ಜಪಾನ್ ಭೂಕಂಪ: ವ್ಯಾಪಕ ಸುನಾಮಿ ಭೀತಿ

ಈ ಮಧ್ಯೆ, ಜಪಾನಿನಲ್ಲಿ ಅಣುಶಕ್ತಿ ತುರ್ತು ಪರಿಸ್ಥಿತಿಯನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಒಂದು ಸ್ಥಾವರಕ್ಕೆ ಬೆಂಕಿ ಬಿದ್ದಿದೆ. ನಾಲ್ಕು ಸ್ಥಾವರಗಳನ್ನು ಮುನ್ನೆಚ್ಚರಿಕೆಯಾಗಿ ಸ್ಥಗಿತಗೊಳಿಸಲಾಗಿದೆ. ಒನಗಾವಾ ಅಣುಶಕ್ತಿ ಉತ್ಪಾದನಾ ಕೇಂದ್ರದ 11 ಸ್ಥಾವರಗಳನ್ನು ಸ್ವಯಂನಿಯಂತ್ರಣದಲ್ಲಿ ಮುಚ್ಚಲಾಗಿದೆ.
ಇದರ ಜತೆಗೆ ರಷ್ಯಾ, ತೈವಾನ್, ಫಿಲಪ್ಪೀನ್ಸ್, ಇಂಡೋನೇಷ್ಯಾ, ಪಪುವಾ ನ್ಯೂ ಗಿನಿ, ಫಿಜಿ, ಮೆಕ್ಸಿಕೊ, ಗ್ವಾಟೆಮಾಲ, ಎಲ್ ಸಾಲ್ವಡಾರ್, ಕೋಸ್ಟರಿಕಾ, ನಿಕರಾಗುವಾ, ಪನಾಮಾ, ಹೋಂಡುರಾಸ್, ಚಿಲಿ, ಈಕ್ವಡಾರ್, ಕೊಲಂಬಿಯಾ, ಪೆರು ಸಹ ಸುನಾಮಿಗೆ ತುತ್ತಾಗುವ ಅಪಾಯಿವಿದೆ ಎಂದು ಎಚ್ಚರಿಸಲಾಗಿದೆ. ಟೋಕಿಯೋದಲ್ಲಿನ ಎರಡೂ ಬೃಹತ್ ವಿಮಾನ ನಿಲ್ದಾಣಗಳನ್ನು ಮುಚ್ಚಲಾಗಿದೆ.
ವಿಡಿಯೋಗಳು: ಸುನಾಮಿ ಅಲೆಗಳ ರೌದ್ರ ನರ್ತನ ಚಿತ್ರಗಳು | ಸುನಾಮಿ ಅಲೆಗಳ ದಾಳಿಗೆ ಕುಬ್ಜವಾದ ಜಪಾನ್
ಶುಕ್ರವಾರ ಜಪಾನಿನಲ್ಲಿ ಈ ಹಿಂದೆ 140 ವರ್ಷಗಳಲ್ಲಿ ಎಂದೂ ಕಂಡು ಕೇಳರಿಯದ ಭೀಕರ ಭೂಕಂಪ, ಸುನಾಮಿ ರುದ್ರನರ್ತನ ಮಾಡತೊಡಗಿದೆ. 10 ಮೀಟರ್ ಎತ್ತರದ ದೈತ್ಯ ಅಲೆಗಳು ಇದುವರೆಗೆ ತಿಳಿದುಬಂದ ಮಾಹಿತಿಯಂತೆ 50 ಮಂದಿಯನ್ನು ಆಹುತಿ ತೆಗೆದುಕೊಂಡಿದೆ. ಸಾವು ನೋವಿನ ಸಂಖ್ಯೆ ಇನ್ನೂ ಅಧಿಕವಾಗುವ ಲಕ್ಷಣಗಳಿವೆ.
2004ರಲ್ಲಿ ಸುಮಾರು 2 ಲಕ್ಷ ಜನರನ್ನು ಆಹುತಿ ತೆಗೆದುಕೊಂಡಿದ್ದ ಇಂಡೋನೇಷ್ಯಾ ಸುನಾಮಿ ಸ್ಥಳೀಯ ಕಾಲಮಾನದ ಪ್ರಕಾರ ಇಂದು (ಮಾರ್ಚ್11) ನಡು ರಾತ್ರಿ ಮತ್ತೆ ಅಪ್ಪಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಹವಾಯಿ ದ್ವೀಪಗಳಲ್ಲಿ ಮಾರ್ಚ್ 12ರ ಬೆಳಗಿನ ಜಾವ 3 ಗಂಟೆಗೆ ಮೊದಲ ಸುನಾಮಿ ಅಲೆ ಅಪ್ಪಳಿಸುವ ಬೆದರಿಕೆ ಇದೆ. ಉತ್ತರ ಫಿಲಿಪ್ಪೀನ್ಸ್ ನ ಮೂರು ಪ್ರಾಂತ್ಯಗಳಲ್ಲಿ ಜನರನ್ನು ಎತ್ತರದ ಪ್ರದೇಶಗಳಿಗೆ ಕೊಂಡೊಯ್ಯಲಾಗುತ್ತಿದೆ. ಎಚ್ಚರಿಕೆಯ ಸಂದೇಶಗಳನ್ನು ಯಾರೂ ಕಡೆಗಣಿಸುವ ಸ್ಥಿತಿಯಲ್ಲಿ ಇಲ್ಲ. ಪರಿಸ್ಥತಿ ಅಷ್ಟೊಂದು ನಿಗೂಢವಾಗಿ, ಗಂಭೀರವಾಗಿದೆ. ಅನೇಕ ಪಟ್ಟ ಪುಟ್ಟ ದ್ವೀಪಗಳು ಬೆಳಗಾಗುವುದರೊಳಗಾಗಿ ಕೊಚ್ಚಿ ಹೋಗುವ ಸಾಧ್ಯತೆ ಇದೆ.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications