ಮುಖ್ಯಮಂತ್ರಿ ತವರಲ್ಲಿ ಅರಣ್ಯ ನಾಶ ಅವ್ಯಾಹತ

ಇದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ತವರೂರು. ನಾಡಿನ ಅಸಂಖ್ಯಾತ ಕವಿ, ಸಾಹಿತಿಗಳು, ಹೋರಾಟಗಾರರ ಜನ್ಮಸ್ಥಳ. ಆದರೆ ಶಿವಮೊಗ್ಗದ ಅರಣ್ಯಗಳ ಸ್ಥಿತಿ ನೋಡಿದರೆ ಈಗಿನ ಸುಡು ಬಿಸಿಲಿಗೆ ಕಾರಣೀಭೂತರಾದ ಅರಣ್ಯಾಧಿಕಾರಿಗಳು, ಕಾಡುಗಳ್ಳರ ಸ್ಪಷ್ಟ ಚಿತ್ರಣ ಸಿಗುತ್ತದೆ. ಎಲ್ಲದಕ್ಕೂ ಅಧಿಕಾರಿಗಳೇ ಹೊಣೆ ಎಂದು ಆರೋಪ ಮಾಡಲಾಗದಿದ್ದರೂ ಪ್ರಸ್ತುತ ಸ್ಥಿತಿಗೆ ಕಾಡುಗಳ್ಳ ಅಧಿಕಾರಿಗಳು, ಪ್ರಜೆಗಳು, ಪ್ರಭುಗಳು ಹಾಗೂ ಆಡಳಿತದ ಚಕ್ರವ್ಯೂಹದ ಕದಂಬ ಬಾಹುಗಳ ರುದ್ರ ನರ್ತನ ಕಣ್ಣಿಗೆ ರಾಚುತ್ತದೆ.
ಆಯನೂರು, ಕುಂಸಿ ಗ್ರಾಮಸ್ಥರಿಂದ ಅರಣ್ಯನಾಶದ ಬಗ್ಗೆ ಹಲವು ದೂರುಗಳು ಆಗಾಗ ಬರುತ್ತಿದ್ದರೂ, ಅರಣ್ಯ ಭೂಮಿಯನ್ನು ಬೇಲಿಹಾಕಿ ಸಾಗುವಳಿ ನಡೆಸುತ್ತಿರುವ ಅಕ್ರಮ ಸಾಗುವಳಿದಾರಿಗೆ ಅಡ್ಡಿ ಪಡಿಸುವ ಪ್ರಾಮಾಣಿಕ ಅಧಿಕಾರಿಗಳಿಗೆ ತೊಂದರೆ ಕೊಡಬಾರದು, ಇಲ್ಲಿ ಮನುಷ್ಯನ ಸ್ವಾರ್ಥಕ್ಕಿಂತ ಅರಣ್ಯ ಉಳಿಸಿ ಬೆಳೆಸುವುದು ಮುಖ್ಯ ಎಂದು ಮಾದ್ಯಮದವರು ಸಾಮಾನ್ಯವಾಗಿ ಅರಣ್ಯ ಪ್ರದೇಶದ ಒಳಹೊಕ್ಕು ವರದಿ ಮಾಡಲು ಹಿಂದೇಟು ಹಾಕುತ್ತಾರೆ. ಆದರೆ ಒಳಹೊಕ್ಕು ನೋಡಿದಾಗ ಜನರ ಪಾಲು ಶೇ.10 ಇದ್ದರೆ ಅಧಿಕಾರಿಗಳ ಹಾಗೂ ಮರಗಳ್ಳರ ಲಾಬಿ ಶೇ.90ರಷ್ಟು ಅರಣ್ಯ ಲೂಟಿ ಮಾಡುತ್ತಿದೆ.
ಸಾಮಾಜಿಕ ಅರಣ್ಯೀಕರಣದ ಹೆಸರಿನಲ್ಲಿ ಸರ್ಕಾರದ ಹಣವನ್ನು ಲೂಟಿ ಮಾಡುವ ಪರಿ. ಕಾಡುಗಳ್ಳರಿಗೆ ಬೇಕಾಬಿಟ್ಟಿ ಮರ ಕಡಿತಕ್ಕೆ ಸಹಾಯ. ಅಕ್ರಮವಾಗಿ ಸಾಗಣಿಕೆ, ಶೇಖರಣೆ ಮತ್ತು ಮಾರಾಟ, ಇವೆಲ್ಲಾ ಅವ್ಯಾಹತವಾಗಿ ಆಯನೂರು ಅರಣ್ಯ ವಲಯದಲ್ಲಿ ನಡೆಯುತಿದ್ದು, ಶೇ.50ರಷ್ಟು ಮರಗಳು ನಾಶವಾಗಿದೆ. ಇದಕ್ಕೆಲ್ಲ ಅರಣ್ಯ ಅಧಿಕಾರಿಗಳೇ ಕಾರಣ ಎಂದು ಕುಂಸಿ ಹಾಗೂ ಚೋರಡಿ ಗ್ರಾಮಸ್ಥರು ಆರೋಪಿಸಿದ್ದಾರೆ. ಇದರಲ್ಲಿ ಈಗಿನ ಆಯನೂರು ಅರಣ್ಯ ವಲಯ ಅಧಿಕಾರಿ ರಾಮನಾಯ್ಕ ಪಾಲೂ ಇದೆ ಎಂದು ಆರೋಪಿಸುತ್ತಾರೆ.
ಅಧಿಕಾರಿಯನ್ನೂ ಕೇಳಿದಾಗ, ಇಲ್ಲಿ ನೀವು ನೋಡಿರುವ ಮರಗಳಿಗೆ ಎಲ್ಲಾ ದಾಖಲೆಗಳೂ ಇವೆ. ಲಕ್ಷಾಂತರ ಸಸಿಗಳನ್ನು ಬೆಳೆಸುವಾಗ ಸ್ವಲ್ಪ ಮಟ್ಟಿನ ಸಸಿಗಳು ಒಣಗುವುದು ಸಾಮಾನ್ಯ. ಎಲ್ಲಾ ಕಾನೂನು ಬದ್ದವಾಗಿದೆ. ಅರಣ್ಯ ಭೂಮಿ ವಶಪಡಿಸಲು ಹೋಗಿದ್ದೇ ನಮ್ಮ ಮೇಲಿನ ಅರೋಪ ಬರಲು ಕಾರಣ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಗ್ರಾಮಸ್ಥರು ಮತ್ತು ಅರಣ್ಯಾಧಿಕಾರಿಗಳ ನಡುವಿನ ಸಂಘರ್ಷ ಅರಣ್ಯನಾಶದ ಸಂಚನ್ನು ಬಯಲಿಗೆಳೆದಿದೆ.
ಖಾಸಗಿ ಜಾಗದಲ್ಲೂ ಇರುವ ಬೃಹತ್ ಮರಗಳು ಪಾಣಿಯಲ್ಲಿ ನಮೂದಿಸದೇ ಇದ್ದರೆ ಅದು ಕೂಡಾ ಕೂಡಲೇ ಅಪೋಶನಗೊಳ್ಳುತ್ತವೆ. ಒಟ್ಟಿನಲ್ಲಿ ಇಡೀ ಕುಂಶಿ, ಚೋರಡಿ ಆಯನೂರಿನ ಅರಣ್ಯ ಕಳ್ಳ ಅಧಿಕಾರಿಗಳ ಪಾಲು ಇವಿಷ್ಟು ಗ್ರಾಮಸ್ಥರ ಆರೋಪ. ಇದಕ್ಕೆ ಹಿರಿಯ ಅರಣ್ಯಧಿಕಾರಿಗಳು ಏನ್ನನ್ನುತ್ತಾರೆ?
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications