ಪೆಟ್ರೋಲ್ ಕದಿಯುವ ಐನಾತಿ ಕಳ್ಳರು ಬಲೆಗೆ

ಬಂಧನಕ್ಕೊಳಗಾದವರನ್ನು ಕಾಂತರಾಜು, ವಿಜಯ್ ಕುಮಾರ್ ಮತ್ತು ಸುರೇಶ ಎಂದು ಗುರುತಿಸಲಾಗಿದೆ. ಮಂಗಳೂರು ಬಂದರಿನಿಂದ ಬೆಂಗಳೂರಿನವರೆಗೆ ಪೆಟ್ರೋಲ್ ಮತ್ತು ಡಿಸೇಲ್ ಸಾಗಿಸುತ್ತಿದ್ದ ಎಂಆರ್ಪಿಎಲ್ ಪೈಪ್ಲೈನ್ ಕೊರೆದು ಪೆಟ್ರೋಲ್ ಕಳ್ಳತನ ನಡೆಸುತ್ತಿದ್ದ ಪ್ರಕರಣ ಕಳೆದ 15 ದಿನಗಳ ಹಿಂದೆ ಪತ್ತೆಯಾಗಿತ್ತು.ಸುಮಾರು 14 ಲಕ್ಷ ರೂ.ಗೆ ಅಧಿಕ ಮೌಲ್ಯದ ಇಂಧನ ಕಳುವಾಗಿದೆ ಎಂದು ಕಂಪೆನಿಯ ಇಂಜಿನಿಯರ್ ಪ್ರಸಾದ್ ಎಂಬವರು ಗೋಣಿಬೀಡು ಪೊಲೀಸರಿಗೆ ದೂರು ನೀಡಿದ್ದರು.
ಆದರೆ ಅಲ್ಲಿನ ಪಿಎಸ್ಐ ಸುನೀಲ್ ಕುಮಾರ್ ಸಮರ್ಪಕವಾಗಿ ಸ್ಪಂದಿಸದ ಕಾರಣ ಅವರು ಜಿಲ್ಲಾ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದರು. ಸುನೀಲ್ ಕುಮಾರ್ ಅಮಾನತು ಮಾಡಿ, ಎಸ್ ಐ ಗುರುಪ್ರಸಾದ್ ಅವರ ತಂಡವನ್ನು ತನಿಖೆಗೆ ನೇಮಿಸಲಾಯಿತು. ಈ ಬಗ್ಗೆ ಪೊಲೀಸರು 14 ಮಂದಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದ ಪ್ರಮುಖ ಆರೋಪಿ ರಾಜುಶೆಟ್ಟಿ, ರಾಜು, ತುಳಸಿ ಪ್ರಸಾದ್, ಪಾಂಡು, ಮುರಳಿ, ಎಂಆರ್ಪಿಎಲ್ ಎಂಜಿನಿಯರ್ ಪ್ರಕಾಶ್ ಹಾಗೂ ಹರೀಶ್ ತಲೆಮರೆಸಿಕೊಂಡಿದ್ದಾರೆ. ಮೂಡಿಗೆರೆ ತಾಲೂಕಿನ ಹೆಗ್ಗರವಳ್ಳಿ, ಗೌಡಹಳ್ಳಿ, ಹುರುಡಿ ಮುಂತಾದ ಗ್ರಾಮಗಳಲ್ಲಿ ಈ ತಂಡ ಪೆಟ್ರೋಲ್ ಕಳ್ಳತನ ಮಾಡುತ್ತಿತ್ತು ಎಂದು ಎಸ್ ಐ ಗುರುಪ್ರಸಾದ್ ಹೇಳಿದರು.












Click it and Unblock the Notifications