ಮನೆಗಳಿಂದ ಹೊರಗೆ ಬರಬೇಡಿ: ಜಪಾನ್ ಅಧಿಕೃತ ಆದೇಶ

ಕರಾಳ ಶುಕ್ರವಾರ ಸಂಭವಿಸಿದ ಮಹಾ ಭೂಕಂಪ ಮತ್ತು ತದನಂತರದ ಸುನಾಮಿಯಿಂದಾಗಿ 10 ಸಾವಿರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಲಕ್ಷಾಂತರ ಮಂದಿ ಅದರಿಂದ ಅವಾಂತರಕ್ಕೊಳಗಾಗಿದ್ದಾರೆ. ವಿಶ್ವದ ಮೂರನೇ ಅರ್ಥ ವ್ಯವಸ್ಥೆ ನೆಲಕಚ್ಚಿದೆ. ಈ ಸಂದರ್ಭದಲ್ಲಿ ಅಣು ವಿಕಿರಣ ನಾಲ್ಕು ಘಟಕಗಳಿಂದ ಹೊರಸೂಸುತ್ತಿದ್ದು ಜನರು ಮನೆಗಳೊಳಗೇ ಸುರಕ್ಷಿತವಾಗಿರಬೇಕು ಎಂದು ಪ್ರಧಾನಿ ನಾಟೊ ಕನ್ ಟಿವಿ ಪ್ರಸಾರ ಭಾಷಣದಲ್ಲಿ ದೇಶದ ಜನತೆಗೆ ಮನವಿ ಮಾಡಿದ್ದಾರೆ. ರಿಯಾಕ್ಟರ್-ಗಳನ್ನು ಸ್ಥಿರಗೊಳಿಸಿ, ಪರಿಸ್ಥಿತಿಯನ್ನು ತಹಬಂದಿಗೆ ತರಲು ಸುಮಾರು 50 ಅಧಿಕಾರಿಗಳು ಹರಸಾಹಸ ಪಡಸುತ್ತಿದ್ದಾರೆ. ಘಟಕಗಳು ಸ್ವಯಂ ಶೀತಲೀಕರಣಗೊಳ್ಳುವ ಶಕ್ತಿಯನ್ನು ಕಳೆದುಕೊಂಡಿವೆ. ಇದರಿಂದ ವಿಕಿರಣ ಒಂದೇ ಸಮನೆ ಹೊರಬರುತ್ತಿದೆ.
ಆರಂಭದಲ್ಲಿ ಕಂಡುಬಂದಿದ್ದ ವಿಕಿರಣಕ್ಕಿಂತ ಮಂಗಳವಾರ ಬೆಳಗ್ಗೆ 100 ಪಟ್ಟು ಅಧಿಕವಾಗಿದೆ. ಆತಂಕದ ವಿಷಯವೆಂದರೆ ಇದು ಇನ್ನೂ ಹೆಚ್ಚಾಗುವ ಲಕ್ಷಣಗಳಿವೆ. ಇದು ಹೀಗೇ ಮುಂದುವರಿದರೆ ನಿಜಕ್ಕೂ ಮಾರಕವಾಗಲಿದೆ ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ. ಎರಡನೇ ಮಹಾಯುದ್ಧದ ವೇಳೆ ಹಿರೋಶಿಮಾ ಮತ್ತು ನಾಗಸಾಕಿ ಅಣು ಬಾಂಬ್ ಸ್ಫೋಟಗಳಿಗೆ ತುತ್ತಾದ ಬಳಿಕ ಜಪಾನ್ ಎದುರಿಸುತ್ತಿರುವ ಭೀಕರ ಅಣು ದುರಂತ ಇದಾಗಿದೆ. 1986ರಲ್ಲಿ ಚೆರ್ನೊಬಿಲ್, ಉಕ್ರೇನ್ ಅಣುಸ್ಥಾವರ ಸ್ಫೋಟದ ಬಳಿಕ ವಿಶ್ವದಲ್ಲಿ ಬಂದೆರಗಿದ ದೊಡ್ಡ ದುರಂತವಿದು.
'ವಿಕಿರಣವಾಗುತ್ತಿರುವ ಬಗ್ಗೆ ಖಚಿತ ಮಾಹಿತಿ ಇದೆ. ಆದ್ದರಿಂದ ಫುಕೋಶಿಮಾ ಸ್ಥಾವರದ 30 ಕಿ.ಮೀ. ಆಸುಪಾಸಿನಲ್ಲಿರುವ ದಯವಿಟ್ಟು ಮನೆಗಳಂದ ಆಚೆಗೆ ಬರಬೇಡಿ. ದಯವಿಟ್ಟು ಒಳಗೇ ಇದ್ದು ಬಿಡಿ. ದಯವಿಟ್ಟು ಕಿಟಕಿಗಳನ್ನು ಮುಚ್ಚಿ. ಗಾಳಿ ಒಳಬರದಂತೆ ದಯವಿಟ್ಟು ಎಚ್ಚರವಹಿಸಿ. ವೆಂಟಿಲೇಟರ್-ಗಳಿಗೆ ಚಾಲನೆ ನೀಡಲೇಬೇಡಿ' ಎಂದು ಸಂಪುಟ ಕಾರ್ಯದರ್ಶಿ ಯುಕಿಯೊ ಎಡಾನೊ ಅಪಾಯವಲಯದಲ್ಲಿನ ಜನರಲ್ಲಿ ಭಿನ್ನವಿಸಿಕೊಡಿದ್ದಾರೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications