ಸುನಾಮಿಗೆ ಜಪಾನ್ ಕರಾವಳಿ ಅಲ್ಲೋಲ ಕಲ್ಲೋಲ

ಟೋಕಿಯೊದ ಈಶಾನ್ಯ ಭಾಗದಲ್ಲಿ ಅಂದರೆ ಟೋಕಿಯೋದಿಂದ 240 ಮೈಲು ದೂರದಲ್ಲಿ ಆರು ಮೈಲು ಆಳದಲ್ಲಿ ಈ ಭೂಕಂಪ ಸಂಭವಿಸಿದೆ. ಗಮನಾರ್ಹವೆಂದರೆ ಬುಧವಾರವಷ್ಟೇ ಇಲ್ಲಿ 7.2 ಪ್ರಮಾಣದ ಭೂಕಂಪ ಸಂಭವಿಸಿತ್ತು. ಆದ್ದರಿಂದ ಈ ಹಿಂದೆಯೇ ಜಪಾನ್, ರಷ್ಯಾ, ಮರ್ಕಸ್ ದ್ವೀಪ ಮತ್ತು ಉತ್ತರ ಮರಿಯಾನಾ ಭಾಗಗಳಲ್ಲಿ ಸುನಾಮಿ ಎಚ್ಚರಿಕೆ ಜಾರಿಯಲ್ಲಿತ್ತು. ಅಮೆರಿಕದ ಹವಾಯಿ, ಮಿಕ್ಸಿಕೊ, ಚಿಲಿ, ಪೆರು, ಫಿಲಿಫ್ಫೀನ್ಸ್, ಇಂಡೋನೇಷ್ಯಾ ಮತ್ತು ಗೌಮ್, ತೈವಾನ್ ಭಾಗಗಳಲ್ಲೂ ಸುನಾಮಿ ಎಚ್ಚರಿಕೆ ಘೋಷಿಸಲಾಗಿದೆ.
ಜಪಾನಿನ ಕರಾವಳಿ ಉದ್ದಕ್ಕೂ ಅನೇಕ ಕಡೆಗಳಲ್ಲಿ ಸುನಾಮಿ ರೌದ್ರಾವತಾರ ತಾಳಿರುವುದು ಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ. ತಟದಲ್ಲಿ ಹಡಗುಗಳು, ರಸ್ತೆಗಳಲ್ಲಿ ವಾಹನಗಳು, ಇಡೀ ಮನೆಗಳೇ ಕೊಚ್ಚಿ ಹೋಗಿವೆ. ದೊಡ್ಡ ಕಟ್ಟಡವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೃಹತ್ ಬೆಂಕಿಯುಂಡೆಯಾಗಿ ಜ್ವಲಿಸುತ್ತಿದೆ. ರೈಲು ಸಂಚಾರ ಸ್ಥಗಿತಗೊಂಡಿದೆ. ಟೋಕಿಯೋದ ಕುಡಾನ್ ಕೈಕನ್-ನಲ್ಲಿ ಬೃಹತ್ ಸಭಾಭವನವೊಂದು ಧರೆಗುರುಳಿದೆ. ಇದರಡಿ ಅಸಂಖ್ಯಾತ ಮಂದಿ ಸಿಲುಕಿದ್ದಾರೆ. ಅನೇಕ ಹಳ್ಳಿಗಳು ಕೊಚ್ಚಿ ಹೋಗಿವೆ.
ಇನ್ನು, ಕೆಸೆನ್ನುಮಾ ನಗರದ ಬಳಿ ದೊಡ್ಡ ಹಡಗೊಂದು ಸಮುದ್ರದಿಂದ ಮನೆಗಳತ್ತ ನುಗ್ಗಿ ಭಾರಿ ಅನಾಹುತ ಸೃಷ್ಟಿಸಿದೆ ಎಂದು ಸರಕಾರಿ ಟಿವಿ ಎನ್ ಎಚ್ ಕೆ ಹೇಳಿದೆ. ಟಿವಿ ಕಚೇರಿಯೂ ಥರಗುಟ್ಟಿದೆ. ಉದ್ಯೋಗಿಗಳು ದಿಕ್ಕಾಪಾಲಾಗಿ ಓಡುತ್ತಿರುವುದನ್ನು ಟಿವಿ ಬಿತ್ತರಿಸಿದೆ. ಅಧಿಕಾರಿಗಳು ಪರಿಹಾರ ಕಾರ್ಯ ಕೈಗೊಳ್ಳಲು ಮತ್ತು ಅನಾಹುತದ ಪ್ರಮಾಣವನ್ನು ಅಂದಾಜು ಮಾಡಲು ಪರದಾಡುತ್ತಿದ್ದಾರೆ.
ಮಧ್ಯಾಹ್ನ ಭೀಕರ ಭೂಕಂಪ ಸಂಭವಿಸಿದ ಬಳಿಕ ಬಲಶಾಲಿ ಪಶ್ಚಾತ್ ಕಂಪನಗಳೂ ಕಂಡುಬಂದಿವೆ. ಅಮೆರಿಕದ ಭೂಗರ್ಭ ಸರ್ವೆ ವಿಭಾಗ ಮೊದಲ ಭೂಕಂಪದ ಪ್ರಮಾಣವನ್ನು 8.9 ಎಂದು ಅಳೆದಿದ್ದರೆ ಜಪಾನಿನ ಹವಾಮಾನ ಇಲಾಖೆಯು ಭೂಕಂಪದ ತೀವ್ರತೆ 7.9 ರಷ್ಟಿತ್ತು ಎಂದು ತಿಳಿಸಿದೆ. ಜತೆಗೆ ಜಪಾನಿನ ಪೆಸಿಫಿಕ್ ತಟದಲ್ಲಿ ಇದೇ ಸಂದರ್ಭದಲ್ಲಿ ಮತ್ತೆ ಸುನಾಮಿ ಅಪ್ಪಳಿಸುವ ಭೀತಿಯನ್ನೂ ವ್ಯಕ್ತಪಡಿಸಿದೆ.
-
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆಗೆ ಚಾಲನೆ: ಕಾಮಗಾರಿಗೆ 3,348 ಕೋಟಿ ರೂ ಟೆಂಡರ್ ಆಹ್ವಾನ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ -
Dolly Dhananjay: ಆ ಚಿತ್ರಕಥೆ.. 6 ತಿಂಗಳು ನನ್ನ ಟೇಬಲ್ ಮೇಲೆ ಬಿದ್ದಿತ್ತು: ನಟ ಡಾಲಿ ಧನಂಜಯ್ -
SSLC Maths Exam: ಎಸ್ಎಸ್ಎಲ್ಸಿ ಗಣಿತ ಪರೀಕ್ಷೆಯಲ್ಲಿ ಪಠ್ಯದ ಹೊರತಾದ ಪ್ರಶ್ನೆಗಳ ಆರೋಪ, ಕೃಪಾಂಕಕ್ಕಾಗಿ ಹೆಚ್ಚಿದ ಒತ್ತಾಯ -
ಪರಮಾತ್ಮ ಹೇಳಿದ್ರೂ ಹಿಂದೆ ಸರಿಯಲ್ಲ ಎಂದಿದ್ದ ಕಾಂಗ್ರೆಸ್ನ ಸಾದಿಕ್ ಪೈಲ್ವಾನ್ ನಾಮಪತ್ರ ಹಿಂಪಡೆಯಲು ಇದೆ ಹಲವು ಕಾರಣ -
Tamil Nadu Election: ತನ್ನ ಡ್ರೈವರ್ ಮಗನಿಗೆ MLA ಟಿಕೆಟ್ ಘೋಷಿಸಿದ ನಟ ದಳಪತಿ ವಿಜಯ್, ಭಾವುಕ ಕ್ಷಣದ ವಿಡಿಯೋ ವೈರಲ್ -
ವಿರಾಟ್ ಅಸಲಿ ಆಟ ಇನ್ನೂ ಬಾಕಿಯಿದೆ; ಕಿಂಗ್ ಕೊಹ್ಲಿಗೆ ವಿಶೇಷ ಮನವಿ ಮಾಡಿಕೊಂಡ ಅಂಬಟಿ ರಾಯುಡು, ಭಾರೀ ವೈರಲ್ -
Bengaluru Weather: ನಗರಕ್ಕೆ ಇಂದು ಸೋಮವಾರವು ಗುಡುಗು ಸಹಿತ ಮಳೆ ಎಚ್ಚರಿಕೆ, ಸವಾರರೇ ಗಮನಿಸಿ -
Prakash Raj Mother passed Away: ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ ನಿಧನ, ಚಿತ್ರರಂಗದ ಗಣ್ಯರಿಂದ ಸಂತಾಪ












Click it and Unblock the Notifications