ಶನಿವಾರ ಆಟ, ಭಾನು ಸಿನೆಮಾ, ಸೋಮ ಯುಗಾದಿ

1983ರ ನಂತರ ವಿಶ್ವಕಪ್ ಗೆಲ್ಲುವ ಕನಸು ಭಾರತಕ್ಕೆ ಕನಸಾಗಿಯೇ ಉಳಿದಿದೆ. 1996ರಲ್ಲಿ ಗೆದ್ದಿದ್ದ ಶ್ರೀಲಂಕಾ ಮತ್ತೊಮ್ಮೆ ತನ್ನ ಬುಟ್ಟಿಗೆ ಹಾಕಿಕೊಳ್ಳಲು ಶತಪ್ರಯತ್ನ ಮಾಡಲಿದೆ. ಯಾವುದೇ ತಂಡದ ಮೇಲೆ ಎಷ್ಟೇ ಭರವಸೆಗಳಿದ್ದರೂ, ಆಯಾ ದಿನ ಯಾವ ತಂಡ ಅತ್ಯುತ್ತಮವಾಗಿ ಆಡುತ್ತದೋ ಅದೇ ವಿಶ್ವಕಪ್ ಗೆಲ್ಲಲಿದೆ. ಎಂದಿನಂತೆ ದಟ್ಸ್ ಕನ್ನಡ ಕ್ಷಣಕ್ಷಣದ ವಿವರಗಳನ್ನು ಓದುಗರಿಗೆ ಬಡಿಸಲಿದೆ. ರೋಚಕ ದೃಶ್ಯಗಳನ್ನು ಕಾಣಲು ಚಿತ್ರಪಟದತ್ತ ಒಂದು ಕಣ್ಣಿರಲಿ. [ಕ್ರಿಕೆಟ್ ಸುದ್ದಿ ಸ್ವಾರಸ್ಯ] [ಚಿತ್ರಪಟ]
***
ಕ್ರಿಕೆಟ್ ಕಾಳಗ ಮುಗಿದ ನಂತರ ಭಾನುವಾರ ಏನಪ್ಪಾ ಮಾಡುವುದು ಎಂಬ ಚಿಂತೆ ನಿಮ್ಮದಾಗಿದ್ದರೆ, ಇತ್ತೀಚಿನ ದಿನಗಳಲ್ಲಿ ಬಿಡುಗಡೆಯಾದ ಅತ್ಯುತ್ತಮ ಚಿತ್ರಗಳಲ್ಲಿ ಒಂದು ಎನ್ನಬಹುದಾದ ಸಂಜು ವೆಡ್ಸ್ ಗೀತಾ ತೆರೆಗೆ ಅಪ್ಪಳಿಸಿದೆ. ನಮ್ಮ ಚಿತ್ರವಿಮರ್ಶಕರು ಬರೆದಿರುವಂತೆ ಇದೊಂದು ಅಮರ ಮಧುರ ಪ್ರೇಮ ಕಥೆ. ತನ್ನ ಅತ್ಯುತ್ತಮ ಚಿತ್ರಗಳಲ್ಲಿ ಇದೂ ಒಂದು ಹೇಳಿರುವ ಚಿತ್ರನಟಿ ರಮ್ಯಾ ಮನೋಜ್ಞವಾಗಿ ನಟಿಸಿದ್ದಾರಂತೆ.
ಕಿಟ್ಟಿಯೂ ಸಖತ್ತಾಗಿ ಅಭಿನಯಿಸಿದ್ದಾರಂತೆ. ತಪ್ಪದೆ ಚಿತ್ರಮಂದಿರದತ್ತ ಪಯಣ ಬಳಿಸಿ. ಸಾಧ್ಯವಾದರೆ, ನಿಮಗೆ ಚಿತ್ರ ಹೇಗೆ ಅನಿಸುತ್ತದೆ ಎಂಬ ಬಗ್ಗೆ ನಮಗೆ ಬರೆದು ತಿಳಿಸಿ. ಚಿತ್ರವಿಮರ್ಶಕರು ಏನೇ ಬರೆದರೂ ಚಿತ್ರದ ಹಣೆಬರಹ ನಿರ್ಧರಿಸುವ ಪ್ರೇಕ್ಷಕನ ವಿಮರ್ಶೆಯೇ ಅಂತಿಮ ಅಲ್ಲವೆ? [ಚಿತ್ರವಿಮರ್ಶೆ]
***
ಬೇಂದ್ರೆ ಅಜ್ಜ ಹೇಳಿದಂತೆ ಹೊಸ ವರುಷಕೆ ಹೊಸತು ಹೊಸತು ತರುವ ಯುಗಾದಿ ಹೊಸ ಆಶಯ, ಹೊಸ ಕನಸು, ಹೊಸ ಗುರಿಗಳನ್ನು ಹೊತ್ತು ಮತ್ತೆ ಬಂದಿದೆ. ಹಿಂದೂ ಸಂಪ್ರದಾಯಸ್ಥರಿಗೆ ಯುಗಾದಿ ಹೊಸ ವರ್ಷದ ಆರಂಭ. ಖರನಾಮ ಸಂವತ್ಸರ ನಿಮ್ಮ ಜೀವನದಲ್ಲಿಯೂ ಹೊಸ ಉತ್ಸಾಹ ಉಕ್ಕಿಸಲಿ. ಹೊಸ ವರುಷದೊಂದಿಗೆ ಹೊಸ ಚಿಂತನೆಗಳೂ ತೆರೆದುಕೊಳ್ಳಲಿ. ಸೋಮವಾರ ಹೇಗಿದ್ರೂ ರಜಾ. ಜೀವನದಲ್ಲಿ ಏನೇ ಕಷ್ಟು ಸುಖಗಳು ಬಂದರೂ ಎಲ್ಲರೊಂದಿಗೆ ಸಮನಾಗಿ ಹಂಚಿಕೊಳ್ಳುತ್ತ ಬಾಳುತ್ತೇವೆ ಎಂಬ ಆಶಯದೊಂದಿಗೆ ಬೇವು ಬೆಲ್ಲ ಹಂಚಿ. ಬಂಧುಬಾಂಧವರೊಂದಿಗೆ ಮೃಷ್ಟಾನ್ನದೊಡನೆ ಮಜಾ ಮಾಡುತ್ತ ಸಂತೋಷವಾಗಿ ಕಾಲ ಕಳೆಯಿರಿ.
ಅಂದ ಹಾಗೆ, ಚೈತ್ರದ ಕೋಗಿಲೆ ತನ್ನ ಇಂಪಾದ ಮಾಧುರ್ಯದೊಂದಿಗೆ ಕುಹೂಕುಹೂ ಎನ್ನಲು ಈಗಾಗಲೆ ಪ್ರಾರಂಭಿಸಿದೆ. ಕೋಗಿಲೆ ಯಾಕೆ ಹಾಡುತ್ತದೆ? ಕಾರಣವೇನೇ ಇದ್ದರೂ, ಮಾವಿನ ಮರದ ಮರೆಯ ಕೋಗಿಲೆಯ ಕೂಗು, ಹೊಂಗೆ ಹೂವ ತೊಂಗಲಲ್ಲಿಂದ ತೇಲಿತೇಲಿ ಬರುವ ಭೃಂಗದ ಸಂಗೀತ ಕೇಳಲು ಏನೋ ಒಂದು ಬಗೆಯ ಆನಂದ. ಖರನಾಮ ಸಂವತ್ಸರ ನಿಮ್ಮ ಕುಟುಂಬದವರಿಗೆಲ್ಲ ಅದೇ ಬಗೆಯ ಆನಂದ ನೀಡಲಿ. ಒನ್ ಇಂಡಿಯಾದಿಂದ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications