ಮುಖ್ಯಮಂತ್ರಿ ತವರಲ್ಲಿ ಅರಣ್ಯ ನಾಶ ಅವ್ಯಾಹತ

ಇದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ತವರೂರು. ನಾಡಿನ ಅಸಂಖ್ಯಾತ ಕವಿ, ಸಾಹಿತಿಗಳು, ಹೋರಾಟಗಾರರ ಜನ್ಮಸ್ಥಳ. ಆದರೆ ಶಿವಮೊಗ್ಗದ ಅರಣ್ಯಗಳ ಸ್ಥಿತಿ ನೋಡಿದರೆ ಈಗಿನ ಸುಡು ಬಿಸಿಲಿಗೆ ಕಾರಣೀಭೂತರಾದ ಅರಣ್ಯಾಧಿಕಾರಿಗಳು, ಕಾಡುಗಳ್ಳರ ಸ್ಪಷ್ಟ ಚಿತ್ರಣ ಸಿಗುತ್ತದೆ. ಎಲ್ಲದಕ್ಕೂ ಅಧಿಕಾರಿಗಳೇ ಹೊಣೆ ಎಂದು ಆರೋಪ ಮಾಡಲಾಗದಿದ್ದರೂ ಪ್ರಸ್ತುತ ಸ್ಥಿತಿಗೆ ಕಾಡುಗಳ್ಳ ಅಧಿಕಾರಿಗಳು, ಪ್ರಜೆಗಳು, ಪ್ರಭುಗಳು ಹಾಗೂ ಆಡಳಿತದ ಚಕ್ರವ್ಯೂಹದ ಕದಂಬ ಬಾಹುಗಳ ರುದ್ರ ನರ್ತನ ಕಣ್ಣಿಗೆ ರಾಚುತ್ತದೆ.
ಆಯನೂರು, ಕುಂಸಿ ಗ್ರಾಮಸ್ಥರಿಂದ ಅರಣ್ಯನಾಶದ ಬಗ್ಗೆ ಹಲವು ದೂರುಗಳು ಆಗಾಗ ಬರುತ್ತಿದ್ದರೂ, ಅರಣ್ಯ ಭೂಮಿಯನ್ನು ಬೇಲಿಹಾಕಿ ಸಾಗುವಳಿ ನಡೆಸುತ್ತಿರುವ ಅಕ್ರಮ ಸಾಗುವಳಿದಾರಿಗೆ ಅಡ್ಡಿ ಪಡಿಸುವ ಪ್ರಾಮಾಣಿಕ ಅಧಿಕಾರಿಗಳಿಗೆ ತೊಂದರೆ ಕೊಡಬಾರದು, ಇಲ್ಲಿ ಮನುಷ್ಯನ ಸ್ವಾರ್ಥಕ್ಕಿಂತ ಅರಣ್ಯ ಉಳಿಸಿ ಬೆಳೆಸುವುದು ಮುಖ್ಯ ಎಂದು ಮಾದ್ಯಮದವರು ಸಾಮಾನ್ಯವಾಗಿ ಅರಣ್ಯ ಪ್ರದೇಶದ ಒಳಹೊಕ್ಕು ವರದಿ ಮಾಡಲು ಹಿಂದೇಟು ಹಾಕುತ್ತಾರೆ. ಆದರೆ ಒಳಹೊಕ್ಕು ನೋಡಿದಾಗ ಜನರ ಪಾಲು ಶೇ.10 ಇದ್ದರೆ ಅಧಿಕಾರಿಗಳ ಹಾಗೂ ಮರಗಳ್ಳರ ಲಾಬಿ ಶೇ.90ರಷ್ಟು ಅರಣ್ಯ ಲೂಟಿ ಮಾಡುತ್ತಿದೆ.
ಸಾಮಾಜಿಕ ಅರಣ್ಯೀಕರಣದ ಹೆಸರಿನಲ್ಲಿ ಸರ್ಕಾರದ ಹಣವನ್ನು ಲೂಟಿ ಮಾಡುವ ಪರಿ. ಕಾಡುಗಳ್ಳರಿಗೆ ಬೇಕಾಬಿಟ್ಟಿ ಮರ ಕಡಿತಕ್ಕೆ ಸಹಾಯ. ಅಕ್ರಮವಾಗಿ ಸಾಗಣಿಕೆ, ಶೇಖರಣೆ ಮತ್ತು ಮಾರಾಟ, ಇವೆಲ್ಲಾ ಅವ್ಯಾಹತವಾಗಿ ಆಯನೂರು ಅರಣ್ಯ ವಲಯದಲ್ಲಿ ನಡೆಯುತಿದ್ದು, ಶೇ.50ರಷ್ಟು ಮರಗಳು ನಾಶವಾಗಿದೆ. ಇದಕ್ಕೆಲ್ಲ ಅರಣ್ಯ ಅಧಿಕಾರಿಗಳೇ ಕಾರಣ ಎಂದು ಕುಂಸಿ ಹಾಗೂ ಚೋರಡಿ ಗ್ರಾಮಸ್ಥರು ಆರೋಪಿಸಿದ್ದಾರೆ. ಇದರಲ್ಲಿ ಈಗಿನ ಆಯನೂರು ಅರಣ್ಯ ವಲಯ ಅಧಿಕಾರಿ ರಾಮನಾಯ್ಕ ಪಾಲೂ ಇದೆ ಎಂದು ಆರೋಪಿಸುತ್ತಾರೆ.
ಅಧಿಕಾರಿಯನ್ನೂ ಕೇಳಿದಾಗ, ಇಲ್ಲಿ ನೀವು ನೋಡಿರುವ ಮರಗಳಿಗೆ ಎಲ್ಲಾ ದಾಖಲೆಗಳೂ ಇವೆ. ಲಕ್ಷಾಂತರ ಸಸಿಗಳನ್ನು ಬೆಳೆಸುವಾಗ ಸ್ವಲ್ಪ ಮಟ್ಟಿನ ಸಸಿಗಳು ಒಣಗುವುದು ಸಾಮಾನ್ಯ. ಎಲ್ಲಾ ಕಾನೂನು ಬದ್ದವಾಗಿದೆ. ಅರಣ್ಯ ಭೂಮಿ ವಶಪಡಿಸಲು ಹೋಗಿದ್ದೇ ನಮ್ಮ ಮೇಲಿನ ಅರೋಪ ಬರಲು ಕಾರಣ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ. ಒಟ್ಟಿನಲ್ಲಿ ಗ್ರಾಮಸ್ಥರು ಮತ್ತು ಅರಣ್ಯಾಧಿಕಾರಿಗಳ ನಡುವಿನ ಸಂಘರ್ಷ ಅರಣ್ಯನಾಶದ ಸಂಚನ್ನು ಬಯಲಿಗೆಳೆದಿದೆ.
ಖಾಸಗಿ ಜಾಗದಲ್ಲೂ ಇರುವ ಬೃಹತ್ ಮರಗಳು ಪಾಣಿಯಲ್ಲಿ ನಮೂದಿಸದೇ ಇದ್ದರೆ ಅದು ಕೂಡಾ ಕೂಡಲೇ ಅಪೋಶನಗೊಳ್ಳುತ್ತವೆ. ಒಟ್ಟಿನಲ್ಲಿ ಇಡೀ ಕುಂಶಿ, ಚೋರಡಿ ಆಯನೂರಿನ ಅರಣ್ಯ ಕಳ್ಳ ಅಧಿಕಾರಿಗಳ ಪಾಲು ಇವಿಷ್ಟು ಗ್ರಾಮಸ್ಥರ ಆರೋಪ. ಇದಕ್ಕೆ ಹಿರಿಯ ಅರಣ್ಯಧಿಕಾರಿಗಳು ಏನ್ನನ್ನುತ್ತಾರೆ?
-
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Bengaluru-Mysuru expressway: ಬೆಂಗಳೂರು-ಮೈಸೂರು ಎಕ್ಸ್ಪ್ರೆಸ್ವೇ ಪ್ರಯಾಣ ಮತ್ತೆ ದುಬಾರಿ: ಏಪ್ರಿಲ್ 1ರಿಂದ ಹೊಸ ಟೋಲ್ ದರ -
SSLC ಹಿಂದಿ ಪರೀಕ್ಷೆ ಮುಕ್ತಾಯ: ಪ್ರಶ್ನೆಪತ್ರಿಕೆ ಹೇಗಿತ್ತು? ಹೊಸ ನಿಯಮಗಳೇನು? ಇಲ್ಲಿದೆ ಸಂಪೂರ್ಣ ವಿಶ್ಲೇಷಣೆ -
ತ್ರಿಭಾಷಾ ಸೂತ್ರ vs ದ್ವಿಭಾಷಾ ಮಾದರಿ: ಹಿಂದಿ ಕಲಿಕೆಯ ಲಾಭ-ನಷ್ಟಗಳ ವಿಶ್ಲೇಷಣೆ: ಡಾ. ಪುರುಷೋತ್ತಮ ಬಿಳಿಮಲೆ ಬರಹ -
Bengaluru Kannada: ಉತ್ತರ ಕರ್ನಾಟಕ, ಕರಾವಳಿಯಲ್ಲಿ ಇಲ್ಲದ "ಕನ್ನಡ" ಸಮಸ್ಯೆ ಬೆಂಗಳೂರಲ್ಲೇಕೆ: ಅಶ್ವಿನಿ ಬರಹ -
Good Friday: ಗುಡ್ ಫ್ರೈಡೇ - ಈಸ್ಟರ್ ರಜೆ ಸ್ಪೆಷಲ್: ಬೆಂಗಳೂರು – ಮಡಗಾಂವ್ ನಡುವೆ ವಿಶೇಷ ರೈಲು ಸೇವೆ ಆರಂಭ -
Viral Video: ಹುಡುಗಿ ಪ್ರೀತಿಗೆ ಒಪ್ಪಿಕೊಂಡಳು ಆದ್ರೆ ರಿಂಗೇ ಮಿಸ್ ಆಯ್ತು: MI ಮ್ಯಾಚ್ನಲ್ಲೊಂದು ಸ್ವಾರಸ್ಯಕರ ಘಟನೆ -
Bagalkote: ಮನೆಗೆ ಯಾರನ್ನೂ ಸೇರಿಸದ ವೀರಣ್ಣ ಚರಂತಿಮಠ ಶಾಸಕರಾಗಲೂ ಲಾಯಕ್ಕಾ?: ಸಿದ್ದರಾಮಯ್ಯ -
Price Hike: ಏಪ್ರಿಲ್ 1ರಿಂದ ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ವಿದ್ಯುತ್, ನೀರು, ಟೋಲ್ ದರ ಸೇರಿ ಏನೆಲ್ಲ ದುಬಾರಿ? -
ಮಾರ್ಚ್ 31ರಂದು ಬೆಂಗಳೂರು ಸೇರಿ ರಾಜ್ಯದ ಇತರ ಜಿಲ್ಲೆಗಳಲ್ಲಿ ಪೆಟ್ರೋಲ್, ಡೀಸೆಲ್ ದರ ಎಷ್ಟಿದೆ ತಿಳಿಯಿರಿ -
Gold Price: ದಿಢೀರ್ ಏರಿಕೆ ಕಂಡ ಚಿನ್ನದ ದರ: ಪ್ರತಿ ಗ್ರಾಂಗೆ 14,929 ರೂಪಾಯಿ, ಕೆ.ಜಿಗೆ 2.5 ಲಕ್ಷ ರೂ. ತಲುಪಿದ ಬೆಳ್ಳಿ -
Kannada: ಕರ್ನಾಟಕದಲ್ಲಿರುವ ಬ್ಯಾಂಕ್ಗಳಲ್ಲಿ ಸ್ಪಷ್ಟ ಕನ್ನಡ; ತುಳು, ಕೊಂಕಣಿ ಭಾಷೆಯ ಕಲರವ ಈಗ ಉಳಿದಿಲ್ಲ: ಕವಿರಾಜ್












Click it and Unblock the Notifications