ಅಣ್ಣಾ ಹಜಾರೆ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ, ಇದು ನನ್ನ ಗೆಲುವಲ್ಲ ನಿಮ್ಮ ಗೆಲುವು. ಪ್ರಜಾಪ್ರಭುತ್ವಕ್ಕೆ ಸಂದ ಜಯ. ಜನ ಬೆಂಬಲಕ್ಕೆ ಸರಕಾರ ಮಣಿದಿದೆ. ಹೋರಾಟಕ್ಕೆ ಬೆಂಬಲ ನೀಡಿದ ಎಲ್ಲರಿಗೂ ಆಭಾರಿಯಾಗಿದ್ದೇನೆ. ಆಗಸ್ಟ್ 15 ರೊಳಗೆ ಮಸೂದೆ ಜಾರಿಯಾಗದಿದ್ದರೆ ಮತ್ತೆ ಹೋರಾಟ ಮಾಡುವುದಾಗಿ ಅಣ್ಣಾ ಸರ್ಕಾರಕ್ಕೆ ಎಚ್ಚರಿಸಿದರು.
ಬಳಿಕ ಅವರು ಸತ್ಯಾಗ್ರಹಿಗಳಿಗೆ ತಂಪು ಪಾನೀಯ ನೀಡಿ ನಿರಶನವನ್ನು ಅಂತ್ಯಗೊಳಿಸಿದರು. 'ಲಗಾನ್' ಚಿತ್ರದಲ್ಲಿನ ಜನಪ್ರಿಯ ಗೀತೆ "ಮಿಥುವ ಹೇ ಮಿಥುವ..." ಹಾಡಿನ ಬಳಿಕ ಪುಟ್ಟ ಬಾಲಕಿ ಕೈಯಿಂದ ನಿಂಬೆ ತಂಪು ಪಾನೀಯ ಸ್ವೀಕರಿಸಿ ತಮ್ಮ ಐದು ದಿನಗಳ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದರು. ಅವರ ಉಪವಾಸ ಸತ್ಯಾಗ್ರಹ ಅಂತ್ಯವಾಗುತ್ತಿದ್ದಂತೆ ರಘುಪತಿ ರಾಘವ ರಾಜಾರಾಂ ಪತೀತ ಪಾವನ ಸೀತಾರಾಂ... ಹಿನ್ನೆಲೆಯಲ್ಲಿ ಕೇಳಿಬರುತ್ತಿತ್ತು.
ಪ್ರಜಾಪ್ರಭುತ್ವಕ್ಕೆ ಸಂದ ಜಯವನ್ನು ಇಂದು ಸಂಜೆ ಆರು ಗಂಟೆಗೆ ಇಂಡಿಯಾ ಗೇಟ್ ಬಳಿ ಆಚರಿಸಲಿದ್ದಾರೆ. ಈ ವಿಜಯೋತ್ಸವಕ್ಕೆ ಎಲ್ಲರೂ ಬರಬೇಕು ಎಂದು ಅಣ್ಣಾ ಹಜಾರೆ ಆಹ್ವಾನ ನೀಡಿದ್ದಾರೆ. ವೇದಿಕೆಯಲ್ಲಿ ಕಿರಣ್ ಬೇಡಿ, ಸ್ವಾಮಿ ಅಗ್ನಿವೇಶ್ ಸೇರಿದಂತೆ ಸಾವಿರಾರು ಅಣ್ಣಾ ಬೆಂಬಲಿಗರು ಉಪಸ್ಥಿತರಿದ್ದರು. ಇತ್ತ ಬೆಂಗಳೂರು ಫ್ರೀಡಂ ಪಾರ್ಕ್ನಲ್ಲೂ ತಂಪು ಪಾನೀಯ ಸೇವಿಸುವ ಮೂಲಕ ಉಪವಾಸ ಸತ್ಯಾಗ್ರಹವನ್ನು ಹೋರಾಟಗಾರರು ಅಂತ್ಯಗೊಳಿಸಿದರು.
;











Click it and Unblock the Notifications