ಬೆತ್ತಲೆ ಪೂನಂ ಮೇಲೆ ಬಿತ್ತು ಕೇಸು
ಭೂಪಾಲ್, ಏಪ್ರಿಲ್ 2: ಭಾರತ ವಿಶ್ವ ಕಪ್ ಗೆದ್ದರೆ ಬೆತ್ತಲೆಯಾಗುವ ಬೆದರಿಕೆಯೊಡ್ಡಿರುವ ತರಲೆ ಪೂನಂ ಪಾಂಡೆ ಎಂಬ ಹದಿಹರಯದ ಮಾಡೆಲ್ ಅನ್ನು ವಕೀಲರೊಬ್ಬರು ಕಟೆಕಟೆಗೆ ಎಳೆದಿದ್ದಾರೆ. ಜತೆಗೆ ಬಂಟ್ವಾಳದ ಬಂಟ ವಿಜಯ್ ಮಲ್ಯ ಸಾಹೇಬರನ್ನೂ. ಆಯಮ್ಮ ಪೂನಂ ಬ್ರಾಹ್ಮಣರಿಗೆ ಅವಮಾನ ಮಾಡಿದ್ದಾಳೆ ಎಂದೂ, ಇವಯ್ಯ ಮಲ್ಯ ಪೂನಂಳನ್ನು ತನ್ನ ಕಿಂಗ್ ಫಿಷರ್ ಕ್ಯಾಲೆಂಡರ್ [ಗ್ಯಾಲರಿ] ನಲ್ಲಿ ತೆಳು ಉಡುಪಿನಲ್ಲಿ ನಿಲ್ಲಿಸುವ ಮೂಲಕ ಅವಳನ್ನು ಬೆತ್ತಲೆ ಜಗತ್ತಿಗೆ ಪರಿಚಯಿಸಿದ್ದಾನೆ ಎಂದೂ ವಕೀಲರು ತಮ್ಮ ದೂರುದುಮ್ಮಾನ ತೋಡಿಕೊಂಡಿದ್ದಾರೆ.
ಒಂದು ವೇಳೆ ಕ್ರಿಕೆಟ್ ಸಮ್ಮುಖದಲ್ಲಿ ಅವಳ ಬೆತ್ತಲೆ ಆಟ ನಡೆಯದಿದ್ದರೂ ಬ್ರಾಹ್ಮಣ ಕುಡಿಯ ಇಂತಹ ಅವಹೇಳನಕಾರಿ ನಡೆ ಅಕ್ಷಮ್ಯ. ಫೈನಲ್ ಆಗಿ ಭಾರತೀಯ ಸಂಸ್ಕೃತಿಗೂ ಅವಮಾನ ಎಂದು ವಕೀಲ ಆರ್.ಕೆ. ಪಾಂಡೆ ಎಂಬವವರು ವ್ಯಗ್ರರಾಗಿದ್ದು, ಇಬ್ಬರನ್ನೂ ಸುಮ್ಮನೆ ಬಿಡಬೇಡಿ. ಸರಿಯಾಗಿ ಬುದ್ಧಿ ಕಲಿಸಿ ಅವರಿಗೆ ಎಂದು ಅಲವತ್ತುಕೊಂಡಿದ್ದಾರೆ. ಕೇಸು ಎಲ್ಲ ಮುಗಿದ ಮೇಲೆ ಏಪ್ರಿಲ್ 5ರಂದು ವಿಚಾರಣೆಗೆ ಒಳಪಡಲಿದೆ.
'ಯಾರೇ ಕೂಗಾಡಲಿ, ಊರೇ ಹೋರಾಡಲಿ ನನ್ನ ಬೆತ್ತಲೆಗೆ ಭಂಗವಿಲ್ಲ' ಎಂದು ಪೂನಮ್ಮ ತಾನು ವಿವಸ್ತ್ರಳಾಗುವುದನ್ನು ಖಚಿತಪಡಿಸಿದ್ದಾಳೆ. ಆಟಗಾರರ ಡ್ರೆಸ್ಸಿಂಗ್ ರೂಮಿನಲ್ಲಾದರೂ ಸರಿ ವಾಂಖೆಡೆ ಸ್ಟೇಡಿಯಂನ ನಟ್ಟನಡುವೆಯಾದರೂ ಬೆತ್ತಲೆ ಪ್ರದರ್ಶನ ನಡೆಯುವುದರಲ್ಲಿ ಯಾವುದೇ ಅನುಮಾನ ಬೇಡ ಎಂದೂ ಗ್ಯಾರಂಟಿ ನೀಡಿದ್ದಾಳೆ. ಇದಕ್ಕೆ ತಾವೂ ಸಾಕ್ಷಿಯಾಗಲಿದ್ದೇವೆ ಎಂದು ಪೂನಂಳ ಅಪ್ಪ-ಅಮ್ಮ ಘೋಷಿಸಿದ್ದಾರೆ!
ಈ ಮಧ್ಯೆ, ಪೂನಂಳ ಬೆತ್ತರಲೆಯನ್ನು ಪರೋಕ್ಷವಾಗಿ ಬೆಂಬಲಿಸಿರುವ ಪೇಟಾ ಎಂಬ ಪ್ರಾಣಿ ದಯಾ ಸಂಘವು ವಸಿ ನಮ್ ಕಡೆನೂ ಹಾಗೇ (ಬೆತ್ತಲೆಯಾಗಿ) ಬಾರವ್ವಾ ಎಂದು ಕರೆದಿದ್ದಾರೆ. ಅಂದರೆ ಬಟ್ಟೆ ಕಳಚುವ ಮುನ್ನವೇ ಮತ್ತೊಂದು ಅಫರ್ ಭಾಗ್ಯ ಪೂನಂಗೆ ಒಲಿದಿದೆ. 'ಕ್ರಿಕೆಟ್ ಬಾಲ್ ಮಾಡಲು ಚರ್ಮ ಬಳಸುತ್ತಾರೆ, ಅದು ನಮ್ಮ ಪ್ರಾಣಿಗಳಿಗೆ ಶ್ಯಾನೆ ನೋವುಂಟು ಮಾಡುತ್ತದೆ. ಆದ್ದರಿಂದ ಸಿಂಥೆಟಿಕ್ ಬಾಲ್ ಬಳಸುವಂತೆ ಐಸಿಸಿ ಮೇಲೆ ಒತ್ತಡ ಹೇರಲು ವಸಿ ಪೂರ್ತಿಯೇ ಬೆತ್ತಲಾಗು ಬಾ' ಎಂದು ಆಹ್ವಾನ ನೀಡಿದ್ದಾರೆ. ಪುಣ್ಯಾತ್ಗಿತ್ತಿ ಏನೆಲ್ಲ ಮಾಡ್ತಾಳೋ ತಪ್ಪದೇ ಅವಳ ಮೇಲೆ ಒಂದು ಕಣ್ಣಿಟ್ಟಿರಿ.
-
Bengaluru Property: ಬೆಂಗಳೂರಿನಲ್ಲಿ ಕಟ್ಟಡ ನಿಯಮ ಉಲ್ಲಂಘಿಸಿದ ಆಸ್ತಿದಾರರಿಗೆ ಜಿಬಿಎ - ಬಿಡಿಎ ಜಂಟಿ ಶಾಕ್ -
LPG Alternatives: ಎಲ್ಪಿಜಿ ಬೆಲೆ ಏರಿಕೆಗೆ ಹೆದರಬೇಡಿ: ನಮ್ಮಲ್ಲೇ ಇರುವ ಈ ಪರ್ಯಾಯ ಮಾರ್ಗಗಳನ್ನು ಅಳವಡಿಸಿಕೊಂಡು ಜಾಣರಾಗಿ -
Gold: ಗದಗ ಲಕ್ಕುಂಡಿಯಲ್ಲಿ ಪತ್ತೆಯಾದ ಚಿನ್ನದ ನಿಧಿ ಪ್ರಕರಣಕ್ಕೆ ಟ್ವಿಸ್ಟ್: ಮೌಲ್ಯ 10 ಪಟ್ಟು ಹೆಚ್ಚು, ವಿಜಯನಗರ ಕಾಲದ ಆಭರಣ -
ಜಿಮ್ನಲ್ಲಿ ಭೇಟಿ, ಸಾಫ್ಟ್ವೇರ್ ಕಂಪನಿ ಕೆಲಸ: 7,500 ರೂ. ಸಂಬಳ ಪಡೆಯುತ್ತಿದ್ದ ಅಶ್ವಿನಿ ಅಪ್ಪು ಮನಗೆದ್ದಿದ್ದು ಹೇಗೆ? -
Vehicle Loan: ವಾಹನ ಮಾಲೀಕರಿಗೆ ಗುಡ್ನ್ಯೂಸ್: ಸಾಲ ಪ್ರಕ್ರಿಯೆ, ಆರ್ಸಿ ಅಪ್ಡೇಟ್ಗೆ ಇನ್ಮುಂದೆ ಆನ್ಲೈನ್ ವ್ಯವಸ್ಥೆ -
Horoscope March 11: ಈ ರಾಶಿಯವರಿಗೆ ಸಿಗಲಿವೆ ಹೊಸ ಅವಕಾಶಗಳು, ಬುದಕಿನಲ್ಲಿ ಯಶಸ್ಸು; ಇಂದಿನ ದಿನ ಭವಿಷ್ಯ -
KEA PGNEET: ಕೆಇಎಯಿಂದ ಮತ್ತೊಂದು ಸುತ್ತಿನ ಸೀಟು ಹಂಚಿಕೆ; 783 ವೈದ್ಯಕೀಯ ಸೀಟುಗಳು ಬಾಕಿ -
ವಾಸ್ತು: ದಕ್ಷಿಣ ಗೇಟು ಶುಭವೋ ಅಥವಾ ಅಶುಭವೋ, ಉತ್ತರ ದ್ವಾರದ ವಾಸ್ತು ರಹಸ್ಯಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ -
ದಯಾಮರಣಕ್ಕೆ ಸುಪ್ರೀಂ ಕೋರ್ಟ್ ಅಸ್ತು: 13 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಮಗನಿಗೆ ಮುಕ್ತಿ ನೀಡಲು ಕೋರಿದ್ದ ಪೋಷಕರು -
ಮತ್ತೆ ಶುರುವಾಗುತ್ತಾ ವರ್ಕ್ ಫ್ರಂ ಹೋಮ್? ಇಂಧನ ಕೊರತೆ ಬೆನ್ನಲ್ಲೇ ಹಲವು ದೇಶಗಳಲ್ಲಿ ಕಚೇರಿಗಳಿಗೆ ನಿರ್ಬಂಧ -
ಬೇಸಿಗೆಯಲ್ಲಿ ನೀವು ಚಿಲ್ಡ್ ಬಿಯರ್ ಕುಡಿಯುತ್ತೀರಾ, ಬಾಟಲ್ ಕೆಳಗಿಟ್ಟು ಇದನ್ನು ಓದಿ -
LPG Gas: ದೇಶದಲ್ಲಿ'ಅಡುಗೆ ಅನಿಲ ತುರ್ತು ಪರಿಸ್ಥಿತಿ' ಭೀತಿ; ಡಿಜಿಟಲ್ ಬುಕಿಂಗ್ ಸರ್ವರ್ ಡೌನ್; ಏಜೆನ್ಸಿಗಳ ಮುಂದೆ ಜನರ ಕ್ಯೂ












Click it and Unblock the Notifications