ಕೈಗಾ ಭಯ ಬೇಡ: ನಿರ್ದೇಶಕರ ಅಭಯ

ಈ ಮಧ್ಯೆ, ಜಪಾನ್ ಅಣುಸ್ಥಾವರ ದುರಂತದ ಹಿನ್ನೆಲೆಯಲ್ಲಿ ಭಾರತದಲ್ಲಿನ ಎಲ್ಲ ಅಣು ಸ್ಥಾವರಗಳ ಸುರಕ್ಷತೆಯನ್ನು ಮುನ್ನೆಚ್ಚರಿಕೆಯ ಕ್ರಮವಾಗಿ ತಕ್ಷಣ ಪರೀಕ್ಷಿಸುವಂತೆ ಪ್ರಧಾನಿ ಮನಮೋಹನ್್ ಸಿಂಗ್ ಅವರು ಮಂಗಳವಾರ ಆದೇಶಿಸಿದಿದ್ದಾರೆ. ಭೂಕಂಪ, ಸುನಾಮಿಯಂತಹ ನೈಸರ್ಗಿಕ ವಿಕೋಪಗಳನ್ನು ತಡೆಯಲು ನಮ್ಮ ಅಣು ಕೇಂದ್ರಗಳು ಸುರಕ್ಷಿತವಾಗಿಯೇ ಎಂಬುದನ್ನು ಪರೀಕ್ಷಿಸುವಂತೆ ಅವರು ಸೂಚಿಸಿದ್ದಾರೆ.
'ಅರಬ್ಬಿ ಸಮುದ್ರದ ಪಶ್ಚಿಮ ಕರಾವಳಿಯಲ್ಲಿರುವ ಕಾರವಾರ ಭೂಕಂಪ ವಲಯಕ್ಕೆ ಬರುವುದಿಲ್ಲ. ಯಾವುದೇ ತುರ್ತು ಸ್ಥಿತಿ ಎದುರಿಸಲು ಮತ್ತು ವಿಕಿರಣ ಪತ್ತೆಹಚ್ಚಲು ಅತ್ಯಾಧುನಿಕ, ಸೂಕ್ಷ್ಮಾತಿಸೂಕ್ಷ ಸೆನ್ಸರ್-ಗಳನ್ನು ಹೊಂದಿದ್ದೇವೆ' ಎಂದು ಗುಪ್ತಾ ಬಹಿರಂಗಪಡಿಸಿದರು. ಕೈಗಾ ಸ್ಥಾವರದಲ್ಲಿ ನಾಲ್ಕು ಘಟಕಗಳು 2000ನೇ ಇಸವಿಯಿಂದ ಕಾರ್ಯಗತವಾಗಿದೆ. ಅಣು ರಿಯಾಕ್ಟರ್-ಗಳ ಆಯಸ್ಸು ಸುಮಾರು 80 ವರ್ಷ. ಇವು ಗರಿಷ್ಠ ತೀವ್ರತೆಯ ಭೂಕಂಪವನ್ನು ಎರಡು ಬಾರಿ ಮಾತ್ರ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿರುತ್ತವೆ. ಎರಡಕ್ಕಿಂತ ಹೆಚ್ಚು ಬಾರಿ ಭಾರಿ ಭೂಕಂಪವಾದರೆ ರಿಯಾಕ್ಟರ್-ಗೆ ಅಪಾಯ ಕಟ್ಟಿಟ್ಟಬುತ್ತಿ.
ಗಮನಾರ್ಹವೆಂದರೆ ಚೆನ್ನೈ ಬಳಿಯಿರುವ ಕಲ್ಪಾಕಂ ಅಣು ಸ್ಥಾವರಕ್ಕೆ 2004ರಲ್ಲಿ ಭೀಕರ ಸುನಾಮಿ ಅಪ್ಪಳಿಸಿತ್ತು. ಆದರೆ ರಿಯಾಕ್ಟರ್-ಗೆ ಏನೂ ಆಗಿರಲಿಲ್ಲ. ಸುನಾಮಿ ಅಪ್ಪಳಿಸುತ್ತಿದ್ದಂತೆ ರಿಯಾಕ್ಟರ್ ತನ್ನಷ್ಟಕ್ಕೆ ತಾನೇ ಸ್ಥಗಿತಗೊಂಡಿತ್ತು. ಕೆಲ ದಿನಗಳ ನಂತರ ಕಾರ್ಯಾರಂಭ ಮಾಡಿತು. ಆ ರಿಯಾಕ್ಟರ್-ನ ವಿದ್ಯುತ್ ಉಪಕರಣಗಳು ನೆಲ ಮಟ್ಟಕ್ಕಿಂತ ಎತ್ತರದಲ್ಲಿರುವುದರಿಂದ ಸುನಾಮಿ ಬಂದರೂ ಏನೂ ಆಗಿರಲಿಲ್ಲ. ಸುನಾಮಿ ಬಳಿಕ ರಿಯಾಕ್ಟರ್ ಸುತ್ತ ಎತ್ತರದ ಗೋಡೆ ನಿರ್ಮಿಸಲಾಗಿದೆ. ಇನ್ನು, ಗುಜರಾತಿನ ಕಛ್-ನಲ್ಲಿ ಭಾರಿ ಭೂಕಂಪ ಸಂಭವಿಸಿದಾಗಲೂ ಕಾಕ್ರಾಪಾರ್ ಅಣು ಸ್ಥಾವರ ಸ್ಥಗಿತಗೊಂಡಿರಲಿಲ್ಲ.
-
Viral Video: ಅಮೆರಿಕದ ಯುದ್ಧ ಸ್ಮಾರಕದ ಮುಂದೆ ಭಾರತೀಯ ದಂಪತಿ ಎಡವಟ್ಟು: ಶುರುವಾಯ್ತು ಗಡೀಪಾರು ಭೀತಿ, ವೈರಲ್ ವಿಡಿಯೋ -
"ನಂದಿನಿ" ನಕಲಿ ತುಪ್ಪಕ್ಕೆ ಕೆಎಂಎಫ್ ಕ್ಯೂಆರ್ ಕೋಡ್ ಅಸ್ತ್ರ; ಪತ್ತೆ ಹಚ್ಚುವುದು ಈಗ ಸುಲಭ -
Byadgi Chilli Market: ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆ ಮೇಲೆ ಯುದ್ಧದ ಪ್ರಭಾವ, ರಫ್ತು ಸ್ಥಗಿತ -
Gold Price Today: ಆಭರಣ ಪ್ರಿಯರಿಗೆ ಬಿಗ್ ರಿಲೀಫ್: ಬೆಂಗಳೂರಿನಲ್ಲಿ ಚಿನ್ನದ ಬೆಲೆ ದಿಢೀರ್ ಇಳಿಕೆ; ಇಂದಿನ ದರ ಇಲ್ಲಿದೆ -
Horoscope March 9; ಈ ರಾಶಿಯವರ ಅದೃಷ್ಟವೇ ಬದಲಾಗುತ್ತೆ: 12 ರಾಶಿ ಭವಿಷ್ಯ ತಿಳಿಯಿರಿ -
Imd Weather Forecast: ಭಾರೀ ಬಿಸಿಲಿನ ನಡುವೆ ಈ ಭಾಗಗಳಲ್ಲಿ ಮಳೆ: ಐಎಂಡಿ ಮುನ್ಸೂಚನೆ ಇಲ್ಲಿದೆ -
Namma Metro Phase 3 Project: ಮೆಟ್ರೋ 2 ಕಾರಿಡಾರ್ ನಿರ್ಮಾಣಕ್ಕೆ 2031ರ ಹೊಸ ಗಡುವು -
Sensex crash: ಷೇರು ಮಾರುಕಟ್ಟೆಯಲ್ಲಿ ಭಾರಿ ಸಂಚಲನ; ಸೆನ್ಸೆಕ್ಸ್ 2100 ಅಂಕ ಕುಸಿತ -
E-Bus: ಕರ್ನಾಟಕದ ಹೊಸ ಯೋಜನೆಯಡಿ ಗ್ರಾಮೀಣ ಭಾಗಗಳಲ್ಲೂ ಓಡಾಡಲಿವೆ 1950 ಎಲೆಕ್ಟ್ರಿಕ್ ಬಸ್ಗಳು -
Prediction on Donald Trump: ಟ್ರಂಪ್ ಗೆಲುವು, ಇರಾನ್ ಯುದ್ಧ ಭವಿಷ್ಯ: 3 ಭವಿಷ್ಯವಾಣಿಯಲ್ಲಿ 2 ನಿಜ, ಮತ್ತೊಂದೇನು -
ಕರ್ನಾಟಕದಲ್ಲಿ 40 ಡಿಗ್ರಿ ಸೆಲ್ಸಿಯಸ್ ದಾಟಿದೆ ಉಷ್ಣಾಂಶ: ಈಗಿನ್ನೂ ಮಾರ್ಚ್, ಮೇ ಕಥೆ ಹೇಗೆ? ಬಿಸಿಗಾಳಿಗೆ ಬಸವಳಿದ ಜನ -
Sanju Samson: ಟಿ20 ವಿಶ್ವಕಪ್ ಗೆಲುವಿನ ಬಳಿಕ ಕ್ರಿಕೆಟ್ ದೇವರ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಸಂಜು ಸ್ಯಾಮ್ಸನ್












Click it and Unblock the Notifications