ಕೈಗಾ ಭಯ ಬೇಡ: ನಿರ್ದೇಶಕರ ಅಭಯ

ಈ ಮಧ್ಯೆ, ಜಪಾನ್ ಅಣುಸ್ಥಾವರ ದುರಂತದ ಹಿನ್ನೆಲೆಯಲ್ಲಿ ಭಾರತದಲ್ಲಿನ ಎಲ್ಲ ಅಣು ಸ್ಥಾವರಗಳ ಸುರಕ್ಷತೆಯನ್ನು ಮುನ್ನೆಚ್ಚರಿಕೆಯ ಕ್ರಮವಾಗಿ ತಕ್ಷಣ ಪರೀಕ್ಷಿಸುವಂತೆ ಪ್ರಧಾನಿ ಮನಮೋಹನ್್ ಸಿಂಗ್ ಅವರು ಮಂಗಳವಾರ ಆದೇಶಿಸಿದಿದ್ದಾರೆ. ಭೂಕಂಪ, ಸುನಾಮಿಯಂತಹ ನೈಸರ್ಗಿಕ ವಿಕೋಪಗಳನ್ನು ತಡೆಯಲು ನಮ್ಮ ಅಣು ಕೇಂದ್ರಗಳು ಸುರಕ್ಷಿತವಾಗಿಯೇ ಎಂಬುದನ್ನು ಪರೀಕ್ಷಿಸುವಂತೆ ಅವರು ಸೂಚಿಸಿದ್ದಾರೆ.
'ಅರಬ್ಬಿ ಸಮುದ್ರದ ಪಶ್ಚಿಮ ಕರಾವಳಿಯಲ್ಲಿರುವ ಕಾರವಾರ ಭೂಕಂಪ ವಲಯಕ್ಕೆ ಬರುವುದಿಲ್ಲ. ಯಾವುದೇ ತುರ್ತು ಸ್ಥಿತಿ ಎದುರಿಸಲು ಮತ್ತು ವಿಕಿರಣ ಪತ್ತೆಹಚ್ಚಲು ಅತ್ಯಾಧುನಿಕ, ಸೂಕ್ಷ್ಮಾತಿಸೂಕ್ಷ ಸೆನ್ಸರ್-ಗಳನ್ನು ಹೊಂದಿದ್ದೇವೆ' ಎಂದು ಗುಪ್ತಾ ಬಹಿರಂಗಪಡಿಸಿದರು. ಕೈಗಾ ಸ್ಥಾವರದಲ್ಲಿ ನಾಲ್ಕು ಘಟಕಗಳು 2000ನೇ ಇಸವಿಯಿಂದ ಕಾರ್ಯಗತವಾಗಿದೆ. ಅಣು ರಿಯಾಕ್ಟರ್-ಗಳ ಆಯಸ್ಸು ಸುಮಾರು 80 ವರ್ಷ. ಇವು ಗರಿಷ್ಠ ತೀವ್ರತೆಯ ಭೂಕಂಪವನ್ನು ಎರಡು ಬಾರಿ ಮಾತ್ರ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿರುತ್ತವೆ. ಎರಡಕ್ಕಿಂತ ಹೆಚ್ಚು ಬಾರಿ ಭಾರಿ ಭೂಕಂಪವಾದರೆ ರಿಯಾಕ್ಟರ್-ಗೆ ಅಪಾಯ ಕಟ್ಟಿಟ್ಟಬುತ್ತಿ.
ಗಮನಾರ್ಹವೆಂದರೆ ಚೆನ್ನೈ ಬಳಿಯಿರುವ ಕಲ್ಪಾಕಂ ಅಣು ಸ್ಥಾವರಕ್ಕೆ 2004ರಲ್ಲಿ ಭೀಕರ ಸುನಾಮಿ ಅಪ್ಪಳಿಸಿತ್ತು. ಆದರೆ ರಿಯಾಕ್ಟರ್-ಗೆ ಏನೂ ಆಗಿರಲಿಲ್ಲ. ಸುನಾಮಿ ಅಪ್ಪಳಿಸುತ್ತಿದ್ದಂತೆ ರಿಯಾಕ್ಟರ್ ತನ್ನಷ್ಟಕ್ಕೆ ತಾನೇ ಸ್ಥಗಿತಗೊಂಡಿತ್ತು. ಕೆಲ ದಿನಗಳ ನಂತರ ಕಾರ್ಯಾರಂಭ ಮಾಡಿತು. ಆ ರಿಯಾಕ್ಟರ್-ನ ವಿದ್ಯುತ್ ಉಪಕರಣಗಳು ನೆಲ ಮಟ್ಟಕ್ಕಿಂತ ಎತ್ತರದಲ್ಲಿರುವುದರಿಂದ ಸುನಾಮಿ ಬಂದರೂ ಏನೂ ಆಗಿರಲಿಲ್ಲ. ಸುನಾಮಿ ಬಳಿಕ ರಿಯಾಕ್ಟರ್ ಸುತ್ತ ಎತ್ತರದ ಗೋಡೆ ನಿರ್ಮಿಸಲಾಗಿದೆ. ಇನ್ನು, ಗುಜರಾತಿನ ಕಛ್-ನಲ್ಲಿ ಭಾರಿ ಭೂಕಂಪ ಸಂಭವಿಸಿದಾಗಲೂ ಕಾಕ್ರಾಪಾರ್ ಅಣು ಸ್ಥಾವರ ಸ್ಥಗಿತಗೊಂಡಿರಲಿಲ್ಲ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications