ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ತುಮಕೂರು ತೋಟದ ಮನೆಯಲ್ಲಿ ಮಾರಣಹೋಮ
ತೋಟದಲ್ಲಿ ಕಳೆದ 10 ವರ್ಷಗಳಿಂದ ತೋಟದ ಕಾವಲುಗಾರರಾಗಿ ಕೆಲಸ ಮಾಡುತ್ತಿದ್ದ ಸಿಂಗೋನಹಳ್ಳಿ ನಿವಾಸಿ ದೊಡ್ಡಯ್ಯ (68), ಪುಟ್ಟಮ್ಮ (60), ರಾಜಮ್ಮ (35) ಅವರುಗಳನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಲಾಗಿದೆ. ತೋಟದ ಸುತ್ತಮುತ್ತ ಕಾಡಿನಲ್ಲಿ ಸೌದೆಗಾಗಿ ಬಂದವರು, ನೀರು ಕೇಳಲು ತೋಟದ ಮನೆಗೆ ಹೋದಾಗ ಈ ಕೊಲೆ ಬೆಳಕಿಗೆ ಬಂದಿದೆ. ಕೋರ ಠಾಣೆ ಎಸ್.ಐ. ರಾಮಕೃಷ್ಣಯ್ಯ ಅವರ ತಂಡ ತನಿಖೆ ನಡೆಸುತ್ತಿದೆ.
ಜಮೀನು ವಿವಾದ ಕಾರಣ? : ದೊಡ್ಡಯ್ಯ ಅವರ ಸೋದರರ ಜೊತೆ ಜಮೀನು ವಿವಾದ ಹಾಗೂ ರಾಜಮ್ಮನ ಗಂಡನ ಮನೆಯವರಜೊತೆಯು ವೈಮನಸ್ಯ ಹೊಂದಿದ್ದರು. ರಾಜಮ್ಮನ ಮೃತ ದೇಹ ಅಡುಗೆ ಮನೆಯಲ್ಲಿ ಬಿದ್ದಿದ್ದು, ದೊಡ್ಡಯ್ಯ ಮತ್ತು ಪುಟ್ಟಮ್ಮನ ಮೃತ ದೇಹಗಳು ಹಾಲ್ನಲ್ಲಿ ಬಿದ್ದಿದ್ದವು. ಹೀಗಾಗಿ ಹತ್ಯೆಯ ಮುನ್ನ ಕೊಲೆಗಾರರ ನಡುವೆ ಸಾಕಷ್ಟು ಹೋರಾಟ ನಡೆಸಿರುವುದು ಕಂಡು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೊಡ್ಡಯ್ಯ ಅವರ ಸೋದರ ಸದ್ಯಕ್ಕೆ ನಾಪತ್ತೆಯಾಗಿದ್ದು, ವಿಚಾರಣೆ ಮುಂದುವರೆದಿದೆ ಎಂದು ರಾಮಕೃಷ್ಣಯ್ಯ ಹೇಳಿದ್ದಾರೆ.
Comments
English summary
Three persons found murdered in Praja Pragati Editor Naganna's Farm House. Doddaiah and his wife Puttamma and daughter Rajamma brutally killed. Kora Police Station Sub Inspector Ramakrishnaiah suspect land deal may be the main cause and Doddaiah's brother who is prime suspect is missing.
Story first published: Friday, April 1, 2011, 11:19 [IST]