ಯಡಿಯೂರಪ್ಪ ಹೊಸ ಪಕ್ಷ ಕಟ್ಟಲ್ಲ ಬಿಡ್ರಿ: ರೇಣುಕಾ
ಚಾಮರಾಜನಗರ,
ಮಾ. 24: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಹೊಸ ಪ್ರಾದೇಶಿಕ ಪಕ್ಷ ಸ್ಥಾಪನೆಯಾಗಲಿದೆ. ದೆಹಲಿಯಿಂದ ಬಂದ ಸಿಎಂಗೆ ಪಟ್ಟದಿಂದ ಕೆಳಗಿಳಿಯುವಂತೆ ಹೇಳಲಾಗಿದೆ ಎಂದು ಹಬ್ಬಿರುವ ವದಂತಿಗಳನ್ನು ಅಬಕಾರಿ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ತಳ್ಳಿಹಾಕಿದ್ದಾರೆ. ಇನ್ನೊಂದೆಡೆ, ಸಿಎಂ ಕರೆದಿರುವ ಸಭೆಗೆ ಕರುಣಾಕರ ರೆಡ್ಡಿ ಮಾತ್ರ ಹಾಜರಾಗಿದ್ದಾರೆ. ಭಿನ್ನರ ಒಂದು ತಂಡ ಹೈಕಮಾಂಡ್ ಜೊತೆ ಮಾತುಕತೆಗೆ ದೆಹಲಿಗೆ ತೆರಳಿದೆ. id="toptextpromo">ದೆಹಲಿಗೆ
ತಾವು ಮುಖ್ಯಮಂತ್ರಿಗಳ ಜೊತೆ ತೆರಳಿ, ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದಂತೆ ಕೇಂದ್ರದ ಸಚಿವರನ್ನು ಭೇಟಿ ಮಾಡಿದ್ದೇವೆ ವಿನಹ ಯಾವುದೇ ರೀತಿಯ ಭಿನ್ನಮತೀಯ ಚಟುವಟಿಕೆ ನಡೆಸಿಲ್ಲ ಎಂದು ರೇಣುಕಾ ಹೇಳಿದ್ದಾರೆ. ಯಡಿಯೂರಪ್ಪ ನಾಯಕತ್ವದ ಬಗ್ಗೆ ಪಕ್ಷದಲ್ಲಿ ಯಾವುದೇ ಅಪಸ್ವರವಿಲ್ಲ. ಅವರೆ ನಮ್ಮ ನಾಯಕರು ಎಂದು ರೇಣುಕಾಚಾರ್ಯ ಹೇಳಿದರು. ಸಿಎಂ ಅವರ ನಿವಾಸ ಕೃಷ್ಣಾದಲ್ಲಿ ನಡೆದಿರುವ ಸಭೆಯಲ್ಲಿ ಮತ್ತೊಮ್ಮೆ ಸಿಎಂ ಆಪ್ತರನ್ನು ಬಿಟ್ಟು ಉಳಿದವರು ಗೈರು ಹಾಜರಾಗಿದ್ದಾರೆ. ಜನಾರ್ದನ ರೆಡ್ಡಿ ಬಣ, ಈಶ್ವರಪ್ಪ ಬೆಂಬಲಿಗರು ಸೇರಿದಂತೆ ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ಟೊಂಕ ಕಟ್ಟಿ ನಿಂತವರೆಲ್ಲ ದೆಹಲಿಗೆ ತೆರಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ದೆಹಲಿಗೆ
ಜಗದೀಶ್ ಶೆಟ್ಟರ್ ತಡವಾಗಿ ಆಗಮಿಸಿದ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರು ಇಲಾಖೆಯ ಕೆಲಸದ ಒತ್ತಡದಿಂದಾಗಿ ತಡವಾಗಿ ಬಂದಿದ್ದರೇ ಹೊರತು ಬೇರೆ ಯಾವ ಕಾರಣವೂ ಇಲ್ಲ. ಬಿಜೆಪಿ ಆಂತರಿಕ ಬಿಕ್ಕಟ್ಟನ್ನು ಪರಿಹರಿಸಿಕೊಳ್ಳುವುದು ನಮಗೆ ಗೊತ್ತಿದೆ. ಯಾವುದೇ ತೊಂದರೆಯಿಲ್ಲದೆ ಸರ್ಕಾರ ಮುಂದಿನ ಯೋಜನೆಗಳತ್ತ ಗಮನ ಹರಿಸಲಿದೆ ಎಂದಿದ್ದಾರೆ.











Click it and Unblock the Notifications