ಶ್ರೀಲಂಕಾ 300 ಚಿಲ್ರೆ ಸ್ಕೋರು, ಭಾರತಕ್ಕೇ 'ಫೈನಲ್' ಗೆಲುವು
ನವದೆಹಲಿ, ಏಪ್ರಿಲ್ 1: ಪಾಕ್ ವಿರುದ್ಧ ಮೊಹಾಲಿಯಲ್ಲಿ ಭರ್ಜರಿ ಜಯ ದಾಖಲಿಸಿದ ಭಾರತದ ತಾರಾಬಲ ಅದ್ಭುತವಾಗಿದ್ದು, ಶನಿವಾರ ವಿಶ್ವ ಕಪ್ ಎತ್ತಿಹಿಡಿಯುವ ಅದೃಷ್ಟ ಭಾರತಕ್ಕೆ ಎಂದು ನಾಡಿನ ಜ್ಯೋತಿಷಿಗಳು ಭವಿಷ್ಯವಾಣಿ ನುಡಿದಿದ್ದಾರೆ. ಕ್ಯಾಪ್ಟನ್ ಎಂ.ಎಸ್. ಧೋನಿ ತಾರಾಮಂಡಲ ನಿಗಿನಿಗಿ ಹೊಳೆಯುತ್ತಿದೆ. ಆತನಿಗೆ 30ರ ವಯಸ್ಸು. ಇದು ನಿಜಕ್ಕೂ ಆತನಿಗೆ ಅದೃಷ್ಟ ತಂದುಕೊಡಲಿದೆ.
ಶನಿವಾರದ ಫೈನಲ್ ತಾರಾಲಯ ಹೀಗಿದೆ:
* ಟಾಸ್ ಗೆಲುವು: ಶ್ರೀಲಂಕಾ
* ಶ್ರೀಲಂಕಾದಿಂದ 300ರ ಗಡಿಪಾರು
* ಲಸಿತ್ ಮಾಲಿಂಗ ಮಾರಕ ಬೌಲಿಂಗ್
* ಭಾರತದ ಮಧ್ಯಮ ಕ್ರಮಾಂಕ ಅಧಮ
* ಸೆಹ್ವಾಗ್, ಸಚಿನ್ ಭದ್ರ ಅಡಿಪಾಯ
* ಫೈನಲ್ ಓವರ್ ನಲ್ಲಿ ಭಾರತಕ್ಕೆ 'ಫೈನಲ್' ಗೆಲುವು
ಧೋನಿದು ಕನ್ಯಾ ರಾಶಿ. ಈತನ ತಾರಾ ಮಂಡಲದಲ್ಲಿ ರಾಹು ಮತ್ತು ಬುಧ ಗ್ರಹಗಳು ಸಕ್ರಿಯವಾಗಿವೆ. ಯೋಗಕಾರಕ ಕೇತು ದಶೆ ಮಾರ್ಚ್ 29ರಂದೇ ಪ್ರವೇಶ ಪಡೆದಿದ್ದಾನೆ. ಇದರಿಂದಲೇ ಪಾಕ್ ವಿರುದ್ಧ ಆ ಪಾಟಿ ಅದೃಷ್ಟ ಒಲಿದಿದ್ದು. ಏಪ್ರಿಲ್ 2ರಂದು ಇಂತಹುದೇ ಪ್ರಭಾವಳಿ ಸೃಷ್ಟಿಯಗಾಲಿದೆ. ಶ್ರೀಲಂಕಾದ ನಾಯಕ ಸಂಗಕ್ಕಾರನ ತಾರಾ ಮಂಡಲಕ್ಕಿಂತ ನಮ್ಮ ಧೋನಿದು ನಿಗಿನಿಗಿ ಹೊಳೆಯುತ್ತಿದೆ. ಅಲ್ಲಿಗೆ ಭಾರತ ಜಯಶಾಲಿಯಾಗುವುದು ಖಚಿತ. ಪಂದ್ಯ ಸ್ಪರ್ಧಾತ್ಮಕವಾಗಿರುತ್ತದೆ, ಸಪ್ಪೆಯಾಗಿರುವುದಿಲ್ಲ ಎಂದು ಜ್ಯೋತಿಷಿ ಅಜಯ್ ಭಾಂಬಿ ದೆಹಲಿಯಲ್ಲಿ ಹೇಳಿದ್ದಾರೆ. ಶ್ರೀಲಂಕಾ ಟಾಸ್ ಗೆಲ್ಲಲಿದೆ. 300ಕ್ಕಿಂತ ಹೆಚ್ಚು ರನ್ ಸಹ ಮಾಡಲಿದೆ. ಆದರೆ ಭಾರತಕ್ಕೆ 300ರ ಗುರಿ ತಲುಪುವುದು ಕಷ್ಟವಾಗದು ಎಂದೂ ಅವರು ಹೇಳಿದ್ದಾರೆ.
ಇದಕ್ಕೆ ಪುಷ್ಠಿ ನೀಡುವಂತೆ ಖಗೋಳ-ಸಂಖ್ಯಾಶಾಸ್ತ್ರಜ್ಞ ಅನುಪಮ್ ಕಪಿಲ್ ಅವರು ಹೀಗೆ ಭವಿಷ್ಯ ನುಡಿದಿದ್ದಾರೆ: ಶ್ರೀಲಂಕಾ ತಂಡ ಭರ್ಜರಿ ಪ್ರದರ್ಶನ ನೀಡಲಿದೆ. ಆದರೆ ಸಂಖ್ಯಾಶಾಸ್ತ್ರದ ಲೆಕ್ಕಾಚಾರದಂತೆ 'ಫೈನಲ್' ಗೆಲುವು ಭಾರತದ್ದೇ. ಮಧ್ಯಮ ಕ್ರಮಾಂಕದ ದಾಂಡಿಗರು ಅಷ್ಟೇನೂ ಉತ್ತಮ ಪ್ರದರ್ಶನ ತೋರುವುದಿಲ್ಲ. ಆದರೆ ಅದಕ್ಕೂ ಮುನ್ನ ಆರಂಭಿಕ ಸೆಹ್ವಾಗ್ ಮತ್ತು ತೆಂಡೂಲ್ಕರ್ ತಂಡಕ್ಕೆ ಜಯದ ಅಡಿಪಾಯ ಹಾಕಿಕೊಡುತ್ತಾರೆ. ಶ್ರೀಲಂಕಾ ಪರ ಲಸಿತ್ ಮಾಲಿಂಗ ಬೌಲಿಂಗ್ ಅರಿ ಭಯಂಕರವಾಗಿರುತ್ತದೆ. ಆದರೂ ಭಾರತ ಐವತ್ತೂ ಓವರ್ ಆಡಿ ಗೆಲುವು ದಕ್ಕಿಸಿಕೊಳ್ಳಲಿದೆ.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications